Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅನಿಲ್-ಉದಯ್' ಕುಟುಂಬಕ್ಕೆ ತಲಾ 1 ಲಕ್ಷ ನೀಡಿದ ಆರ್.ಚಂದ್ರು
'ಮಾಸ್ತಿಗುಡಿ' ಚಿತ್ರದ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ನಿರ್ದೇಶಕ ಆರ್.ಚಂದ್ರು ಸಹಾಯ ಹಸ್ತ ನೀಡಿದ್ದಾರೆ. ಡಿಸೆಂಬರ್ 13, ಮಂಗಳವಾರ ಬೆಳಿಗ್ಗೆ ಉದಯ್ ಅವರ ಮನೆಗೆ ತೆರಳಿದ್ದ ಆರ್.ಚಂದ್ರು, ಅವರ ತಂದೆ-ತಾಯಿಗೆ 1 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾರೆ.
ಇನ್ನೂ, ದುರಂತದಲ್ಲಿ ಸಾವುಗೀಡಾಗಿದ್ದ ಮತ್ತೊಬ್ಬ ಖಳನಟ ಅನಿಲ್ ಅವರ ಮನೆಗೂ ಭೇಟಿ ನೀಡಿ, ಅವರಿಗೂ ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡುವ ಮೂಲಕ ನೆರವಾಗಿದ್ದಾರೆ.
ಸದ್ಯ, ಆರ್.ಚಂದ್ರು 'ಕನಕ' ಚಿತ್ರವನ್ನ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿದ್ದಾರೆ. ಇನ್ನೂ ಅನಿಲ್ ಹಾಗೂ ಉದಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಇಬ್ಬರಿಗೂ ಆರ್.ಚಂದ್ರು ಪಾತ್ರಗಳನ್ನ ಫಿಕ್ಸ್ ಮಾಡಿದ್ರಂತೆ. ಆದ್ರೆ, ಈಗ ಆ ಪಾತ್ರಗಳನ್ನ ಬೇರೆಯವರು ಮಾಡಬೇಕಾಗಿದೆ.[ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!]
ವಿಶೇಷ ಅಂದ್ರೆ, 'ಕನಕ' ಚಿತ್ರದಲ್ಲಿ ಅನಿಲ್ ಹಾಗೂ ಉದಯ್ ಅವರು ಮಾಡಬೇಕಿದ್ದ ಪಾತ್ರಗಳಿಗೆ, ಅವರ ಹೆಸರನ್ನೇ ಬಳಸಿಕೊಳ್ಳಲು ಆರ್.ಚಂದ್ರು ನಿರ್ಧಾರ ಮಾಡಿದ್ದಾರೆ.