'ರಾಜಕುಮಾರ'ನ ನಿವಾಸ ತೊರೆದ ಗನ್‌ಮ್ಯಾನ್ ಚಲಪತಿ: ಈಗ ಏನು ಮಾಡುತ್ತಿದ್ದಾರೆ?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲಿಗೆ ಹೋದರೂ ಅಲ್ಲಿ ಅವರ ಗನ್‌ಮ್ಯಾನ್ ಚಲಪತಿ ಇದ್ದೇ ಇರುತ್ತಿದ್ದರು. ಕನ್ನಡ ಚಿತ್ರರಂಗಕ್ಕೆ, ಅಪ್ಪು ಅಭಿಮಾನಿಗಳಿಗೆ ಚಲಪತಿ ಹೆಸರು ಹೊಸದೇನು ಅಲ್ಲ. ಸದಾ ಪವರ್‌ಸ್ಟಾರ್‌ ಹಿಂದೆ ನಿಂತಿರುತ್ತಿರುದ್ದ ಆಜಾನುಬಾಹು ವ್ಯಕ್ತಿ. ಅಪ್ಪು ವ್ಯಕ್ತಿತ್ವದಂತೆಯೇ ಗನ್‌ಮ್ಯಾನ್ ಚಲಪತಿ ವ್ಯಕ್ತಿತ್ವವೂ ಮಾರ್ಪಾಡಾಗಿತ್ತು.

ಪುನೀತ್‌ ರಾಜ್‌ಕುಮಾರ್ ಅಗಲಿದ ದಿನದಿಂದ ಚಲಪತಿ ಕೂಡ ನೋವಿನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೆನಪನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಚಲಪತಿ ದಿಢೀರನೇ ಅಪ್ಪು ಅರಮನೆಯನ್ನು ತೊರೆದಿದ್ದಾರೆ. ಕೆಲಸ ಬಿಟ್ಟು ಊರು ಸೇರಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ಗೆ ಹಲವು ವರ್ಷಗಳಿಂದ ಚಲಪತಿ ಗನ್ ಮ್ಯಾನ್ ಆಗಿದ್ದರು. ಅಪ್ಪು ಎಲ್ಲಿಗೆ ಹೋದರೂ, ಅವರಿಗೆ ಬೆಂಗಾವಲಾಗಿ ಚಲಪತಿ ಇರುತ್ತಿದ್ದರು. ಚಲಪತಿ ಇದ್ದಾರೆ ಅಂದರೆ, ಅಪ್ಪು ಕೂಡ ಆರಾಮಾಗಿ ಇವೆಂಟ್‌ಗಳಲ್ಲಿ, ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿರುತ್ತಿದ್ದರು. ಈಗ ಅಪ್ಪುನೇ ಇಲ್ಲ. ಅದಕ್ಕೆ ನೋವಿನಿಂದಲೇ ಅನ್ನ ಕೊಟ್ಟ ಅರಮನೆಯನ್ನು ಒಲ್ಲದ ಮನಸ್ಸಿನಿಂದ ತೊರೆದಿದ್ದಾರೆ.

ಯಾರಿಗೂ ಗನ್‌ಮ್ಯಾನ್ ಆಗಲ್ಲ

ಯಾರಿಗೂ ಗನ್‌ಮ್ಯಾನ್ ಆಗಲ್ಲ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಗನ್‌ಮ್ಯಾನ್ ಅನ್ನು ಎಂದಿಗೂ ಕೆಲಸಗಾರರಂತೆ ನೋಡಿದ್ದಿಲ್ಲ. ತಮ್ಮ ಮನೆಯವರಂತೆಯೇ ನೋಡಿಕೊಂಡಿದ್ದರು. ಈಗ ಆ ಮನೆಯಲ್ಲಿ ಅಪ್ಪುನೇ ಇಲ್ಲ. ಹೀಗಿದ್ದರೂ, ಕಳೆದ 6 ತಿಂಗಳಿನಿಂದ ನೋವಿನಿಂದಲೇ ಕೆಲಸ ಮಾಡುತ್ತಿದ್ದರು. ಅದ್ರೀಗ ಆ ಮನೆಯನ್ನು ತೊರೆದಿದ್ದು, ಮುಂದೆ ಕನ್ನಡದ ಯಾವುದೇ ಹೀರೊ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಶ್ವಿನಿಯವ್ರಿಗೆ ಅಂಗರಕ್ಷಕನಾಗಿದ್ದ ಚಲಪತಿ

