Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಿರು' ಜತೆ ಮೊದಲ ಚಿತ್ರದಲ್ಲಿ ನಟಿಸಿದ್ದ ಕೃತಿ ಕರಬಂಧ ಭಾವುಕ ಮಾತು
ನಟಿ ಕೃತಿ ಕರಬಂಧ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡವರಾದರೂ, ಅವರಿಗೆ ಕ್ಯಾಮೆರಾ ಎದುರಿಸುವ ಮೂಲಕ ನಟಿಯಾಗಲು ಅವಕಾಶ ನೀಡಿದ್ದು ಕನ್ನಡ ಚಿತ್ರರಂಗ. ಮಹೇಶ್ ಬಾಬು ನಿರ್ದೇಶನದ 'ಚಿರು' ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
Recommended Video
ಇತ್ತೀಚೆಗೆ ಹಿಂದಿಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರೂ, ತಮ್ಮನ್ನು ನಟಿಯಾಗಿ ಬೆಳೆಸಿದ ಕನ್ನಡ ಚಿತ್ರರಂಗದ ನಂಟನ್ನು ಮರೆತಿಲ್ಲ ಎಂಬುದನ್ನು ಆಗಾಗ ತೋರಿಸಿಕೊಳ್ಳುವ ಕೃತಿ, ಚಿರಂಜೀವಿ ಸರ್ಜಾ ಹಠಾತ್ ನಿಧನದಿಂದ ಆಘಾತಗೊಂಡಿದ್ದಾರೆ. ಈಗಲೂ ಈ ಸುದ್ದಿಯನ್ನು ನಂಬಲು ಆಗುತ್ತಿಲ್ಲ ಎಂದು ಕೃತಿ ಹೇಳಿದ್ದಾರೆ. ಮುಂದೆ ಓದಿ...
'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು
ಕೃತಿ ಕರಬಂಧ ಸಂತಾಪ
ಚಿರಂಜೀವಿ ಸರ್ಜಾ ನಿಧನದ ಸುದ್ದಿ ಕೇಳಿ ಭಾನುವಾರ ಶೋಕ ವ್ಯಕ್ತಪಡಿಸಿದ್ದ ಅವರು, ಸೋಮವಾರ ಮಧ್ಯಾಹ್ನ ಮತ್ತೊಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಬಗ್ಗೆ ನಾನು ಯೋಚಿಸಿದಾಗಲೆಲ್ಲಾ ನನ್ನ ಹೃದಯ ನೋಯುತ್ತದೆ ಮತ್ತು ಅಳುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೃತಿ ಹೇಳಿದ್ದಾರೆ.
ನಂಬಲು ಆಗುತ್ತಿಲ್ಲ
'ನನ್ನ ಮೊದಲ ಸಹನಟ, ಒಬ್ಬ ಅದ್ಭುತ ಮಾನವೀಯ ವ್ಯಕ್ತಿ, ಸಿಹಿಯಾದ ನಗುವಿನ ಮತ್ತು ಅತ್ಯುತ್ತಮ ಹೃದಯದ ಹುಡುಗ. ನೀವು ನಮ್ಮನ್ನು ಅಗಲಿದ್ದೀರಿ ಎಂಬುದನ್ನು ಈಗಲೂ ನಂಬಲು ಆಗುತ್ತಿಲ್ಲ' ಎಂದು ಕೃತಿ ನೋವು ಹಂಚಿಕೊಂಡಿದ್ದಾರೆ.
ಸರ್ಜಾ ಕುಟುಂಬಕ್ಕೆ ಇದು ಮೂರನೆ ಆಘಾತ: ಈ ಹಿಂದೆಯೂ ಆಟವಾಡಿತ್ತು ವಿಧಿ
ಕನಸು ಎಂದುಕೊಂಡಿದ್ದೆ
ಹಿಂದಿನ ದಿನ ನಡೆದಿದ್ದು ಕೆಟ್ಟ ಕನಸು ಇರಬಹುದಷ್ಟೇ ಎಂದುಕೊಂಡಿದ್ದೆ. ಅದೇ ಭರವಸೆಯೊಂದಿಗೆ ಈ ದಿನ ಬೆಳಿಗ್ಗೆ ಎದ್ದೆ. ಆದರೆ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೃತಿ ಬರೆದುಕೊಂಡಿದ್ದಾರೆ. 'ಇದೊಂದು ಕನಸಾಗಿರಲಿದೆ ಎಂಬ ಭರವಸೆಯೊಂದಿಗೆ ಬೆಳಿಗ್ಗೆ ಎದ್ದೆ. ಈಗಲೂ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ' ಎಂದು ಕೃತಿ ದುಃಖ ತೋಡಿಕೊಂಡಿದ್ದಾರೆ.
ಶಕ್ತಿ ಸಿಗುವ ಭರವಸೆ
'ಮೇಘನಾ, ಧ್ರುವ, ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃದಯ ಮಿಡಿಯುತ್ತಿದೆ. ಈ ನಷ್ಟವನ್ನು ಭರಿಸುವ ಎಲ್ಲ ಶಕ್ತಿಯನ್ನೂ ಅವರು ಕಂಡುಕೊಳ್ಳುತ್ತಾರೆ ಎಂಬ ಭರವಸೆ ಹೊಂದಿದ್ದೇನೆ' ಎಂದು ಕೃತಿ ಹೇಳಿದ್ದಾರೆ.