ಇನ್ಫೋಸಿಸ್ ಕ್ಯಾಂಪಸ್ನಲ್ಲಿ 'ಟೋಬಿ': ಉದ್ಯೋಗಿಗಳ ಜೊತೆ ಹುಲಿ ಹೆಜ್ಜೆ ಹಾಕಿದ ರಾಜ್ ಬಿ ಶೆಟ್ಟಿ!
ರಾಜ್ ಬಿ ಶೆಟ್ಟಿ ಪ್ರತಿಬಾರಿ ಸಿನಿಮಾದಲ್ಲಿ ಹೊಸದೇನನ್ನೋ ಹೇಳುವುದಕ್ಕೆ ಮುಂದಾಗುತ್ತಾರೆ. ಪ್ರತಿ ಸಿನಿಮಾದಲ್ಲೂ ಏನಾದರೂ ಎಕ್ಸ್ಪೆರಿಮೆಂಟ್ ಮಾಡುತ್ತಲೇ ಇರುತ್ತಾರೆ. ಈಗ ರಿಲೀಸ್ಗೆ ರೆಡಿಯಾಗಿರೋ ಹೊಚ್ಚ ಹೊಸ ಸಿನಿಮಾ 'ಟೋಬಿ' ಕೂಡ ಕನ್ನಡಿಗರಿಗೆ ವಿಶಿಷ್ಠ ಅನುಭವವನ್ನು ನೀಡುವ ಭರವಸೆ ನೀಡಿದ್ದಾರೆ.
'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ'ದಂತಹ ಸಿನಿಮಾಗಳನ್ನು ನೀಡಿರುವ ರಾಜ್ ಬಿ ಶೆಟ್ಟಿ ತಮ್ಮ ಪ್ರಯೋಗಗಳ ಮೂಲಕವೇ ಗೆದ್ದಿದ್ದಾರೆ. ಈಗ 'ಟೋಬಿ' ಮೂಲಕ ಮಾಸ್ ಆಡಿಯನ್ಸ್ ಅನ್ನು ತಲುಪುವುದಕ್ಕೆ ರಾಜ್ ಬಿ ಶೆಟ್ಟಿ ಮುಂದಾಗಿದ್ದಾರೆ.

ಈ ಬಾರಿ ರಿಯಲ್ ಲೈಫ್ ಕಥೆಯನ್ನು 'ಟೋಬಿ' ಮೂಲಕ ಕಾಲ್ಪನಿಕ ಟಚ್ ಕೊಟ್ಟು ಹೇಳುವುದಕ್ಕೆ ಹೊರಟಿದ್ದಾರೆ. 'ಟೋಬಿ' ಯಾರು? ಏನಿವನ ಕಥೆ? ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ. ಅದಕ್ಕಾಗಿ ರಾಜ್ ಬಿ ಶೆಟ್ಟಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಮೈಸೂರಿನ ಇನ್ಫೋಸಿಸ್ ಕಚೇರಿಗೂ ಭೇಟಿ ನೀಡಿದ್ದಾರೆ. ಅಲ್ಲಿನ ಉದ್ಯೋಗಿಗಳ ಸಮ್ಮುಖದಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾಫ್ಟ್ವೇರ್ ಉದ್ಯೋಗಿಗಳ ಮುಂದೆ 'ಟೋಬಿ'
ಕರ್ನಾಟಕದ ಹೆಮ್ಮೆಯ ಸ್ಟಾರ್ವೇರ್ ಕಂಪನಿ ಇನ್ಪೋಸಿಸ್ ಬೆಂಗಳೂರು ಅಷ್ಟೇ ಅಲ್ಲ. ಮೈಸೂರಿನಲ್ಲೂ ಕ್ಯಾಂಪಸ್ ಹೊಂದಿದೆ. ಇಲ್ಲಿ ರಾಜ್ಯ ಅಷ್ಟೇ ಅಲ್ಲ. ದೇಶದ ಮೂಲೆ ಮೂಲೆಯಿಂದ ಬಂದ ಸಾಪ್ಟ್ವೇರ್ ಇಂಜಿನಿಯರ್ಗಳು ಕೆಲಸ ಮಾಡುತ್ತಿದ್ದಾರೆ. ಇದೇ ಕ್ಯಾಂಪಸ್ಗೆ ಇತ್ತೀಚೆಗೆ ರಾಜ್ ಬಿ ಶೆಟ್ಟಿ, ಸಂಯುಕ್ತ ಹೊರನಾಡು, ಚೈತ್ರಾ ಆಚಾರ್ ಭೇಟಿ ನೀಡಿದ್ದರು. ಈ ವೇಳೆ ರಾಜ್ ಬಿ ಶೆಟ್ಟಿ ಸಿನಿಮಾ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.

