ಇತ್ತ ದರ್ಶನ್ ರೋಡ್ ಶೋ, ಅತ್ತ ಖೈದಿ ಪರಾರಿ!!

ತಡವಾಗಿ ಅಂದರೆ ಶನಿವಾರ (ಅ 22) ರಾಣೇಬೆನ್ನೂರು ನಲ್ಲಿ ನಡೆದ ಘಟನೆಯ ಸಂಕ್ಷಿಪ್ತ ವರದಿ ಇಂತಿದೆ:
ಅಂದು ರಾತ್ರಿ 8ಗಂಟೆಗೆ ಬೆಳಗಾವಿಯಿಂದ ರಾಣೇಬೆನ್ನೂರು ನಗರಕ್ಕೆ ದರ್ಶನ್ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ಸಾವಿರಾರು ಮಂದಿ ಅಭಿಮಾನಿಗಳು ಜಮಾಯಿಸಿದ್ದರು. ತುಂಬಾ ಜನ ಸೇರುವ ನಿರೀಕ್ಷೆ ಪೋಲೀಸ್ ಇಲಾಖೆಗೆ ಮೊದಲೇ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸ್ ರನ್ನು ನೇಮಿಸಿದ್ದರು.
ರಾಣೆಬೆನ್ನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯ ಗ್ರಾಮಾಂತರ ಠಾಣೆಯಿಂದ ಹೆಚ್ಚುವರಿಯಾಗಿ ದರ್ಶನ್ ರೋಡ್ ಶೋಗಾಗಿ ಪೋಲೀಸರನ್ನು ನಿಯೋಜಿಸಲಾಗಿತ್ತು. ಆ ಠಾಣೆಯ ಸಬ್ ಜೈಲಿನ ಒಂದು ಶೆಲ್ ನಲ್ಲಿ ಐದು ಮಂದಿ ಖೈದಿಗಳನ್ನು ಇರಿಸಲಾಗಿತ್ತು.
ದರ್ಶನ್ ನಗರಕ್ಕೆ ಬರುವ ವಿಷಯ ಖೈದಿಗಳಿಗೆ ತಿಳಿದಿತ್ತು. ಠಾಣೆಯಲ್ಲಿ ಹೇಗೂ ಡ್ಯೂಟಿ ಪೋಲೀಸ್ ಕಮ್ಮಿ ಇರೋದು ಅರಿತು ಐದು ಮಂದಿ ಖೈದಿಗಳಿದ್ದ ಸೆಲ್ ನ ಕಂಬಿಗಳನ್ನು ಮುರಿದು ಜೈಲಿನಿಂದ ಒಬ್ಬ ಖೈದಿ ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ಜೈಲಿನಿಂದ ಓಡಿ ಹೋಗಲು ನೆರವಾದ ಉಳಿದ ನಾಲ್ಕು ಖೈದಿಗಳು ಮಾತ್ರ ನಿಯತ್ತಿನಿಂದ ಜೈಲು ಬಿಟ್ಟು ಹೊರಗೇ ಬಂದಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೇದೆಗಳ ಮೇಲೆ ಕರ್ತವ್ಯ ಲೋಪ ಪ್ರಕರಣ ದಾಖಲಾಗಿದೆ.(ಒನ್ಇಂಡಿಯಾ ಕನ್ನಡ)


Click it and Unblock the Notifications











