Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
54 ವರ್ಷಗಳ ಬಳಿಕ ಮತ್ತೆ ಸೆಟ್ಟೇರಲಿದೆ 'ಜೇಡರಬಲೆ': ಆದ್ರೀಗ ಅಣ್ಣಾವ್ರ ಸಿನಿಮಾ ಅಲ್ಲ
'ಜೇಡರ ಬಲೆ' ಅಂದ್ಕೂಡಲೇ ಮೊದಲ ನೆನಪಾಗೋದು ಡಾ.ರಾಜ್ಕುಮಾರ್. ಇದು ಕನ್ನಡದ ಮೊದಲ ಬಾಂಡ್ ಸಿನಿಮಾ. 1968ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಅಂದಿನ ಸಿನಿಪ್ರಿಯರಿಗೆ ಕಿಕ್ ಕೊಟ್ಟಿತ್ತು. ಬಾಂಡ್ ಸಿನಿಮಾ ಅನ್ನೋದು ಕೇವಲ ಇಂಗ್ಲಿಪ್ ಚಿತ್ರಗಳನ್ನು ನೋಡೋರಿಗೆ ಅನ್ನೋ ಕಾಲದಲ್ಲಿ ಕನ್ನಡಿಗರಿಗೆ ಬಾಂಡ್ ಆಗಿದ್ದು ಡಾ. ರಾಜ್ಕುಮಾರ್. ಆ ಸಿನಿಮಾನೇ 'ಜೇಡರಬಲೆ'
ಇದೇ 'ಜೇಡರಬಲೆ' ಸಿನಿಮಾದಿಂದ ಸ್ಯಾಂಡಲ್ವುಡ್ನಲ್ಲೂ ಬಾಂಡ್ ಸಿನಿಮಾಗಳು ಬರೋಕೆ ಶುರುವಾಗಿದ್ದವು. ಕನ್ನಡದಲ್ಲಿ ಬಾಂಡ್ ಚಿತ್ರಗಳಿಗೆ ಅಡಿಪಾಯ ಹಾಕಿಕೊಟ್ಟಿದ್ದೇ ದೊರೆ ಮತ್ತು ಭಗವಾನ್. 1968ರ ವೇಳೆ ಸಾಮಾಜಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳನ್ನೇ ನೋಡುತ್ತಿದ್ದ ಜನರಿಗೆ ಬಾಂಡ್ ಸಿನಿಮಾ ಕೊಟ್ಟಿದ್ದು ದೊರೆ-ಭಗವಾನ್. ಈಗ ಟೈಟಲ್ ಅನ್ನು ಇಟ್ಕೊಂಡು ಮತ್ತೊಂದು ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ.
ಕನ್ನಡದಲ್ಲಿ ಮತ್ತೆ ಜೇಡರ ಬಲೆ
ಅತೀ ಶೀಘ್ರದಲ್ಲಿಯೇ ಮತ್ತೆ 'ಜೇಡರಬಲೆ' ಶುರುವಾಗಲಿದೆ. ಸಸ್ಪೆನ್ಸ್ ಸ್ಟೋರಿಯ ಸಿನಿಮಾಗೆ 'ಜೇಡರ ಬಲೆ' ಅಂತ ಸಿನಿಮಾ ಮಾಡುವುದಕ್ಕೆ ಚಿತ್ರತಂಡವೊಂದು ರೆಡಿಯಾಗಿದೆ. ಈಗಾಗಲೇ ಸಿನಿಮಾ ಮಾಡುವ ಬಗ್ಗೆ ಘೋಷಣೆಯನ್ನೂ ಮಾಡಲಾಗಿದೆ.
ಸುಮಾರು 54 ವರ್ಷಗಳ ಬಳಿಕ ಮತ್ತೆ 'ಜೇಡರಬಲೆ' ಟೈಟಲ್ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಇಷ್ಟು ದಿನ ಅಣ್ಣಾವ್ರು ಅಭಿನಯಿಸಿದ ಈ ಟೈಟಲ್ ಅನ್ನು ಇಟ್ಟು ಸಿನಿಮಾ ಮಾಡುವುದಕ್ಕೆ ಯಾರೂ ಮುಂದೆ ಬಂದಿರಲಿಲ್ಲ. ಈಗ ಅದೇ ಟೈಟಲ್ ಇಟ್ಟು ಮಾಡಲು ಯುವಕರ ತಂಡವೊಂದು ಸಜ್ಜಾಗಿ ನಿಂತಿದೆ.
ಅಣ್ಣಾವ್ರ ಅಭಿಮಾನಿಯಿಂದ 'ಜೇಡರ ಬಲೆ'
ಅಂದ್ಹಾಗೆ 'ಜೇಡರ ಬಲೆ' ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿರೋದು ವಿಕಾಸ್ ಗೌಡ. ಉದ್ಯಮಿಯೂ ಆಗಿರುವ ವಿಕಾಸ್ ಗೌಡ ಈ ಸಿನಿಮಾ ನಿರ್ಮಿಸಲು ಮುಂದೆ ಬಂದಿದ್ದರೆ, ಈಗಾಗಲೇ ' ಮಂಗಳವಾರ ರಜಾದಿನ' ಸಿನಿಮಾ ನಿರ್ದೇಶಿಸಿರೋ ಯುವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ನಿರ್ಮಾಪಕ ವಿಕಾಸ್ ಗೌಡ ಕೂಡ ಅಣ್ಣಾವ್ರ ಅಭಿಮಾನಿ. ಡಾ.ರಾಜ್ಕುಮಾರ್ ಸಿನಿಮಾಗಳನ್ನು ಇಷ್ಟ ಪಡುವ ನಿರ್ಮಾಪಕ ತಮ್ಮ ಸಿನಿಮಾಗೆ 'ಜೇಡರಬಲೆ' ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಕೂಡ ಸಸ್ಪೆನ್ಸ್ ಅಗಿರುವುದರಿಂದ 'ಜೇಡರಬಲೆ' ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ನಲ್ಲಿ ಶೂಟಿಂಗ್ ಶುರು
ಹೊಸ 'ಜೇಡರ ಬಲೆ' ಸಿನಿಮಾವನ್ನು ಮುಂದಿನ ತಿಂಗಳಿನಿಂದ ಚಿತ್ರೀಕರಣ ಮಾಡಲು ನಿರ್ಮಾಪಕ ವಿಕಾಸ್ ಗೌಡ ನಿರ್ಧರಿಸಿದ್ದಾರೆ. ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಸದ್ಯ ಟೈಟಲ್ ರಿವೀಲ್ ಆಗಿದ್ದು ಮುಂದಿನ ದಿನಗಳಲ್ಲಿ ಸಿನಿಮಾದ ಸ್ಟಾರ್ ಕಾಸ್ಟ್ ಅನ್ನು ರಿವೀಲ್ ಮಾಡಲಿದ್ದಾರೆ.
ಅಣ್ಣಾವ್ರು ನಟಿಸಿದ 'ಜೇಡರ ಬಲೆ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಅದೇ ಹೆಸರಿನ ಸಿನಿಮಾ ನಿರ್ಮಾಣ ಆಗಿದ್ದು, ಪ್ರೇಕ್ಷಕರು ಮೆಚ್ಚುಗೆ ಆಗುತ್ತಾ? ಹೊಸ ಇತಿಹಾಸವನ್ನು ಸೃಷ್ಟಿಸುತ್ತಾ ಅನ್ನೋದು ಸದ್ಯದ ಮಟ್ಟಿಗೆ ಯಕ್ಷ ಪ್ರಶ್ನೆ.