ನಿರ್ಮಾಪಕ ಸುಂದರ್.ಪಿ.ಗೌಡ ಅಮಾಯಕ ಎಂದ ನಟ ದುನಿಯಾ ವಿಜಯ್.!
ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆದ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ನಡೆದ ದುರಂತ ಪ್ರಕರಣದಲ್ಲಿ ನಿರ್ಮಾಪಕ ಸುಂದರ್.ಪಿ.ಗೌಡ ರವರ ತಪ್ಪೇನೂ ಇಲ್ಲ ಅಂತ ನಟ ದುನಿಯಾ ವಿಜಯ್ ಹೇಳಿದ್ದಾರೆ. [ಕಡೆಗೂ ಪೊಲೀಸರ ಮುಂದೆ ಶರಣಾದ ನಾಗಶೇಖರ್, ರವಿವರ್ಮ.!]
ಮಾಗಡಿ ಪೊಲೀಸ್ ಠಾಣೆಯಲ್ಲಿ 'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮ ಸರೆಂಡರ್ ಆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದುನಿಯಾ ವಿಜಯ್, ''ನಿರ್ಮಾಪಕ ಸುಂದರ್.ಪಿ.ಗೌಡ ಅಮಾಯಕ'' ಎಂದರು.

ಮಾಧ್ಯಮಗಳ ಮುಂದೆ ದುನಿಯಾ ವಿಜಯ್ ಹೇಳಿದ್ದೇನು.?
''ನಿರ್ಲಕ್ಷ್ಯದಲ್ಲಿ ಈ ದುರ್ಘಟನೆ ನಡೆದಿದೆ. ಸುಂದರ್ ಎ-1 ಆರೋಪಿ ಅಲ್ಲ. ಅವರನ್ನ ಎ-1 ಆರೋಪಿ ಮಾಡಿರುವುದು ಸರಿ ಅಲ್ಲ'' ಅಂತ ಮಾಧ್ಯಮಗಳ ಜೊತೆ ಮಾತನಾಡುವಾಗ ನಟ ದುನಿಯಾ ವಿಜಯ್ ಹೇಳಿದರು. ['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]

ಸುಂದರ್.ಪಿ.ಗೌಡ ದುಡ್ಡು ಹಾಕಿದ್ದಾರೆ ಅಷ್ಟೇ.!
''ಸುಂದರ್ ದುಡ್ಡು ತಂದು ಹಾಕಿದ್ದಾರೆ. ಅಷ್ಟು ಬಿಟ್ಟರೆ, ಅವರು ಈ ಘಟನೆಯಲ್ಲಿ ಅಮಾಯಕ'' - ದುನಿಯಾ ವಿಜಯ್ ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

ಶರಣಾಗಿ ಎಂದು ಹೇಳಿದೆ.!
''ಇಂದು ಬೆಳಗ್ಗೆ ನನ್ನ ಮನೆಗೆ ನಾಗಶೇಖರ್ ಹಾಗೂ ರವಿವರ್ಮ ಬಂದಿದ್ದರು. ಅವರು ಬಂದ ಕೂಡಲೆ, ಸರೆಂಡರ್ ಆಗಿ ಅಂತ ಹೇಳಿದೆ. ನನ್ನ ಕೆಲಸ ನಾನು ಮಾಡಿದ್ದೇನೆ'' - ದುನಿಯಾ ವಿಜಯ್ [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

ಮ್ಯಾನೇಜರ್ ಭರತ್ ಎಲ್ಲಿದ್ದರೂ, ಬರಬೇಕು.!
''ಮ್ಯಾನೇಜರ್ ಭರತ್ ಎಲ್ಲಿದ್ದರೂ, ಬಂದು ಸರೆಂಡರ್ ಆಗಬೇಕು. ಕಾನೂನು ಕಣ್ಣಿನಿಂದ ತಪ್ಪಿಸಿಕೊಂಡರೆ ಭಾರಿ ಅನಾಹುತ ಎದುರಿಸಬೇಕಾಗುತ್ತೆ'' - ದುನಿಯಾ ವಿಜಯ್.

ಎದುರಿಸಲು ಸಿದ್ಧ
''ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ನನ್ನನ್ನೂ ವಿಚಾರಣೆ ಮಾಡಲಿ. ಎಲ್ಲದಕ್ಕೂ ನಾನು ರೆಡಿ ಇದ್ದೀನಿ. ಫೇಸ್ ಮಾಡುತ್ತೇನೆ'' - ದುನಿಯಾ ವಿಜಯ್


Click it and Unblock the Notifications











