Don't Miss!
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿನ್ನೆ ಉದಯ್ ಶವ, ಇಂದು ಅನಿಲ್ ಶವ ಪತ್ತೆ
'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಿಂದ ಆದ ದುರಂತದಲ್ಲಿ ಸಾವಿಗೀಡಾಗಿದ್ದ ಇಬ್ಬರು ಖಳ ನಟರ ಪೈಕಿ, ಇಂದು ಮತ್ತೋರ್ವ ನಟನ ಶವ ಪತ್ತೆಯಾಗಿದೆ. ಇಂದು ಬೆಳಿಗ್ಗೆ 5.50ರ ವೇಳೆಗೆ ನಟ ಅನಿಲ್ ಮೃತದೇಹ ಪತ್ತೆಯಾಗಿದೆ
'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾಗಿದ್ದ ಇಬ್ಬರು ಖಳ ನಟರ ಪೈಕಿ, ಇಂದು (ನವೆಂಬರ್ 10) ಮತ್ತೋರ್ವ ನಟನ ಶವ ಪತ್ತೆಯಾಗಿದೆ. ಇಂದು ಬೆಳಿಗ್ಗೆ 5.50ರ ವೇಳೆಗೆ ನಟ ಅನಿಲ್ ಮೃತದೇಹ ಪತ್ತೆಯಾಗಿದ್ದು, ಹೆಲಿಕಾಫ್ಟರ್ ನಿಂದ ಹಾರಿದ್ದ 50 ಮೀಟರ್ ಪಕ್ಕದಲ್ಲೇ ಶವ ಸಿಕ್ಕಿದೆ. ಎನ್.ಡಿ.ಆರ್.ಎಫ್ ಹಾಗೂ ಮುಳುಗು ತಜ್ಞರು ಅನಿಲ್ ಮೃತದೇಹವನ್ನ ತಿಪ್ಪಗೊಂಡನಹಳ್ಳಿ ಕೆರೆಯ ದಡಕ್ಕೆ ತಂದಿದ್ದಾರೆ.
ಮೂರು ದಿನಗಳಾದರೂ ಅನಿಲ್ ಮೃತ ದೇಹ ಪತ್ತೆಯಾಗದ ಹಿನ್ನಲೆಯಲ್ಲಿ, ನಿನ್ನೆ ತಡ ರಾತ್ರಿ 1.30 ರವರೆಗೂ ಶವಕ್ಕಾಗಿ ಕಾರ್ಯಚರಣೆ ನಡೆಸಲಾಗಿತ್ತು. ಆದ್ರೆ, ಯಾವುದೇ ಕುರುಹು ಸಿಕ್ಕರಲಿಲ್ಲ. ಇಂದು ಬೆಳಗ್ಗಿನ ಜಾವದಲ್ಲಿ ಅನಿಲ್ ಮೃತದೇಹ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ತೇಲಿದ ಪರಿಣಾಮ ಎನ್.ಡಿ.ಆರ್.ಎಫ್ ಸಿಬ್ಬಂದಿಗಳಿಗೆ ಶವ ಸಿಕ್ಕಿದೆ. ನಿನ್ನೆ (ನವೆಂಬರ್ 9) ಮಧ್ಯಾಹ್ನದ ವೇಳೆಗೆ ನಟ ಉದಯ್ ಅವರ ಮೃತದೇಹ ಸಿಕ್ಕಿತ್ತು. ['ಮಾಸ್ತಿಗುಡಿ' ದುರಂತ: 2 ದಿನಗಳ ಬಳಿಕ ಓರ್ವ ನಟನ ಶವ ಪತ್ತೆ]
ಸದ್ಯ ತಿಪ್ಪಗೊಂಡನಹಳ್ಳಿ ಕೆರೆಯ ದಡದಲ್ಲೇ ಅನಿಲ್ ರವರ ಶವಪರೀಕ್ಷೆ ನಡೆಯುತ್ತಿದೆ. ತದನಂತರ ಬೆಂಗಳೂರಿನ ಕದಿರೇನಹಳ್ಳಿಯಲ್ಲಿರುವ ಅನಿಲ್ ನಿವಾಸಕ್ಕೆ ಮೃತದೇಹ ರವಾನಿಸಲಾಗುತ್ತದೆ. ಇಂದೇ ಅನಿಲ್ ಮತ್ತು ಉದಯ್ ರವರ ಅಂತಿಮ ಸಂಸ್ಕಾರ ನಡೆಯಲಿದೆ ಎನ್ನಲಾಗಿದೆ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]