ಸದಸ್ಯರಿಗೆ ಕಲ್ಯಾಣ ನಿಧಿಯಿಂದ ನೆರವು ಘೋಷಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ
ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ನೆರವು ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ. ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿಯಿಂದ ಪ್ರತಿ ಸದಸ್ಯರಿಗೂ ತಲಾ 15 ಸಾವಿರ ರೂ ನೀಡುವುದಾಗಿ ಘೋಷಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು, ವಿತರಕ ಮತ್ತು ಪ್ರದರ್ಶಕ ಎಂಬ ಮೂರು ವಲಯಗಳಿವೆ. ಈ ಮೂರೂ ವಲಯಗಳಿಂದ 14,000ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಎಲ್ಲ ಸದಸ್ಯರಿಗೂ ಕಲ್ಯಾಣ ನಿಧಿಯಿಂದ ತಲಾ 15,000 ರೂ. ನೀಡಲು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರತಿವರ್ಷ ಸದಸ್ಯತ್ವ ನವೀಕರಿಸುತ್ತಿರುವ ಸದಸ್ಯರಿಗೆ ಈ ನೆರವು ಸಿಗಲಿದೆ. ಈಗಾಗಲೇ ಕಲ್ಯಾಣ ನಿಧಿಯಿಂದ ಹಣ ಪಡೆದವರಿಗೆ ಈ ಅವಕಾಶ ಸಿಗುವುದಿಲ್ಲ. ಉಳಿದವರು ಹಣಕಾಸಿನ ನೆರವಿನ ಅಗತ್ಯವಿದ್ದರೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ದಿನಗೂಲಿ ನೌಕರರಿಗೆ ನೆರವು ನೀಡುವಂತೆ ಚಿತ್ರರಂಗದ ನಿಯೋಗವೊಂದ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.


Click it and Unblock the Notifications











