Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳಿಗೆ ಹೊಸ ಸಂದೇಶ ರವಾನಿಸಿದ ಸುದೀಪ್
ಕಲಾವಿದರ ನಡುವೆ ಮನಸ್ತಾಪಗಳಾಗುವ ಸಣ್ಣಪುಟ್ಟ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಇದರ ಜೊತೆಗೆ ಅವರವರ ಅಭಿಮಾನಿಗಳು ಘಟನೆಗೆ ಇನ್ನಷ್ಟು ತುಪ್ಪ ಸುರಿದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿರುವುದೂ ಇದೆ.
ಇತ್ತೀಚೆಗೆ ರಣವಿಕ್ರಮ ಚಿತ್ರದ ಬಿಡುಗಡೆ ಸಂದರ್ಭದಲ್ಲೂ ಅಭಿಮಾನಿಗಳು ಅತಿರೇಕದ ನಡುವಳಿಕೆಯನ್ನು ತೋರಿದ್ದೂ ಆಗಿದೆ.
ಇದಲ್ಲದೇ, ಮೇಕೆದಾಟು ವಿಚಾರದಲ್ಲಿ ಸುದೀಪ್ ಪ್ರತಿಭಟನೆಯಲ್ಲಿ ಯಾಕೆ ಭಾಗವಹಿಸಲಿಲ್ಲ ಎನ್ನುವುದೂ ಸಾಮಾಜಿಕ ತಾಣದಲ್ಲಿ ಚರ್ಚೆಯ ವಿಷಯವಾಗಿತ್ತು. (ಹಾವಿನ ದ್ವೇಷ 12 ವರುಷ, ಅಭಿಮಾನಿಗಳ ದ್ವೇಷ)
ಕರ್ನಾಟಕ ಬಂದ್ ಮತ್ತು ಪ್ರತಿಭಟನೆಯಲ್ಲಿ ಯಾಕೆ ಭಾಗವಹಿಸಲಾಗಲಿಲ್ಲ ಎಂದು ಸುದೀಪ್ ಟ್ವೀಟ್ ಮೂಲಕ ವಿವರಿಸಿದ್ದೂ ಆಗಿದೆ.
ಈಗ ಕಿಚ್ಚ ಸುದೀಪ್, ಕಲಾವಿದರ ಅಭಿಮಾನಿಗಳ ನಡುವೆ ಆಗಾಗ ನಡೆಯುತ್ತಿರುವ ಅನಾವಶ್ಯಕ ಮಾತಿನ ಸಮರಕ್ಕೆ, ವಿರಸಕ್ಕೆ ಮಂಗಳ ಹಾಡುವ ನಿರ್ಧಾರಕ್ಕೆ ಬಂದಂತಿದೆ.
ಸಣ್ಣ ಸಣ್ಣ ವಿಚಾರಗಳು ಸುಖಾಸುಮ್ಮನೆ ದೊಡ್ಡದಾಗುತ್ತಿರುವುದರ ಬಗ್ಗೆ ಸುದೀಪ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಟ್ವೀಟ್ ಮೂಲಕ ಸುದೀಪ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
|
ಸುಮ್ಮನೆ ಜಗಳವಾಡಬೇಡಿ
ಕಾರಣವಿಲ್ಲದೇ ಟ್ವೀಟ್ ಮೂಲಕ ಜಗಳವಾಡಬೇಡಿ. ನಾವೆಲ್ಲಾ ಕಲಾವಿದರು ಒಂದೇ, ಚೆನ್ನಾಗಿಯೇ ಇದ್ದೇವೆ, ಇಂತಹ ಜಗಳಕ್ಕೆ ಮಂಗಳ ಹಾಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
|
ಇತರ ಕಲಾವಿದರ ಮೇಲೆ ನಮಗೆ ಗೌರವವಿದೆ
ನಮಗೆ ಇತರ ಕಲಾವಿದರ ಮೇಲೆ ಗೌರವವಿದೆ. ನಾವೆಲ್ಲಾ ಕೆಲಸ ಮಾಡುತ್ತಿರುವುದು ಚಿತ್ರೋದ್ಯಮಕ್ಕಾಗಿ. ಪೈಪೋಟಿ ಎನ್ನುವುದು ಎಲ್ಲಾ ಉದ್ಯಮದಲ್ಲೂ ಇದ್ದದ್ದೇ, ಅದನ್ನೇ ಕಲಾವಿದರ ನಡುವೆ ಸರಿಯಿಲ್ಲ ಎಂದು ಬಿಂಬಿಸುವುದು ತಪ್ಪು.
ಸಾಮಾಜಿಕ ತಾಣದಲ್ಲಿ
ಸಾಮಾಜಿಕ ತಾಣದಲ್ಲಿ ಬಳಕೆಯಾದ ಅಸಂಬದ್ದ ಪದಗಳನ್ನು ನಿಯಂತ್ರಿಸಬಹುದು, ಸುದೀಪ್
|
ನನ್ನ ಟ್ವೀಟಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ
ನನ್ನ ಟ್ವೀಟಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ಕಲಾವಿದರಿಗೆ ಸಂಬಂಧಿಸಿದಂತೆ ಜಗಳವಾಡುವುದನ್ನು ಪ್ಲೀಸ್ ನಿಲ್ಲಿಸಿ. ನಮ್ಮೆಲ್ಲರ ನಡುವೆ ಪ್ರೀತಿಯಿರಲಿ, ಅನಾವಶ್ಯಕ ಚರ್ಚೆಯಲ್ಲ.