twitter
    For Quick Alerts
    ALLOW NOTIFICATIONS  
    For Daily Alerts

    ಅಗಲಿದ ನಾಯಕನಿಗೆ ನಮನ ಸಲ್ಲಿಸಿದ ಸುಮಲತಾ, ರಶ್ಮಿಕಾ

    By Naveen
    |

    ಟಾಲಿವುಡ್ ನಟ ಹರಿಕೃಷ್ಣ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಹರಿಕೃಷ್ಣ ಅವರು ಮೃತರಾಗಿದ್ದು, ಎಲ್ಲರಿಗೂ ಇದೊಂದು ಶಾಕ್ ಸುದ್ದಿಯಾಗಿದೆ.

    ನಟ ಹರಿಕೃಷ್ಣ ಅವರ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಗಲಿದ ನಟನನ್ನು ಸುಮಲತಾ ಅಂಬರೀಶ್ ನೆನಪು ಮಾಡಿಕೊಂಡಿದ್ದಾರೆ.

    rashmika mandanna and sumalatha ambareesh tweets about nandamuri harikrishna death

    ಎನ್.ಟಿ.ಆರ್ ಮನೆಯಲ್ಲಿ ಇದು ಮೂರನೇ ದುರಂತ: ಅಂದು ಜಸ್ಟ್ ಮಿಸ್ ಆಗಿದ್ರು ಯಂಗ್ ಟೈಗರ್.! ಎನ್.ಟಿ.ಆರ್ ಮನೆಯಲ್ಲಿ ಇದು ಮೂರನೇ ದುರಂತ: ಅಂದು ಜಸ್ಟ್ ಮಿಸ್ ಆಗಿದ್ರು ಯಂಗ್ ಟೈಗರ್.!

    ''ನಂದಮೂರಿ ಹರಿಕೃಷ್ಣ ಅವರ ಅಗಲಿಕೆಯ ಸುದ್ದಿ ಕೇಳಿ ತುಂಬ ದುಖಃ ಆಗುತ್ತಿದೆ. ದೇವರು ಅವರ ಕುಟುಂಬಕ್ಕೆ ಈ ದುಖಃವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಲಿ.'' ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.

    ನಂದಮೂರಿ ಹರಿಕೃಷ್ಣ ದುರ್ಮರಣಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ತಾರೆಯರು ನಂದಮೂರಿ ಹರಿಕೃಷ್ಣ ದುರ್ಮರಣಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ತಾರೆಯರು

    ಅಂದಹಾಗೆ, ಅಭಿಮಾನಿಯ ಮದುವೆಯಲ್ಲಿ ಭಾಗವಹಿಸಲು ಇಂದು ಬೆಳಗಿನ ಜಾವ 4.30ರ ಸಮಯದಲ್ಲಿ ಹರಿಕೃಷ್ಣ ಅವರು ಮನೆಯಿಂದ ಹೊರಟಿದ್ದರು. ನೆಲ್ಲೂರು ಜಿಲ್ಲೆಯ ಕಾವಲಿಗೆ ತೆರಳುತ್ತಿದ್ದಾಗ ತೆಲಂಗಾಣದ ನಲ್ಗೊಂಡ ಬಳಿಯ ಅನ್ನೆಪರ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    English summary
    Actress Rashmika Mandanna and Sumalatha Ambareesh tweets about Nandamuri Harikrishna death. Popular tollywood actor and politician NT Ramarao's son Nandamuri Harikrishna died in an accident on Wednesday near Nalginda, Telangana.
    Wednesday, August 29, 2018, 18:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X