ಗಿರೀಶ್ ಕಾರ್ನಾಡ್ ನಿಧನಕ್ಕೆ ಕಮಲ್ ಹಾಸನ್ ಸಂತಾಪ
Recommended Video
ಜ್ಞಾನಪೀಠ ಪುರಸ್ಕೃತ ಸಾಹಿತಿ, ನಟ, ನಾಟಕಗಾರ, ನಿರ್ದೇಶಕ ಗಿರೀಶ್ ಕಾರ್ನಾಡ್ ಇಂದು ಬೆಳಗ್ಗೆ(ಜೂನ್ 10) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡ್ ಇಂದು ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಾರ್ನಾಡ್ ನಿಧನಕ್ಕೆ ಅನೇಕ ಗಣ್ಯರು ಚಿತ್ರರಂಗ, ರಾಜಕೀಯ ಸಾಹಿತ್ಯ ಲೋಕದ ಗಣ್ಯರು ಕಂಬನಿ ಮಿಡಿದಿದ್ದಾರೆ. ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಕಾರ್ನಾಡ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಗಿರೀಶ್ ಕಾರ್ನಾಡ್ ಬಗ್ಗೆ ಕಮಲ್ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಗಿರೀಶ್ ಕಾರ್ನಾಡ್ ಅವರ ಬರಹಗಳು ವಿಸ್ಮಯ ಮತ್ತು ನನಗೆ ಸ್ಫೂರ್ತಿ ನೀಡಿವೆ. ಅವರ ಬರಹಗಳಿಂದ ಪ್ರೇರಣೆ ಪಡೆದ ಅನೇಕ ಅಭಿಮಾನಿಗಳು ಮತ್ತು ಬರಹಗಾರಿಗೆ ಅವರ ಅಗಲಿಕೆ ನಷ್ಟವೊಂಟುಮಾಡಿದೆ.

ಕಮಲ್ ಹಾಸನ್ ಮತ್ತು ಗಿರೀಶ್ ಕಾರ್ನಾಡ್ ಹೇ ರಾಮ್ ಮತ್ತು ಗುಣ ಸಿನಿಮಾದಲ್ಲಿ ಒಟ್ಟಿಗೆ ಕೆಲಸಮಾಡಿದ್ದಾರೆ. ಕಮಲ್ ಹಾಸನ್ ನಿರ್ದೇಶನ ಮತ್ತು ನಟನೆ ಮಾಡಿರು 'ಹೇ ರಾಮ್' ಸಿನಿಮಾದಲ್ಲಿ ಕಾರ್ನಾಡ್ ಉಪ್ಪಿಲ್ಲಿ ಐಯಂಗರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಗುಣ' ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ಮಿಂಚಿದ್ದರು.


Click it and Unblock the Notifications











