ಕೊನೆಗೂ ದರ್ಶನ್ ಭೇಟಿ ಮಾಡಿದ ಸಾಧು ಕೋಕಿಲಾ; ಜೈಲಿನೊಳಗೆ ಹೇಗಿದ್ದಾರೆ ದಾಸ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಈ ಕಾರಣಕ್ಕೆ ಪರಪ್ಪನ ಅಗ್ರಹಾರ ಜೈಲ್‌ಗೆ ವಿಸಿಟ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ಕನ್ನಡ ಚಿತ್ರರಂಗದಿದ ಒಬ್ಬರಲ್ಲ ಒಬ್ಬರು ಭೇಟಿ ಮಾಡುತ್ತಲೇ ಇದ್ದಾರೆ. ದರ್ಶನ್ ಆತ್ಮೀಯರಾಗಿರುವವರು ಭೇಟಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಕನ್ನಡ ಚಿತ್ರರಂಗದ ಹಾಸ್ಯ ನಟ ಸಾಧು ಕೋಕಿಲಾ ಭೇಟಿ ಮಾಡುವುದಕ್ಕೆ ಬಂದಿದ್ದರು. ಆದರೆ, ಆ ವೇಳೆ ದರ್ಶನ್ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಸಂಬಂಧ ಇಂದು (ಜುಲೈ 25) ಮತ್ತೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ, ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

Finally Sadhu Kokila met Darshan in Parappana Agrahara jail

ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಸಾಧು ಕೋಕಿಲಾ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಅವರನ್ನು ಮಾತಾಡಿಸಿಕೊಂಡು ಬಂದಿದ್ದು, ನೋಡಿ ಸಮಾಧಾನ ಆಯ್ತು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಇವತ್ತು ಭೇಟಿ ಮಾಡಿದ್ವಿ. ಆರಾಮಾಗಿ ಇದ್ದಾರೆ. ಬುಕ್ಸ್ ಓದಿಕೊಂಡು ಕೂಲ್ ಆಗಿ ಆರಾಮಾಗಿ ಇದ್ದಾರೆ. ನೋಡಿ ನನಗೆ ನೆಮ್ಮದಿ ಸಿಕ್ಕಿತು. ಮೆಜೆಸ್ಟಿಕ್ ಮೊದಲನೇ ಸಿನಿಮಾದಿಂದ ನನ್ನ ಜೊತೆಗೆ ಇದ್ದಾರೆ. ತುಂಬಾ ಆತ್ಮೀಯತೆಯಿಂದ ದರ್ಶನ್ ಏನು ಅಂತ ಚೆನ್ನಾಗಿ ಗೊತ್ತು. ಬ್ರದರ್ ಆಗಿ ನಾನು ಭೇಟಿ ಮಾಡಿದ್ದೇನೆ" ಎಂದು ದರ್ಶನ್ ಹೇಳಿದ್ದಾರೆ.

More from Filmibeat

English summary
Sadhu Kokila met Darshan in Jail:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X