twitter
    For Quick Alerts
    ALLOW NOTIFICATIONS  
    For Daily Alerts

    4 ದಿನ ಕಳೆದಿದ್ದರೆ, ನಂದಮೂರಿ ಹರಿಕೃಷ್ಣ ಜನ್ಮದಿನ: ಆದ್ರೆ ವಿಧಿ ಲಿಖಿತವೇ ಬೇರೆ.!

    By Harshitha
    |

    Recommended Video

    ಇನ್ನೆರಡು ದಿನ ಕಳೆದಿದ್ರೆ ಹುಟ್ಟಹಬ್ಬ ಆಚರಿಸಿಕೊಳ್ತಿದ್ರು ಹರಿಕೃಷ್ಣ..! | Filmibeat Kannada

    ಈ ದುರಂತ ಘಟಿಸದೇ ಇದ್ದಿದ್ದರೆ, ಇನ್ನೂ ನಾಲ್ಕು ದಿನಗಳಲ್ಲಿ ನಂದಮೂರಿ ಹರಿಕೃಷ್ಣ ತಮ್ಮ 62ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಿದ್ರು. ಆದ್ರೆ, ವಿಧಿ ಲಿಖಿತವೇ ಬೇರೆ ಆಗಿದೆ. ಮತ್ತೊಂದು ಜನ್ಮದಿನವನ್ನ ಸೆಲೆಬ್ರೇಟ್ ಮಾಡಿಕೊಳ್ಳುವ ಮುನ್ನವೇ ನಂದಿಮೂರಿ ಹರಿಕೃಷ್ಣ ಇಹಲೋಕ ತ್ಯಜಿಸಿದ್ದಾರೆ.

    ನಂದಮೂರಿ ಹರಿಕೃಷ್ಣ ಹೇಳಿ ಕೇಳಿ ಟಾಲಿವುಡ್ ನಟ ಹಾಗೂ ರಾಜಕಾರಣಿ. ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ನಂದಮೂರಿ ಹರಿಕೃಷ್ಣ ಅವರ ಬರ್ತಡೇಯನ್ನ ಫ್ಯಾನ್ಸ್ ಗ್ರ್ಯಾಂಡ್ ಆಗಿ ಆಚರಣೆ ಮಾಡುತ್ತಾರೆ.

    ಅಪಘಾತದಲ್ಲಿ ಎನ್‌ಟಿಆರ್ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣಅಪಘಾತದಲ್ಲಿ ಎನ್‌ಟಿಆರ್ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣ

    Nandamuri Harikrishnas last letter to his fans asking them to not to celebrate his 62nd birthday

    ಆದ್ರೆ, ''ಈ ಬಾರಿ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡ. ಅದಕ್ಕೆ ಖರ್ಚು ಮಾಡುವ ಹಣವನ್ನ ಕೇರಳ ಪ್ರವಾಹ ಪೀಡಿತರಿಗೆ ಹಾಗೂ ಆಂಧ್ರದ ಪ್ರವಾಹ ಸಂತ್ರಸ್ಥರಿಗೆ ನೀಡಿ'' ಎಂದು ನಂದಮೂರಿ ಹರಿಕೃಷ್ಣ ತಮ್ಮ ಅಭಿಮಾನಿಗಳಲ್ಲಿ ಪತ್ರ ಮುಖೇನ ಮನವಿ ಮಾಡಿದ್ದರು.

    ಎಂಥಾ ದುರಂತ: ಅಪ್ಪ-ಮಗನ ಪ್ರಾಣ ತೆಗೆದದ್ದು ಒಂದೇ ಕಾರ್ ನಂಬರ್, ಒಂದೇ ಹೈವೇ.! ಎಂಥಾ ದುರಂತ: ಅಪ್ಪ-ಮಗನ ಪ್ರಾಣ ತೆಗೆದದ್ದು ಒಂದೇ ಕಾರ್ ನಂಬರ್, ಒಂದೇ ಹೈವೇ.!

    ಅಭಿಮಾನಿಗಳಿಗೆ ನಂದಮೂರಿ ಹರಿಕೃಷ್ಣ ಬರೆದಿದ್ದ ಪತ್ರ ಟ್ವಿಟ್ಟರ್ ನಲ್ಲಿ ಸದ್ಯ ವೈರಲ್ ಆಗಿದೆ.

    ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಳ್ಳಲು ನೆಲ್ಲೂರಿಗೆ ಇಂದು ಬೆಳಗ್ಗೆ ತೆರಳುತ್ತಿದ್ದ ನಂದಮೂರಿ ಹರಿಕೃಷ್ಣ ತೆಲಂಗಾಣದ ನಲ್ಗೊಂಡ ಬಳಿ ಅಪಘಾತಕ್ಕೀಡಾದರು. ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದೊಯ್ದರೂ, ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಕಾರಣ ನಂದಮೂರಿ ಹರಿಕೃಷ್ಣ ಸಾವನ್ನಪ್ಪಿದರು.

    English summary
    Nandamuri Harikrishna's last letter to his fans asking them to not to celebrate his 62nd birthday.
    Wednesday, August 29, 2018, 15:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X