Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಾವಾಸ್ಯೆಯಂದು ಸ್ಮಶಾನದಲ್ಲಿ ಬಿದ್ದು ಬೆನ್ನಿಗೆ ಪೆಟ್ಟು ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ.!
Recommended Video
ಅದು ಅಮಾವಾಸ್ಯೆಯ ರಾತ್ರಿ.. ದುಷ್ಟ ಶಕ್ತಿಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಕನ್ನಡ ಚಿತ್ರ 'ಭೈರಾದೇವಿ' ಚಿತ್ರೀಕರಣ ಬಿರುಸಿನಿಂದ ಸಾಗುತ್ತಿತ್ತು. ಶಾಂತಿನಗರದ ಸ್ಮಶಾನದಲ್ಲಿ 'ಭೈರಾದೇವಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಇದಕ್ಕಾಗಿ ನಟಿ ರಾಧಿಕಾ ಕುಮಾರಸ್ವಾಮಿ ಕಾಳಿ ಅವತಾರ ತಾಳಿದ್ದರು.
ಆಗ ಸಮಯ ಸುಮಾರು 1 ಗಂಟೆ.. ಕಾಳಿ ರೂಪದಲ್ಲಿದ್ದ ರಾಧಿಕಾ ಕುಮಾರಸ್ವಾಮಿ ಗೋರಿ ಮೇಲೆ ನಡೆದುಕೊಂಡು ಬರಬೇಕಿತ್ತು. ಹಾಗೆ ಕಾಳಿ ಮಂತ್ರ ಪಠಿಸುತ್ತಲೇ ಗೋರಿ ಮೇಲೆ ನಡೆದುಕೊಂಡು ಬರುವಾಗ ಅವಘಡ ಸಂಭವಿಸಿತು.
ಅಚಾನಕ್ಕಾಗಿ ಆಯಾತಪ್ಪಿ ಗೋರಿಯಿಂದ ಕೆಳಗೆ ಬಿದ್ದು ಬಿಟ್ಟರು ನಟಿ ರಾಧಿಕಾ ಕುಮಾರಸ್ವಾಮಿ. ಪರಿಣಾಮ, ಅವರ ಬೆನ್ನಿಗೆ ಪೆಟ್ಟು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರಾದ ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಬೆಡ್ ರೆಸ್ಟ್ ನಲ್ಲಿದ್ದಾರೆ. ಮುಂದೆ ಓದಿರಿ...
ಬಿದ್ದಾಗ ಏನೂ ಗೊತ್ತಾಗಲಿಲ್ಲ.!
ಗೋರಿ ಮೇಲಿಂದ ಕೆಳಗೆ ಬಿದ್ದಾಗ, ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೋವು ಕಾಣಿಸಿಕೊಂಡಿಲ್ಲ. ಹೀಗಾಗಿ, ಅಂದು ಚಿತ್ರೀಕರಣ ಮುಂದುವರೆಸಿದ್ದಾರೆ. ಆದ್ರೆ, ಮಾರನೇ ದಿನ ಅವರಿಗೆ ಬೆನ್ನಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟರು.
ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ?
ಸ್ಪೈನಲ್ ಕಾರ್ಡ್ ಗೆ ಏಟು.!
ಗೋರಿಯಿಂದ ಬಿದ್ದ ರಾಧಿಕಾ ಕುಮಾರಸ್ವಾಮಿ ಅವರ ಸ್ಪೈನಲ್ ಕಾರ್ಡ್ ಗೆ ಏಟು ಬಿದ್ದಿದೆ. ಖಾಸಗಿ ಆಸ್ಪತ್ರೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿ ಇರುವಂತೆ ವೈದ್ಯರು ರಾಧಿಕಾ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.
'ಭೈರಾ ದೇವಿ' ಚಿತ್ರಕ್ಕಾಗಿ ಖಾಕಿ ತೊಟ್ಟ ನಟ ರಮೇಶ್ ಅರವಿಂದ್
ಇನ್ನೊಂದು ತಿಂಗಳು ಶೂಟಿಂಗ್ ಇಲ್ಲ.!
ಇನ್ನೊಂದು ತಿಂಗಳು ಕದಲುವ ಹಾಗಿಲ್ಲ ಅಂತ ವೈದ್ಯರು ಹೇಳಿರುವ ಕಾರಣ, ಯಾವುದೇ ಚಿತ್ರೀಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಭಾಗವಹಿಸುವಂತಿಲ್ಲ. ಹೀಗಾಗಿ, 'ಭೈರಾದೇವಿ' ಚಿತ್ರದ ಶೂಟಿಂಗ್ ಕೂಡ ಅನಿವಾರ್ಯವಾಗಿ ಮುಂದೂಡಬೇಕಾಗಿದೆ.
ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾಗೆ ಇರುವ ಆಸೆ ಏನ್ಗೊತ್ತಾ.?
ನಿರ್ದೇಶಕ ಶ್ರೀಜೈ ಏನಂತಾರೆ.?
''ಅಮಾವಾಸ್ಯೆ ದಿನ ಈ ಘಟನೆ ನಡೆಯಿತು. ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ಶೂಟಿಂಗ್ ಮಾಡ್ತಿದ್ವಿ. ಗೋರಿ ಮೇಲೆ ನಡೆದುಕೊಂಡು ಬರುವಾಗ ರಾಧಿಕಾ ಮೇಡಂ ಕೆಳಗೆ ಬಿದ್ದರು. ಬಿದ್ದಾಗ ಅವರಿಗೆ ಏನೂ ಅನಿಸಲಿಲ್ಲ. ಅವತ್ತು ಶೂಟಿಂಗ್ ಮಾಡಿದ್ವಿ. ಮಾರನೇ ದಿನ ರೆಸ್ಟ್ ಮಾಡಿ ಅಂತ ಹೇಳಿದ್ವಿ. ಮೈನರ್ ಪೆಟ್ಟಾಗಿದೆ. ಒಂದು ತಿಂಗಳು ರೆಸ್ಟ್ ನಲ್ಲಿ ಇರ್ತಾರೆ'' ಅಂತಾರೆ 'ಭೈರಾದೇವಿ' ಚಿತ್ರದ ನಿರ್ದೇಶಕ ಶ್ರೀಜೈ.