Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶಸ್ಸಿನ ನಂತರ ಬರಲಿದೆ 'ಬೀರ್ ಬಲ್' ಸರಣಿಯ ಮತ್ತೆರಡು ಚಿತ್ರಗಳು
'ಬೀರ್ ಬಲ್ ಟ್ರೈಲಜಿ'ಯ ಮೊದಲ ಭಾಗಕ್ಕೆ ದೊರೆತಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ನಟ, ನಿರ್ದೇಶಕ ಎಂ.ಜಿ ಶ್ರೀನಿವಾಸ್, ಅದರ ಮುಂದಿನ ಎರಡು ಭಾಗಗಳನ್ನು ಶುರುಮಾಡಲು ಮುಂದಾಗಿದ್ದಾರೆ.
Recommended Video
'ಬೀರ್ ಬಲ್' ಚಿತ್ರವು ಒಟ್ಟು ಮೂರು ಭಾಗಗಳನ್ನು ಹೊಂದಿದೆ ಎಂದು ಶ್ರೀನಿವಾಸ್, ಚಿತ್ರದ ಬಿಡುಗಡೆ ಸಂದರ್ಭದಲ್ಲಿಯೇ ಹೇಳಿದ್ದರು. ಆದರೆ ಮೊದಲ ಭಾಗ ಬಿಡುಗಡೆಯಾದಾಗ ಪ್ರೇಕ್ಷಕರಿಂದ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಬಂದಿರಲಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತ ಜನರು, ಒಟಿಟಿ ಮೂಲಕ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್ನಲ್ಲಿ 2.50 ಕೋಟಿಗೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿರುವುದು 'ಬೀರ್ ಬಲ್ ಟ್ರೈಲಜಿ'ಯ ಸಾಧನೆ.
ಕನ್ನಡದ 'ಬೀರ್ ಬಲ್' ರಿಮೇಕ್ ಮಾಡ್ತಾರಾ ಆಯುಷ್ಮಾನ್ ಖುರಾನ?
ಈ ಚಿತ್ರ ಕೊರಿಯನ್ ಚಿತ್ರವನ್ನು ಆಧರಿಸಿದೆ ಎಂಬ ಮಾತುಗಳು ಕೇಳಿಬಂದರೂ, ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಭಾಷಿಕರೂ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಈಗ ಬಿಡುಗಡೆಯಾಗಿರುವುದು 'ಬೀರ್ ಬಲ್ ಟ್ರೈಲಜಿ- ಕೇಸ್ 1 ಫೈಂಡಿಂಗ್ ವಜ್ರಮುನಿ'.
ಇನ್ನೂ ಎರಡು ಥ್ರಿಲ್ಲರ್ ಭಾಗಗಳು ಈ ಚಿತ್ರದಲ್ಲಿದ್ದು, 'ಬೀರ್ ಬಲ್ ಟ್ರೈಲಜಿ' ಎಂಬ ಶೀರ್ಷಿಕೆ ಎಲ್ಲದಕ್ಕೂ ಕಾಮನ್ ಆಗಿ ಇರಲಿದೆ. ಎರಡನೆಯ ಭಾಗ 'ಅವ್ರನ್ ಬಿಟ್, ಇವ್ರನ್ ಬಿಟ್ ಅವ್ರ್ಯಾರು? ಎಂಬ ಉಪ ಶೀರ್ಷಿಕೆ ಹೊಂದಿರಲಿದೆ. ಮೂರನೇ ಭಾಗ 'ತುರೆಮಣೆ' ಎಂಬ ಉಪ ಶೀರ್ಷಿಕೆ ಹೊಂದಿರಲಿದೆ.
Birbal Review : ಅದೇ ತರ..ಆದರೆ ಇದು ಅದಲ್ಲ..
ಈ ನಡುವೆ ಶ್ರೀನಿ 'ಓಲ್ಡ್ ಮಾಂಕ್' ಎಂಬ ಚಿತ್ರ ಮಾಡುತ್ತಿದ್ದಾರೆ. ಇದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಈ ಸಿನಿಮಾ ಮುಗಿದ ಬಳಿಕ ಅವರು 'ಬೀರ್ ಬಲ್' ಸರಣಿಯನ್ನು ಮುಂದುವರಿಸಲಿದ್ದಾರೆ. ಉಪೇಂದ್ರ ಅಭಿನಯದ 'ಟೋಪಿವಾಲಾ' ಚಿತ್ರದ ನಿರ್ದೇಶಿಸಿದ್ದ ಶ್ರೀನಿವಾಸ್, ನಂತರ ತಾವೇ ನಾಯಕರಾಗಿ 'ಶ್ರೀನಿವಾಸ ಕಲ್ಯಾಣ' ಚಿತ್ರ ಮಾಡಿದ್ದರು.