Don't Miss!
- News Namma Metro: ಬೆಂಗಳೂರಿನ ಮತದಾರರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ನಿರ್ದೇಶಕರ ತಮಿಳು ಚಿತ್ರ 'ಉತ್ತಮ ವಿಲನ್'ಗೆ, 5 ಪ್ರಶಸ್ತಿ..!
ಕನ್ನಡದ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಆಕ್ಷನ್-ಕಟ್ ಹೇಳಿರುವ ತಮಿಳು ಚಿತ್ರ 'ಉತ್ತಮ ವಿಲನ್' ಲಾಸ್ ಏಂಜಲೀಸ್ ಸ್ವತಂತ್ರ್ಯ ಚಿತ್ರೋತ್ಸವದಲ್ಲಿ (ಎಲ್. ಎ.ಐ.ಎಫ್.ಎಫ್.ಎ) ಭರ್ಜರಿ 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
'ಅತ್ಯುತ್ತಮ ಚಿತ್ರ', 'ಅತ್ಯುತ್ತಮ ನಟ'(ಕಮಲ್ ಹಾಸನ್), 'ಅತ್ಯುತ್ತಮ ಸಂಗೀತ'(ಗಿಬ್ರಾನ್), 'ಅತ್ಯುತ್ತಮ ಹಾಡು', ಮತ್ತು 'ಅತ್ಯುತ್ತಮ ಧ್ವನಿಗ್ರಹಣ' (ಕುನಾಲ್ ರಾಜನ್), ಪ್ರಶಸ್ತಿಗಳನ್ನು ತಮಿಳು ಚಿತ್ರ 'ಉತ್ತಮ ವಿಲನ್' ತನ್ನ ಮುಡಿಗೇರಿಸಿಕೊಂಡಿದೆ. ಜೊತೆಗೆ ವಿಶೇಷವಾಗಿ ಈ ಚಿತ್ರದ ಸಂಗೀತ ನಿರ್ದೇಶನಕ್ಕೆ ರಷ್ಯನ್ ಚಿತ್ರೋತ್ಸವದಲ್ಲೂ ಪ್ರಶಸ್ತಿ ದೊರಕಿದೆ.
ಕನ್ನಡದ ಖ್ಯಾತ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ತಮ್ಮ ಕುಚಿಕು ಗೆಳೆಯ ನಟ ಕಮಲ್ ಹಾಸನ್ ಅವರಿಗಾಗಿಯೇ 'ಉತ್ತಮ ವಿಲನ್' ಎನ್ನುವ ವಿಭಿನ್ನ ಸಿನಿಮಾವನ್ನು ತಮಿಳು ಭಾಷೆಯಲ್ಲಿ ತಯಾರು ಮಾಡಿದ್ದರು.
'ಈ ಚಿತ್ರವನ್ನು ನಾವೆಲ್ಲ ಶ್ರದ್ದೆಯಿಂದ ಮಾಡಿದ್ದೆವು, ಆದರೆ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಾಗ ಎಲ್ಲರೂ ಬೇಸರಗೊಂಡಿದ್ದೆವು. ಆದರೆ ನಾವು ಒಂದು ಒಳ್ಳೆ ಚಿತ್ರವನ್ನು ಮಾಡಿದ್ದೆವು, ಯಾವುದೇ ಫಾರ್ಮುಲಾಗಳನ್ನು ನಂಬದೇ ಮಾಡಿದ ಅಪ್ಪಟ ಚಿತ್ರ ಇದು.
ಆದರೆ ಆ ಕೆಲಸ ಇವಾಗ ಫಲ ಕೊಟ್ಟಿದೆ. ಚಿತ್ರೋತ್ಸವದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದನ್ನು ಕೇಳಿ ಸಂತೋಷಪಟ್ಟೆ. ಕಮಲ್ ಅವರು ಮೆಸೇಜ್ ಕಳಿಸಿ ಖುಷಿ ಹಂಚಿಕೊಂಡರು. ಕುನಾಲ್ ಅವರು ಈ ಎಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಎಂದು ರಮೇಶ್ ಅರವಿಂದ್ ಅವರು ಸಂಭ್ರಮ ಹಂಚಿಕೊಂಡಿದ್ದಾರೆ.