twitter
    For Quick Alerts
    ALLOW NOTIFICATIONS  
    For Daily Alerts

    'ಅನಿಲ್-ಉದಯ್' ಕುಟುಂಬಕ್ಕೆ ತಲಾ 1 ಲಕ್ಷ ನೀಡಿದ ಆರ್.ಚಂದ್ರು

    By Bharath Kumar
    |

    'ಮಾಸ್ತಿಗುಡಿ' ಚಿತ್ರದ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ನಿರ್ದೇಶಕ ಆರ್.ಚಂದ್ರು ಸಹಾಯ ಹಸ್ತ ನೀಡಿದ್ದಾರೆ. ಡಿಸೆಂಬರ್ 13, ಮಂಗಳವಾರ ಬೆಳಿಗ್ಗೆ ಉದಯ್ ಅವರ ಮನೆಗೆ ತೆರಳಿದ್ದ ಆರ್.ಚಂದ್ರು, ಅವರ ತಂದೆ-ತಾಯಿಗೆ 1 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾರೆ.

    ಇನ್ನೂ, ದುರಂತದಲ್ಲಿ ಸಾವುಗೀಡಾಗಿದ್ದ ಮತ್ತೊಬ್ಬ ಖಳನಟ ಅನಿಲ್ ಅವರ ಮನೆಗೂ ಭೇಟಿ ನೀಡಿ, ಅವರಿಗೂ ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡುವ ಮೂಲಕ ನೆರವಾಗಿದ್ದಾರೆ.

    R Chandru Help To Anil and Uday Family

    ಸದ್ಯ, ಆರ್.ಚಂದ್ರು 'ಕನಕ' ಚಿತ್ರವನ್ನ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿದ್ದಾರೆ. ಇನ್ನೂ ಅನಿಲ್ ಹಾಗೂ ಉದಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಇಬ್ಬರಿಗೂ ಆರ್.ಚಂದ್ರು ಪಾತ್ರಗಳನ್ನ ಫಿಕ್ಸ್ ಮಾಡಿದ್ರಂತೆ. ಆದ್ರೆ, ಈಗ ಆ ಪಾತ್ರಗಳನ್ನ ಬೇರೆಯವರು ಮಾಡಬೇಕಾಗಿದೆ.[ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!]

    R Chandru Help To Anil and Uday Family

    ವಿಶೇಷ ಅಂದ್ರೆ, 'ಕನಕ' ಚಿತ್ರದಲ್ಲಿ ಅನಿಲ್ ಹಾಗೂ ಉದಯ್ ಅವರು ಮಾಡಬೇಕಿದ್ದ ಪಾತ್ರಗಳಿಗೆ, ಅವರ ಹೆಸರನ್ನೇ ಬಳಸಿಕೊಳ್ಳಲು ಆರ್.ಚಂದ್ರು ನಿರ್ಧಾರ ಮಾಡಿದ್ದಾರೆ.

    English summary
    Kannada Director R Chandru help to anil and uday family who was dead during Mastigudi shooting. R Chandru donated one lakh rupees each to the families of Anil and Uday.
    Friday, December 16, 2016, 13:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X