twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಂಡಲ್ ವುಡ್ ಬಿಕ್ಕಟ್ಟಿಗೆ ಮತ್ತೆ ಸಾಕ್ಷಿಯಾದ ಸಮಾರಂಭ

    |

    ಕರ್ನಾಟಕ ಸರಕಾರ ಪ್ರಾಯೋಜಿಸುವ 2012 ಮತ್ತು 2013ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ (ಫೆ 28) ಮುಕ್ತಾಯಗೊಂಡಿದೆ. ಇಪ್ಪತ್ತು ವರ್ಷಗಳ ನಂತರ ಮೈಸೂರಿನಲ್ಲಿ ಈ ಕಾರ್ಯಕ್ರಮ ನಡೆದದ್ದು ವಿಶೇಷ.

    ಕಾರ್ಯಕ್ರಮವೇನೂ ಅದ್ದೂರಿಯಾಗಿ ನಡೆದರೂ, ತಮ್ಮ ನಟರನ್ನು ಕಣ್ತುಂಬಿಸಿ ಕೊಳ್ಳಬೇಕೆಂದು ನೆರೆದಿದ್ದ ಅಸಂಖ್ಯಾತ ಅಭಿಮಾನಿಗಳಿಗೆ ಕಾದಿದ್ದು ಮಾತ್ರ ಎಂದಿನ ನಿರಾಶೆ. ರಾಜ್ಯ ಸರಕಾರದ ಈ ಸಮಾರಂಭದಲ್ಲಿ ಯಾರು ಬಂದಿದ್ದರು ಎನ್ನುವುದಕ್ಕಿಂತ, ಯಾರು ಬರಲಿಲ್ಲ ಎನ್ನುವ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿತ್ತು. (2013ರ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ)

    ಪ್ರಮುಖವಾಗಿ, ರೆಬೆಲ್ ಸ್ಟಾರ ಕಮ್ ವಸತಿ ಸಚಿವ ಅಂಬರೀಶ್ ಕೂಡಾ ತಾವು ಬೆಳೆದುಬಂದ ಚಿತ್ರೋದ್ಯಮದ ಕಾರ್ಯಕ್ರಮಕ್ಕೆ ಹಾಜರಾಗದೇ ಎಲ್ಲರ ಹುಬ್ಬೇರಿಸುವಂತೆ ಮಾಡಿದರು. ಚಲನಚಿತ್ರ ಪ್ರಶಸ್ತಿ ಸಮಾರಂಭದ 79 ಚಿತ್ರಗಳು

    ಅಂಬರೀಶ್ ಗೈರಿಗೆ, ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಇರುತ್ತಾರೆ ಎನ್ನುವ ಕಾರಣವೋ ಅಥವಾ ಇನ್ಯಾವುದಾದರೂ ತುರ್ತು ಕಾರ್ಯಕ್ರಮವಿತ್ತೋ? ಒಟ್ಟಿನಲ್ಲಿ ಅಭಿಮಾನಿಗಳಿಗೆ ಮಾತ್ರ ರಾಂಗ್ ಸಂದೇಶ ರವಾನೆಯಾಗಿದ್ದಂತೂ ನಿಜ.

    ಸಮಾರಂಭದಲ್ಲಿ 2012ನೇ ಸಾಲಿನ ಡಾ.ರಾಜ್‌ಕುಮಾರ್ ಪ್ರಶಸ್ತಿ ಎಂ.ಭಕ್ತವತ್ಸಲಂ, ಪುಟ್ಟಣ ಕಣಗಾಲ್ ಪ್ರಶಸ್ತಿ ಚಿ.ದತ್ತರಾಜ್ ಮತ್ತು ಡಾ.ವಿಷ್ಣುವರ್ಧನ್ ಪ್ರಶಸ್ತಿ ರಾಜೇಶ್ ಅವರಿಗೆ ನೀಡಲಾಯಿತು.

    ಅಂತೆಯೇ, 2013ನೇ ಸಾಲಿನ ಡಾ.ರಾಜ್‌ಕುಮಾರ್ ಪ್ರಶಸ್ತಿ ಶ್ರೀನಾಥ್, ಪುಟ್ಟಣ ಕಣಗಾಲ್ ಪ್ರಶಸ್ತಿ ಪಿ.ಎಚ್.ವಿಶ್ವನಾಥ್, ಡಾ.ವಿಷ್ಣುವರ್ಧನ್ ಪ್ರಶಸ್ತಿ ಕೆ.ವಿ.ಗುಪ್ತ ಅವರಿಗೆ ಪ್ರಧಾನ ಮಾಡಲಾಯಿತು.

    ಮೊದಲ ಅತ್ಯುತ್ತಮ ಚಲನಚಿತ್ರವಾಗಿ ತಲ್ಲಣ (2012), ಹಜ್(2013), ಅತ್ಯುತ್ತಮ ಮಕ್ಕಳ ಚಿತ್ರ- ಲಿಟಲ್ ಮಾಸ್ಟರ್(2012), ಹಾಡುಹಕ್ಕಿ ಹಾಡು(2013), ಅತ್ಯುತ್ತಮ ನಟ ದರ್ಶನ್ (2012), ನಿಖಿಲ್ ಮಂಜು- ಹಜ್(2013), ಅತ್ಯುತ್ತಮ ನಟಿ ನಿರ್ಮಲ ಚನ್ನಪ್ಪ (2012), ಅತ್ಯುತ್ತಮ ನಟಿ ನಿವೇದಿತಾ(2013) ಅವರಿಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು.(ಸಮಾರಂಭದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ)

    ಈ ಸಮಾರಂಭದಲ್ಲಿ ಡಾ.ರಾಜ್, ಡಾ.ವಿಷ್ಣು ಪ್ರಶಸ್ತಿಯೂ ಇದೆ..

