ತಾರೆ ಪೂಜಾಗಾಂಧಿ ವಿರುದ್ಧ ನೋಟೀಸ್ ಜಾರಿ

ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಮಂಜುಶ್ರೀ ಅವರು ಪೂಜಾಗಾಂಧಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಏಪ್ರಿಲ್ 7ರಂದು ಪೂಜಾಗಾಂಧಿ ಅವರು ರಾಯಚೂರು ಸಮೀಪದ ಮಿಟ್ಟಿ ಮಲ್ಕಾಪೂರ್ ಹಾಗೂ ದೇವನಪಲ್ಲಿ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಅವರು ಹಾಗೂ ಅವರ ಬೆಂಬಲಿಗರು ಬಳಸುವ ಇನ್ನೋವಾ ಕಾರಿಗೆ ಅನುಮತಿ ಪಡೆದಿರಲಿಲ್ಲ. ಈ ಕುರಿತು ಪೊಲೀಸರು ಚುನಾವಣಾ ಅಧಿಕಾರಿ ಮಂಜುಶ್ರೀ ಅವರಿಗೆ ಲಿಖಿತ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಪೂಜಾಗಾಂಧಿ ವಿರುದ್ಧ ನೋಟೀಸ್ ಜಾರಿ ಮಾಡಲಾಗಿದೆ.
ಆದರೆ ಪೂಜಾಗಾಂಧಿ ಅವರು ಮಾತ್ರ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ತೆರಳಿದ್ದಾರೆ. ಇದಿಷ್ಟೇ ಅಲ್ಲದೆ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರ ಮೇಲೂ ನೀತಿ ಸಂಹಿತೆ ಉಲ್ಲಂಘನೆ ನೋಟೀಸ್ ಜಾರಿಗೊಳಿಸಲಾಗಿದೆ.
ಇತ್ತೀಚೆಗೆ ಪೂಜಾಗಾಂಧಿ ಅವರು ರಾಯಚೂರಿಗೆ ಭೇಟಿ ನೀಡಿದಾಗ ಅಲ್ಲಿನ ತಾಪಮಾನಕ್ಕೆ ಬೆವೆತು ಹೋಗಿದ್ದರು. ಕಡೆಗೆ ತಮ್ಮ ಇನ್ನೋವ ಕಾರಿನಲ್ಲಿ ಕೂತು ಎಸಿ ಆನ್ ಮಾಡಿ ಸುಧಾರಿಸಿಕೊಂಡಿದ್ದರು. ಕಂಪ್ಲೀಟ್ ಸುದ್ದಿ ಇಲ್ಲಿದೆ ಓದಿ. (ಏಜೆನ್ಸೀಸ್)


Click it and Unblock the Notifications











