ಮೃತನ ಕುಟುಂಬಕ್ಕೆ ದರ್ಶನ್ ಪರ ದಿನಕರ್ ತೂಗುದೀಪ ಸಾಂತ್ವನ

By Harshitha

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ದಿನ (ಫೆಬ್ರವರಿ 16) ಅವರ ಅಪ್ಪಟ ಅಭಿಮಾನಿ ಮಧು ಕುಮಾರ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಿಮಗೆಲ್ಲಾ ಗೊತ್ತಿರಬಹುದು.

ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಗೆ ಮುಂಜಾನೆಯೇ ತಮ್ಮ ಗೆಳೆಯ ಸುಧಾಂಶು ಜೊತೆ ತೆರಳಿದ್ದ ಅಭಿಮಾನಿ ಮಧು ಕುಮಾರ್ ಬಳಿಕ ತಮ್ಮ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಕೊನೆಯುಸಿರೆಳೆದರು.[ನಟ ದರ್ಶನ್ ಹುಟ್ಟುಹಬ್ಬದ ದಿನ ಎಂತಹ ದುರಂತ]

Dinakar Toogudeepa visits Darshan's deceased fan house

ಬೆಂಗಳೂರಿನ ಥಣಿಸಂದ್ರ ನಿವಾಸಿ ಯುವಕ ಮಧು ಕುಮಾರ್, ರಾಜರಾಜೇಶ್ವರಿ ನಗರದಿಂದ ನಾಯಂಡಹಳ್ಳಿ ಮೇಲ್ಸೇತುವೆ ಮೇಲೆ ಚಲಿಸುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪಿದರು.

ಈ ವಿಷಯ ತಿಳಿದ ದರ್ಶನ್ ಸಹೋದರ ದಿನಕರ್ ತೂಗುದೀಪ ಇಂದು ಥಣಿಸಂದ್ರದಲ್ಲಿರುವ ಮಧು ಕುಮಾರ್ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

Dinakar Toogudeepa visits Darshan's deceased fan house

'ಜಗ್ಗು ದಾದಾ' ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಕಾರಣ ದಿನಕರ್ ಜೊತೆ ದರ್ಶನ್ ಭೇಟಿ ನೀಡಲಾಗಲಿಲ್ಲ. ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ಮಧು ಕುಮಾರ್ ಮನೆಗೆ ದರ್ಶನ್ ಇಂದು ಅಥವಾ ನಾಳೆ ತೆರಳುವ ಸಾಧ್ಯತೆ ಇದೆ.

More from Filmibeat

English summary
Producer, Director Dinakar Toogudeepa visited the house of Madhu Kumar, hardcore fan of Darshan, who had died in a accident on Kannada Actor Darshan's birthday (February 16th). Dinakar Toogudeepa offered condolences to Madhu Kumar family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X