ಇಂಜಿನಿಯರ್ಗಳ ಜೊತೆ ಹುಲಿ ಕುಣಿತ
ರಾಜ್ ಬಿ ಶೆಟ್ಟಿಯ 'ಟೋಬಿ' ಲುಕ್ ಈಗಾಗಲೇ ರಿಲೀಸ್ ಆಗಿದೆ. ಇನ್ಫೋಸಿಸ್ ಕಚೇರಿಯಲ್ಲೂ ಇದೇ 'ಟೋಬಿ' ಸಿನಿಮಾದ ಫಸ್ಟ್ ಲುಕ್ ಅನ್ನು ಮತ್ತೆ ಪ್ರದರ್ಶನ ಮಾಡಲಾಗಿದೆ. ಸಾಫ್ಟ್ವೇರ್ ಇಂಜಿನಿಯರ್ಗಳು ಕೂಡ 'ಟೋಬಿ'ಯನ್ನು ನೋಡಿ ಶಿಳ್ಳೆ ಹಾಕಿದ್ದಾರೆ. ಇದೇ ವೇಳೆ ರಾಜ್ ಬಿ ಶೆಟ್ಟಿ ಅವರೊಂದಿಗೆ ವೇದಿಕೆ ಮೇಲೆ ಹುಲಿ ಹೆಜ್ಜೆ ಹಾಕಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಕೆಲಸದ ಒತ್ತಡದಲ್ಲಿದ್ದ ಇಂಜಿನಿಯರ್ಗಳಿಗೆ ಶೆಟ್ಟರು ಎಂಟ್ರಿ ರಿಲೀಫ್ ಸಿಕ್ಕಂತಾಗಿದೆ.
'ಟೋಬಿ' ರಿಯಲ್ ಲೈಫ್ ಕಥೆ
ರಾಜ್ ಬಿ ಶೆಟ್ಟಿ 'ಟೋಬಿ' ಬಗ್ಗೆ ಒಂದಿಷ್ಟು ಮಾಹಿತಿಯನ್ನಂತೂ ಬಿಟ್ಟು ಕೊಟ್ಟಿದ್ದಾರೆ. 'ಟೋಬಿ' ಅನ್ನೋದು ಒಬ್ಬ ವ್ಯಕ್ತಿಯ ಹೆಸರು. ಈ ವ್ಯಕ್ತಿಯ ಪಾತ್ರದಲ್ಲಿಯೇ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸಿಕ್ಕಾಪಟ್ಟೆ ಟಫ್ ಕ್ಯಾರೆಕ್ಟರ್ ಅಂತ ಇಡೀ ತಂಡ ಹೇಳಿಕೊಂಡಿದೆ. ಹೀಗಾಗಿ 'ಟೋಬಿ' ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದಾನೆ. ಟಿಕೆ ದಯಾನಂದ್ ಈ ಕಥೆಯನ್ನು ಬರೆದಿದ್ದಾರೆ. ಆದರೆ, ಇದನ್ನು ಸಿನಿಮಾ ಮಾಡಬೇಕು ಅಂತ ಬರೆದ ಕಥೆಯಲ್ಲ. ಇದನ್ನು ರಾಜ್ ಬಿ ಶೆಟ್ಟಿ ಓದಿದ ಬಳಿಕ ಇಷ್ಟ ಆಗಿ ಸಿನಿಮಾ ರೂಪ ಕೊಟ್ಟಿದ್ದಾರೆ.
ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆ
'ಟೋಬಿ' ಲೇಖಕ ಟಿಕೆ ದಯಾನಂದ್ಗೆ ಕಾರವಾರದಲ್ಲಿ ಸಿಕ್ಕಿದ ಕಥೆ. ಅಲ್ಲಿ ಸಿಕ್ಕಿ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. ಈ ಬಗ್ಗೆ ದಯಾನಂದ್ ಫಸ್ಟ್ ಲುಕ್ ಲಾಂಚ್ ವೇಳೆ ಹೀಗೆ ಹೇಳಿದ್ದರು. "ಆತನ ಕಥೆಗೆ ನಾನು ಎಕ್ಸ್ಪ್ಲೋರ್ ಆದ್ಮೇಲೆ, ಅದನ್ನು ಬರೋ ತನಕವೂ ಟೋಬಿ ನನ್ನನ್ನು ಕಾಡುತ್ತಲೇ ಇದ್ದ. ಡಿಸ್ಟರ್ಬ್ ಮಾಡುತ್ತಲೇ ಇದ್ದ. ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಅವನು ಈ ಪರ್ಸನಾಲಿಟಿ ಇರುವ ವ್ಯಕ್ತಿಯ ಜನ ಅಂತ ಆ ಬಾಕ್ಸ್ ಒಳಗೆ ಹಾಕಬಹುದು. ಆದರೆ, ಟೋನಿ ಈ ತರಹದ ಯಾವುದೇ ಒಂದು ಬಾಕ್ಸಿಗೂ ಫಿಟ್ ಆಗಲು ನಿರಾಕರಿಸುವಂತಹ ವ್ಯಕ್ತಿತ್ವ" ಎಂದು ದಯಾನಂದ್ ಹೇಳಿದ್ದರು.


Click it and Unblock the Notifications











