Don't Miss!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂದನ್ ಸಾವಿಗೆ ಕಂಬನಿ ಮಿಡಿದ ಚಿತ್ರರಂಗ
Recommended Video
ಕನ್ನಡ ಟಿವಿ ನಿರೂಪಕ ಚಂದನ್ ಸಾವು ಸಾಕಷ್ಟು ಜನರಿಗೆ ನೋವು ತಂದಿದೆ. ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದ ಚಂದನ್ ಬಹುತೇಕ ಸ್ಟಾರ್ ಕಲಾವಿದರ ಜೊತೆಯಲ್ಲಿ ಉತ್ತಮ ಒಡನಾಟ ಹೊಂದಿದ್ದರು.
ಕನ್ನಡ ಸಿನಿಮಾ ಹಾಗೂ ಕನ್ನಡ ಭಾಷೆಯನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದ ಆಂಕರ್ ಚಂದನ್ ಅಣ್ಣಾವ್ರ ಅಪ್ಪಟ ಅಭಿಮಾನಿ ಆಗಿದ್ದರು. ಯಾವುದೇ ಸಣ್ಣ ಸಿನಿಮಾ ಕಾರ್ಯಕ್ರಮ ನಡೆಸಿಕೊಡಬೇಕು ಎಂದರು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದರು.
ಚಂದನ್ ನಿರೂಪಣೆಗೆ ಅನುಶ್ರೀ ಕೂಡ ಅಭಿಮಾನಿ ಆಗಿದ್ರು!
ಅಪ್ಪಟ ಕನ್ನಡತನ, ಕಾರ್ಯಕ್ರಮಕ್ಕೂ ಮುಂಚಿನ ತಯಾರಿ, ಕನ್ನಡ ಸಿನಿಮಾ ಮೇಲಿನ ಪ್ರೀತಿ ಇವೆಲ್ಲವೂ ಸಿನಿಮಾರಂಗದವರಿಗೆ ಚಂದನ್ ಮತ್ತಷ್ಟು ಹತ್ತಿವಾಗುವಂತೆ ಮಾಡಿತ್ತು. ಚಂದನ್ ಸಾವಿಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮುಂದೆ ಓದಿ
ಸಂತಾಪ ಸೂಚಿಸಿದ ಧೀರೇನ್
ಡಾ ರಾಜ್ ಕುಮಾರ್ ಅವರ ಮೊಮ್ಮಗ ಧೀರೇನ್ ರಾಮ್ ಕುಮಾರ್ ಚಂದನ್ ಅವರ ಜೊತೆಗಿನ ನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ತಾಯಿ ಹಾಗೂ ಅಜ್ಜಿಯ ಸಂದರ್ಶನ ಮಾಡಿದ್ದರು. ಇಷ್ಟು ಬೇಗ ಕಳೆದು ಹೋದರು ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದಿದ್ದಾರೆ.
ಕಳೆದು ಹೋದ ಚಂದಿರ
"ಚಂದನ್ ನೀವು ತುಂಬಾ ಬುದ್ದಿವಂತರು. ಮಾಧ್ಯಮ ಲೋಕದಲ್ಲಿ ಸಾಕಷ್ಟು ವಿಚಾರವನ್ನು ತಿಳಿದುಕೊಂಡವರಲ್ಲಿ ನೀವು ಒಬ್ಬರು. ನಿಮ್ಮ ಕನ್ನಡ ಭಾಷೆಯ ಮೇಲಿನ ಹಿಡಿತಕ್ಕೆ ಸಾಕಷ್ಟು ಜನರು ಅಭಿಮಾನಿಗಳಿದ್ದರು. ನಿಮ್ಮನ್ನು ಕಳೆದುಕೊಂಡಿದಕ್ಕೆ ಬೇಸರವಿದೆ." ಎಂದು ನಿರ್ದೇಶಕ ದಯಾಳ್ ಪದ್ಮನಾಬ್ ಬರೆದುಕೊಂಡಿದ್ದಾರೆ.
ಸಹೃದಯದ ವ್ಯಕ್ತಿ ಚಂದನ್ ಇನಿಲ್ಲ
"ಬುದ್ದಿವಂತ ನಿರೂಪಕ, ಅತ್ಯುತ್ತಮ ವಾಗ್ಮಿ ಇವುಗಳ ಜೊತೆಯಲ್ಲಿ ಒಳ್ಳೆಯ ಮನಸ್ಸು ಹೊಂದಿದ್ದ ಚಂದನ್ ಇನ್ನಿಲ್ಲ. ಅವರ ಆತ್ಮಕ್ಕೆ ಸಾಂತಿ ನೀಡಲಿ" ಎಂದು ನಿರ್ದೇಶಕ, ನಟ ತರುಣ್ ಸುಧೀರ್ ಟ್ವೀಟ್ ಮಾಡಿದ್ದಾರೆ. ತರುಣ್ ನಿರ್ದೇಶನದ ಚೌಕ ಚಿತ್ರದ 50ನೇ ದಿನ ಪೂರೈಸಿದ ಸಂಭ್ರಮದ ಕಾರ್ಯಕ್ರಮದಲ್ಲಿ ಚಂದನ್ ಭಾಗಿ ಆಗಿದ್ದರು.
ಸ್ವಚ್ಛ ಮನಸ್ಸಿನ ಗೆಳೆಯ ಇನ್ನಿಲ್ಲ
ನಟ ನೆನಪಿರಲಿ ಪ್ರೇಮ್ ಚಂದನ್ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಅಚ್ಚ ಕನ್ನಡದ ಸ್ವಚ್ಛ ಮನಸ್ಸಿನ ನನ್ನ ಗೆಳೆಯ ಹಾಗು ನನ್ನ ಆತ್ಮೀಯ ನಿರೂಪಕ ಸ್ನೇಹಿತ ಚಂದನ್ ಇನ್ನಿಲ್ಲ . ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ ಗೆಳೆಯ. ನಿನ್ನ ಕುಟುಂಬದ ಕಾವಲಾಗಿ ನಾವಿರುತ್ತೇವೆ." ಎಂದಿದ್ದಾರೆ.