    ರಾಜ್ಯ ಸರಕಾರದ ಕಾರ್ಯಕ್ರಮ

    ರಾಜ್ಯ ಸರಕಾರದ ಕಾರ್ಯಕ್ರಮ

    ಇಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯಸ್ಥ ವಿಶುಕುಮಾರ್ ಮತ್ತು ತಂಡಕ್ಕೆ, ಜೊತೆಗೆ ಕನ್ನಡ, ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರಿಗೆ ಅಭಿನಂದನೆಗಳು ಸಲ್ಲಲೇಬೇಕು.

    ರಾಜ್ಯ ಸರಕಾರದ ಕಾರ್ಯಕ್ರಮಕ್ಕೆ ಬೆಲೆಯಿಲ್ಲವಾ?

    ರಾಜ್ಯ ಸರಕಾರದ ಕಾರ್ಯಕ್ರಮಕ್ಕೆ ಬೆಲೆಯಿಲ್ಲವಾ?

    ಈ ಪ್ರಶಸ್ತಿ ಸಮಾರಂಭ 2012 ಮತ್ತು 2013ರ ಸಾಲಿದ್ದು. ಒಂದೆರಡು ವರ್ಷದ ಹಿಂದೆಯೇ ಆಯೋಜಿಸ ಬೇಕಾಗಿದ್ದ ಈ ಕಾರ್ಯಕ್ರಮ ಕೊನೆಗೂ ಸರಕಾರ ಆಯೋಜಿಸಿದ್ದರೂ, ಕನ್ನಡ ಚಿತ್ರೋದ್ಯಮ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕಾಗಿತ್ತು ಎನ್ನುವುದು ಅಲ್ಲಿ ಎಲ್ಲರ ಮಾತಾಗಿತ್ತು.

    ದರ್ಶನ್ ಅತ್ಯುತ್ತಮ ನಟ

    ದರ್ಶನ್ ಅತ್ಯುತ್ತಮ ನಟ

    ಕನ್ನಡದ ಟಾಪ್ ನಟರ ಪೈಕಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ. ಅದು ಕೂಡಾ, ಅವರಿಗೆ ಅತ್ಯುತ್ತಮ ನಟ (ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ, 2012 ಸಾಲು) ಪ್ರಶಸ್ತಿ ಬಂದಿದೆ ಎನ್ನುವ ಕಾರಣಕ್ಕೆ ಅವರು ಬಂದಿದ್ದಾರೆ, ಇಲ್ಲದಿದ್ದರೆ ಅವರೆಲ್ಲಿ ಬರುತ್ತಿದ್ದರು ಎನ್ನುವ ಮಾತು ಅಭಿಮಾನಿ ಬಳಗದಿಂದ ಸಮಾರಂಭದ ಸ್ಥಳದಲ್ಲಿ ಕೇಳಿಬರುತ್ತಿತ್ತು.

    ಸಮಾರಂಭದಲ್ಲಿ ರಾಜ್, ವಿಷ್ಣು ಪ್ರಶಸ್ತಿಯೂ ಇದೆ

    ಸಮಾರಂಭದಲ್ಲಿ ರಾಜ್, ವಿಷ್ಣು ಪ್ರಶಸ್ತಿಯೂ ಇದೆ

    ರಾಜ್ಯ ಸರಕಾರದ ಈ ಸನ್ಮಾನ ಸಮಾರಂಭದಲ್ಲಿ ಡಾ. ರಾಜ್ ಮತ್ತು ಡಾ. ವಿಷ್ಣು ಪ್ರಶಸ್ತಿಯೂ ಒಂದು. ಆದರೆ ದೊಡ್ಮನೆ ಕುಟುಂಬದಿಂದಾಗಲಿ, ವಿಷ್ಣು ಕುಟುಂಬದಿಂದಾಗಲೀ ಯಾರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎನ್ನುವ ಕೊರಗೂ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಗೊಣಗಾಟಕ್ಕೆ ಕಾರಣವಾಯಿತು.

    ಯಾರಿಗೆ ಪ್ರಶಸ್ತಿ ಇತ್ತು ಅವರು ಮಾತ್ರ

    ಯಾರಿಗೆ ಪ್ರಶಸ್ತಿ ಇತ್ತು ಅವರು ಮಾತ್ರ

    ಚಿತ್ರೋದ್ಯಮದ ಒಗ್ಗಟ್ಟಿನ ವಿಚಾರಕ್ಕೆ ಬಂದರೆ ಮೈಸೂರಿನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹುತೇಕವಾಗಿ ಪ್ರಶಸ್ತಿ ಬಂದ ಕಲಾವಿದರು ಮತ್ತು ಆ ಚಿತ್ರಕ್ಕೆ ಸಂಬಂಧಪಟ್ಟ ಚಿತ್ರತಂಡದ ಸದಸ್ಯರು ಮಾತ್ರ. ಇದರಿಂದ ಒಗ್ಗಟ್ಟಿಲ್ಲದ ಕನ್ನಡ ಚಿತ್ರೋದ್ಯಮ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡುವುದಂತೂ ಸಹಜ.

    English summary
    Karnataka state award function 2012 and 2013 in Mysuru, most celebrities not participated in the function.
    Monday, March 2, 2015, 13:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X