Don't Miss!
- News UPSC Result: 671ನೇ ರ್ಯಾಂಕ್ ಪಡೆದ ಚಾಮರಾಜನಗರ ಯುವಕ
- Sports KKR vs RR IPL 2024: ಸುನಿಲ್ ನರೈನ್ ಚೊಚ್ಚಲ ಐಪಿಎಲ್ ಶತಕ; ರಾಜಸ್ಥಾನ್ಗೆ ಬೃಹತ್ ಗುರಿ ನೀಡಿದ ಕೋಲ್ಕತ್ತಾ
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Lifestyle ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾಥ ಮಕ್ಕಳಿಗೆ ನಟಿ ಸಮಂತಾ ಬರ್ತ್ಡೇ ಟ್ರೀಟ್ ಏನು ಗೊತ್ತಾ?
ಸೆಲೆಬ್ರಿಟಿಗಳ ಹುಟ್ಟುಹಬ್ಬ ಆಚರಣೆ ಅಂದಮೇಲೆ ಯಾವಾಗಲು ಗ್ರ್ಯಾಂಡ್ ಆಗಿಯೇ ಇರುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಅಲ್ಲದೇ ಕೆಲವು ತಾರೆಯರು ವಿಶೇಷ ಸ್ಥಳಗಳಿಗೆ ಅಥವಾ ವಿದೇಶಕ್ಕೆ ಪ್ರವಾಸ ಹೋಗುವುದರ ಮೂಲಕ ತಮ್ಮ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಳ್ಳುವುದು ಸಾಮಾನ್ಯ.[ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಒಲವನ್ನು ಬಯಲು ಮಾಡಿದ ಸಮಂತಾ]
ಆದರೆ ಟಾಲಿವುಡ್ ನ ಬಹು ಬೇಡಿಕೆ ನಟಿ ಸಮಂತಾ ರುತ್ ಪ್ರಭು ತಮ್ಮ ಹುಟ್ಟು ಹಬ್ಬವನ್ನು ಇತರೆ ಸೆಲೆಬ್ರಿಟಿಗಳಿಗಿಂತ ಡಿಫರೆಂಟ್ ಆಗಿ ಆಚರಣೆ ಮಾಡಿಕೊಂಡು, ಅನಾಥ ಮಕ್ಕಳಿಗೆ ವಿಶೇಷ ಟ್ರೀಟ್ ನೀಡುವ ಮೂಲಕ ಸಂತೋಷ ಪಟ್ಟಿದ್ದಾರೆ. ಅದೇನು ಗೊತ್ತಾ?
'ಬಾಹುಬಲಿ 2' ಸಿನಿಮಾ ತೋರಿಸಿದ್ದಾರೆ
ಹೌದು, ಟಾಲಿವುಡ್ ನ ಕ್ಯೂಟ್ ಗರ್ಲ್ ಸಮಂತಾ ರುತ್ ಪ್ರಭು ನಿನ್ನೆ (ಏಪ್ರಿಲ್ 28) ತಮ್ಮ 30 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಬರ್ತ್ ಡೇ ದಿನದಂದೇ 'ಬಾಹುಬಲಿ 2' ಸಿನಿಮಾ ರಿಲೀಸ್ ಆಗಿದ್ದು, ಹೈದರಾಬಾದಿನ ಥಿಯೇಟರ್ ಒಂದರಲ್ಲಿ ಅನಾಥ ಮಕ್ಕಳಿಗೆ ಈ ಸಿನಿಮಾ ತೋರಿಸಿದ್ದಾರೆ.
100 ಅನಾಥ ಮಕ್ಕಳಿಂದ 'ಬಾಹುಬಲಿ' ಚಿತ್ರ ವೀಕ್ಷಣೆ
ಅಂದಹಾಗೆ ಸಮಂತಾ ಇತ್ತೀಚೆಗೆ ತಾನೆ ತಮ್ಮ ಎನ್ ಜಿಒ ಪ್ರತ್ಯುಶಾ ಮೂಲಕ ಒಂದು ಅನಾಥಶ್ರಮವನ್ನು ದತ್ತು ತೆಗೆದುಕೊಂಡಿದ್ದರು. ಅಲ್ಲಿನ ಮಕ್ಕಳು 'ಬಾಹುಬಲಿ 2' ಸಿನಿಮಾ ನೋಡಬೇಕೆಂಬ ಆಸೆಯನ್ನು ಸಮಂತಾ ಅವರಲ್ಲಿ ಹೇಳಿಕೊಂಡಿದ್ದಕ್ಕೆ, ಅವರ ಹುಟ್ಟುಹಬ್ಬದ ಪ್ರಯುಕ್ತ 100 ಅನಾಥ ಮಕ್ಕಳಿಗೆ ಸಿನಿಮಾ ತೋರಿಸಿದ್ದಾರೆ.
ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ
ಅನಾಥ ಮಕ್ಕಳಿಗೆ 'ಬಾಹುಬಲಿ 2' ಸಿನಿಮಾ ತೋರಿಸಿದ ಸಮಂತಾ ರವರು 'ಒಬ್ಬರೇ ಬರ್ತ್ ಡೇ ಆಚರಣೆ ಮಾಡಿಕೊಳ್ಳುವುದರ ಬದಲು ಇತರರಿಗೆ ಸಹಾಯ ಮಾಡಿದರೆ ನನಗೆ ಹೆಚ್ಚಿನ ಸಂತೋಷ ಸಿಗುತ್ತದೆ. ಇದಕ್ಕೆ ಯಾರಿಂದಲೂ ಸ್ಫೂರ್ತಿ ಹೊಂದಿಲ್ಲ" ಎಂದು ಹೇಳಿದರು.
'ಬಾಹುಬಲಿ 2' ಚಿತ್ರದ ಬಗ್ಗೆ ಸಮಂತಾ ಹೇಳಿದ್ದೇನು?
ಈ ಹಿಂದೆ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಅಭಿನಯಿಸಿದ್ದ ಸಮಂತಾ 'ಬಾಹುಬಲಿ' ಚಿತ್ರದ ಬಗ್ಗೆ ಮಾತಾಡಿ " 'ಬಾಹುಬಲಿ' ಸಿನಿಮಾ ಅಲ್ಲ. ಇದೊಂದು ರೀತಿ ದೀಪಾವಳಿ ಹಬ್ಬ ಆಚರಣೆ ಮಾಡಿದಂತೆ. ರಾಜಮೌಳಿ ಅವರ ಹಾರ್ಡ್ ವರ್ಕ್ ಮತ್ತು ಸಹನೆಯಿಂದ ಈ ಒಂದು ಮಹಾಕಾವ್ಯ ಮೂಡಿಬಂದಿದೆ' ಎಂದರು.