ಅಶ್ವಿನಿಯವ್ರಿಗೆ ಅಂಗರಕ್ಷಕನಾಗಿದ್ದ ಚಲಪತಿ

ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳನ್ನು ಅಗಲಿ 7 ತಿಂಗಳಾಗಿವೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಅವರಿಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ನೋವಿನಿಂದಲೇ ಊರು ಸೇರಿದ್ದಾರೆ. ಅವರ ನೆನಪಿನಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

ಅಪ್ಪು ನಿವಾಸ ತೊರೆಯಲು ಕಾರಣವೇನು?

ಅಪ್ಪು ನಿವಾಸ ತೊರೆಯಲು ಕಾರಣವೇನು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಚಲಪತಿ ಅವರ ಮನೆ ತೊರೆದಿದ್ದೇಕೆ? ಅನ್ನುವ ಪ್ರಶ್ನೆ ಹುಟ್ಟುವುದು ಸಹಜ. ಅದಕ್ಕೆ ಗನ್‌ಮ್ಯಾನ್ ಚಲಪತಿ ನ್ಯೂಸ್‌ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. " ಅಪ್ಪು ಸರ್ ನಿಧನದ ಬಳಿಕ ನನಗೆ ಅಲ್ಲಿ ಕೆಲಸ ಇರಲಿಲ್ಲ. ಪ್ರತಿ ದಿನ ಕೂತು ಎದ್ದು ಬರೆಬೇಕಿತ್ತು. ಆ ಕಾರಣಕ್ಕೆ ನಾನು ಕೆಲಸ ಬಿಟ್ಟೆ. ಆದರೆ, ಮುಂದೆ ಯಾವುದೇ ಹೀರೊ ಜೊತೆ ಕೆಲಸ ಮಾಡಲ್ಲ. ಅಪ್ಪು ಸರ್ ನೆನಪು ನನ್ನಲ್ಲಿ ಜೀವಂತವಾಗಿ ಉಳಿಯಬೇಕು." ಎಂದು ಪ್ರತಿಕ್ರಿಯಿಸಿದ್ದಾರೆ.

Recommended Video

ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಕನಸು ಕಂಡಿದ್ದ ಸತೀಶ್ ವರ್ಜಾ ಮರ್ಡರ್ ! | Sathish Vajra | Filmibeat
ಎರಡು ತಿಂಗಳು ಎಲ್ಲೂ ಕೆಲಸ ಮಾಡಲ್ಲ

ಎರಡು ತಿಂಗಳು ಎಲ್ಲೂ ಕೆಲಸ ಮಾಡಲ್ಲ

ಪುನೀತ್ ರಾಜ್‌ಕುಮಾರ್ ಗನ್‌ಮ್ಯಾನ್ ಕಳೆದ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು,ಬೇರೆ ಎಲ್ಲೂ ಕೆಲಸ ಮಾಡಿಲ್ಲ. ಕೋಲಾರದ ಭಾಗೇಪಲ್ಲಿಯಲ್ಲಿ ಇದ್ದಾರೆ. ಮುಂದಿನ ತಿಂಗಳು ಯಾವ ಕೆಲಸ ಮಾಡಬೇಕು? ಅನ್ನುವ ನಿರ್ಧಾರ ಮಾಡಲಿದ್ದಾರೆ.

More from Filmibeat

English summary
Power Star Puneeth Rajkumar Gunman Chalapathi Left Appu House With Sadness, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X