Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಹತ್ಯೆ ಬಗ್ಗೆ ನಟ ಜಗ್ಗೇಶ್ ಏನು ಹೇಳಿದರು ಗೊತ್ತಾ.?
ಸದ್ಯಕ್ಕೆ ದೇಶದೆಲ್ಲೆಡೆ ಗೋಹತ್ಯೆ ಕುರಿತು ಚರ್ಚೆ ನಡೆಯುತ್ತಿದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ಕಿನಲ್ಲೂ ಕೂಡ ಇದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಲವು ಸೆಲಿಬ್ರಿಟಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು.
ಅರೋನ್ ಅಬ್ರಹಾಂ ಎನ್ನುವರು ''ಮತ್ತೊಬ್ಬರ ಆಹಾರಪದ್ಧತಿಯನ್ನು ನೆಪವಾಗಿಟ್ಟುಕೊಂಡು ಮತ್ತೊಬ್ಬರನ್ನು ಏಕೆ ನೋಯಿಸುತ್ತೀರಿ? ಸತ್ತ ಹಸುವಿನಿಂದ ತಯಾರಿಸಿದ ಪದಾರ್ಥಗಳನ್ನು ನಿಮಗೆ ಬಳಸದೆ ಇರಲು ಸಾಧ್ಯವೇ?'' ಎಂದು ಟ್ವೀಟ್ ಮಾಡಿದ್ದರು. [ಬಾಂಬ್ ಹಾಕಿದ್ದು ಬುಲೆಟ್ ಪ್ರಕಾಶ್, ಖಡಕ್ ಉತ್ತರ ಕೊಟ್ಟಿದ್ದು ಜಗ್ಗೇಶ್.!]
ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, "ಸಾಹೇಬ್ರೆ, ತಾಳ್ಮೆಯಿರಲಿ. ಬಹುಸಂಖ್ಯಾತ ಭಾವನೆಗೆ ಪ್ರಶ್ನೆ ಬೇಡ. ನಮ್ಮದು ಶಾಂತಿ ಸಂಸ್ಕೃತಿ ಮೂಲಮಂತ್ರ ಬೋಧಿಸಿದ ಸನಾತನದೇಶ. ನಮ್ಮ ನಡೆ ನಮ್ಮ ಸಂಸ್ಕೃತಿಯ ಬಗ್ಗೆ ವಿಶ್ವ ಮೆಚ್ಚಿದೆ" ಎಂದು ಹೇಳಿದ್ದಾರೆ.
ಸಾಹೇಬ್ರೆ ತಾಳ್ಮಯಿರಲಿ!ಬಹುಸಂಖ್ಯಾತ ಭಾವನೆಗೆ ಪ್ರಶ್ನೆ ಬೇಡ!ನಮ್ಮದು ಶಾಂತಿ ಸಂಸ್ಕೃತಿ ಮೂಲಮಂತ್ರ ಭೋಧಿಸಿದ ಸನಾತನದೇಶ!ನಮ್ಮನಡೆ ನಮ್ಮಸಂಸ್ಕೃತಿಯ ಬಗ್ಗೆ ವಿಶ್ವಮೆಚ್ಚಿದೆ https://t.co/V04VWEduj8
— ನವರಸನಾಯಕ ಜಗ್ಗೇಶ್ (@Jaggesh2) May 29, 2017
ಇದರ ಜೊತೆ ಮತ್ತೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್, ''ಪ್ರಚಾರ ಪ್ರಿಯರು! ಜನ್ಮಕೊಟ್ಟವರನ್ನೇ ಕೊಲ್ಲೋ ಕಲಿಗಾಲದಲ್ಲಿ ಹಾಲು ಕೊಡೋ ಹಸು ಯಾವ ಲೆಕ್ಕ ಅವರಿಗೆ. ಪಾಪದಕೊಡ ತುಂಬಲಿ. ಬೇಡಿದರು ಅಂತವರ ರಕ್ಷಿಸಲು ಯಾರು ಇರೋಲ್ಲಾ. ಪಾಪಿಚಿರಾಯು!'' ಎಂದು ಭಾವುಕರಾಗಿ ಉತ್ತರಿಸಿದ್ದಾರೆ.[ಗೋಹತ್ಯೆ ಮಾಡುವುದು ಕೆಂಪೇಗೌಡರನ್ನು ಅವಮಾನಿಸಿದಂತೆ]
ಪ್ರಚಾರಪ್ರೀಯರು! ಜನ್ಮಕೊಟ್ಟವರ್ನ್ನೆ ಕೊಲ್ಲೋ ಕಲಿಗಾಲದಲ್ಲಿ ಹಾಲುಕೊಡೋ ಹಸುಯಾವಲೆಕ್ಕ ಅವರಿಗೆ!ಪಾಪದಕೊಡ ತುಂಬಲಿ ಬೇಡಿದರು ಅಂತವರ ರಕ್ಷಿಸಲು ಯಾರುಇರೋಲ್ಲಾ!ಪಾಪಿಚಿರಾಯು! https://t.co/7eeO2oGrcM
— ನವರಸನಾಯಕ ಜಗ್ಗೇಶ್ (@Jaggesh2) May 29, 2017
ಮೊದಲಿನಿಂದಲೂ ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಟ್ವೀಟ್ ಮೂಲಕ ಉತ್ತರಿಸುತ್ತಿರುವ ಜಗ್ಗೇಶ್, ಈಗ ಗೋಹತ್ಯೆಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಇದರ ಬಗ್ಗೆ ಉಳಿದ ಸೆಲಿಬ್ರಿಟಿಗಳು ಏನು ಹೇಳುತ್ತಾರೋ ಕಾಡು ನೋಡಬೇಕು...