"ರಾಜಾಹುಲಿ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಾಗ ನನಗೆ ಎರಡು ಕೋಡು ಬಂದು ಬಿಡ್ತು"; ಗುರು ದೇಶಪಾಂಡೆ
ಕಳೆದ ಕೆಲವು ದಿನಗಳಿಗೆ ಗುರು ದೇಶಪಾಂಡೆ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಇತ್ತೀಚೆಗೆ 'ಲವ್ ಮಾಕ್ಟೇಲ್ 3' ಸಿನಿಮಾದ ಕಥೆ ಕದ್ದಿದ್ದಾರೆಂದು ಡಾರ್ಲಿಂಗ್ ಕೃಷ್ಣ ವಿರುದ್ಧ ಗುರು ದೇಶಪಾಂಡೆ ತಿರುಗಿಬಿದ್ದಿದ್ದರು. ಒಂದಿಷ್ಟು ದಿನ ಡಾರ್ಲಿಂಗ್ ಕೃಷ್ಣ ಹಾಗೂ ಗುರು ದೇಶಪಾಂಡೆ ನಡುವೆ ಜಟಾಪಟಿ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಈ ವಿವಾದದ ಹಿಂದೇನೆ ಈಗ ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಹೊರಟಿದ್ದಾರೆ. ಅದುವೇ 'ರಾಮರಸ'.
ಗುರು ದೇಶಪಾಂಡೆ 'ರಾಮರಸ' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎಂಬಿ ಗಿರಿರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್ ಹಾಗೂ ಶರಣ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರಜ್ವಲ್ ದೇವರಾಜ್ ಫಸ್ಟ್ ಲುಕ್ ಕುತೂಹಲವನ್ನು ಕೆರಳಿಸಿದೆ.

'ರಾಮರಸ'ದ ಈ ಇವೆಂಟ್ನಲ್ಲಿ ಗುರು ದೇಶಪಾಂಡೆ ತಮ್ಮ ಯಶಸ್ಸಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ 'ರಾಜಾಹುಲಿ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ತನಗೆ ಎರಡು ಕೊಂಬು ಬಂದಿತ್ತು ಎಂದು ಹೇಳಿಕೊಂಡಿದ್ದಾರೆ. ಸಕ್ಸಸ್ಫುಲ್ ಆಗಿ ಸಾಗುತ್ತಿದ್ದ ಸಿನಿಮಾ ಜರ್ನಿಯಲ್ಲಿ ಡೌನ್ ಫಾಲ್ ಆಗಿದ್ದು ಎಲ್ಲಿಂದ? ಯಾಕಾಯ್ತು? ಅನ್ನೋದನ್ನು ಇದೇ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.
"2013, ನವೆಂಬರ್ 1 ರಂದು ರಾಜಾಹುಲಿ ಅಂತ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟೆ. ರಾಜಾಹುಲಿ ಸಿನಿಮಾಗಿಂತ ಮೊದಲೇ ನಾನು ವಾರಸ್ದಾರ ಮೂಲಕ ಡೈರೆಕ್ಟರ್ ಆಗಿದ್ದೆ. ಲೈಫ್ ನಡೀತಾ ಇತ್ತು. ಯಾವಾಗ ರಾಜಾಹುಲಿ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಾಗ ನನಗೆ ಎರಡು ಕೊಂಡು ಬಂದು ಬಿಡ್ತು." ಎಂದು ಗುರು ದೇಶಪಾಂಡೆ ಹೇಳಿದ್ದಾರೆ.


Click it and Unblock the Notifications











