Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು
ಬ್ರೇಕಿಂಗ್ : ಇದೀಗ ಬಂದ ಸುದ್ದಿ ಪ್ರಕಾರ, ಕೆರೆಗೆ ಬಿದ್ದಿದ್ದ ಖಳನಟರಾದ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದ್ದಾರೆ. ಈ ವಿಚಾರವನ್ನ ತಾವರೆಕರೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಂದೀಶ್ ಟಿವಿ9ಗೆ ತಿಳಿಸಿದ್ದಾರೆ.
ಘಟನೆ ಹಿನ್ನಲೆ : 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ವೇಳೆ ದೊಡ್ಡ ಅನಾಹುತವೊಂದು ನಡೆದಿದೆ. ಚಿತ್ರದ ಖಳನಾಯಕರಾದ ಅನಿಲ್ ಹಾಗೂ ಉದಯ್ ಅವರು ನೀರಿಗೆ ಹಾರಿ ಕಾಣಿಯಾಗಿದ್ದರು. ರಾಮನಗರದ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಲಾಗುತ್ತಿತ್ತು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
ಈ ವೇಳೆ ಚಿತ್ರದ ನಾಯಕ ನಟ ದುನಿಯಾ ವಿಜಯ್ ಹಾಗೂ ಖಳನಾಯಕರಾದ ಅನಿಲ್ ಮತ್ತು ಉದಯ್ ನಡುವೆ ಸಾಹಸ ದೃಶ್ಯಗಳನ್ನ ಹೆಲಿಕಾಫ್ಟರ್ ಮೂಲಕ ಶೂಟ್ ಮಾಡಲಾಗುತ್ತಿತ್ತು.[ಮಾಸ್ತಿಗುಡಿ ಚಿತ್ರದ ಗ್ಯಾಲರಿ]
ದೃಶ್ಯವೊಂದರಲ್ಲಿ ಅನಿಲ್, ಉದಯ್ ಹಾಗೂ ದುನಿಯಾ ವಿಜಯ್ ಅವರ ಮಧ್ಯೆ ಫೈಟ್ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಅನಿಲ್ ಹಾಗೂ ಉದಯ್ ಇಬ್ಬರು ಓಡಿ ಹೋಗಿ ಹೆಲಿಕಾಫ್ಟರ್ ಹತ್ತುತ್ತಾರೆ. ಅವರನ್ನ ಬೆನ್ನಟ್ಟಿ ಹೋಗುವ ದುನಿಯಾ ವಿಜಯ್ ಕೂಡ ಹೆಲಿಕಾಫ್ಟರ್ ಹತ್ತುತ್ತಾರೆ. ಹೆಲಿಕಾಫ್ಟರ್ ಕೆರೆಯ ಮಧ್ಯೆಕ್ಕೆ ಹೋದಾಗ ಹೆಲಿಕಾಫ್ಟರ್ ನಿಂದ ಅನಿಲ್, ಉದಯ್ ಹಾಗೂ ದುನಿಯಾ ವಿಜಯ್ ಮೂವರು ಕೆರೆಗೆ ಧುಮುಕುತ್ತಾರೆ. ಆದ್ರೆ, ನೀರಿಗೆ ಬಿದ್ದ ಮೂವರ ಪೈಕಿ ದುನಿಯಾ ವಿಜಯ್ ಮಾತ್ರ ನೀರಿನಿಂದ ಮೇಲೆ ಬರುತ್ತಾರೆ. ಉಳಿದ ಇಬ್ಬರು ನೀರಿನಲ್ಲೇ ನಾಪತ್ತೆಯಾಗಿದ್ದಾರೆ ಎಂಬುದು ವರದಿಯಾಗಿದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]
ನೀರಿಗೆ ಬಿದ್ದು ನಿಮಿಷಗಳು ಕಳೆದರು ಅನಿಲ್ ಹಾಗೂ ಉದಯ್ ಇಬ್ಬರು ಮೇಲೆ ಬರದೆ ಇದ್ದಾಗ, ದುನಿಯಾ ವಿಜಯ್ ಅವರು ಕೂಗಿಕೊಂಡಿದ್ದಾರೆ. ಅಮೇಲೆ ಚಿತ್ರತಂಡದವರು ಬೋಟಿನಲ್ಲಿ ಹೋಗಿ ಅನಿಲ್ ಹಾಗೂ ಉದಯ್ ಗಾಗಿ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಚರಣೆ ನಡೆಸಿದ್ದರು.