Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಣಿಕ್ಯ ನಂತರ ಸುದೀಪ್ ಮುಂದಿನ ಚಿತ್ರ ಯಾವುದು?
ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ 'ಮಾಣಿಕ್ಯ' ಚಿತ್ರದ ನಂತರ ಮುಂದಿನ ಚಿತ್ರ ಯಾವುದು? ಈ ಬಗ್ಗೆ ವಿಷಯವೊಂದು ಹೊರಬಿದ್ದಿದೆ.
ಸುಮಾರು ಒಂದು ವರ್ಷದಿಂದ ಸುದೀಪ್ ಕಾಲ್ಶೀಟಿಗಾಗಿ ಕಾಯುತ್ತಿದ್ದ ನಂದಕಿಶೋರಿಗೆ ಈಗ ಕಿಚ್ಚ ಸುದೀಪ್ ಡೇಟ್ಸ್ ನೀಡಿದ್ದಾರೆ. ಕಾಲಿ ಕ್ವಾಟ್ರು 'ವಿಕ್ಟರಿ' ಚಿತ್ರವನ್ನು ನಿರ್ದೇಶಿಸಿದ್ದ ನಂದ ಕಿಶೋರ್, ಸುದೀಪ್ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಈ ಚಿತ್ರಕ್ಕೆ ಬಂಡವಾಳ ಹೂಡುವವರು ಚಂದ್ರು. ಮಾಣಿಕ್ಯ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದ ವೇಳೆ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆಯಿದೆ ಎಂದು ಚಿತ್ರಲೋಕ ಡಾಟ್ ಕಾಂ ವರದಿ ಮಾಡಿದೆ.
ಕೆಲವು ತಿಂಗಳ ಹಿಂದೆಯೇ ನಂದಕಿಶೋರ್ ನಿರ್ದೇಶನದಡಿಯ ಚಿತ್ರಕ್ಕೆ ಒಪ್ಪಿದ್ದ ಸುದೀಪ್, ಈಗ ಡೇಟ್ಸ್ ನೀಡಿದ್ದಾರೆ. ನಂದಕಿಶೋರ್ ಪೊಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿಕೊಂಡಿದ್ದಾರೆ.
ಹಾಗಿದ್ದರೆ ಸುದೀಪ್ ಅವರ ಖ್ಯಾತ ತಮಿಳು ನಿರ್ದೇಶಕ ರವಿಕುಮಾರ್ ಜೊತೆಗಿನ ಚಿತ್ರದ ಅಪ್ಡೇಟ್ಸ್ ಏನಾಯಿತು? ಮುಂದೆ ಓದಿ...
ಲೇಟಾಗುವ ಸಾಧ್ಯತೆ ಹೆಚ್ಚು
ಮಾಣಿಕ್ಯ ಚಿತ್ರದ ನಂತರ ಸುದೀಪ್, ಖ್ಯಾತ ತಮಿಳು ನಿರ್ದೇಶಕ ಕೆ ಎಸ್ ರವಿಕುಮಾರ್ ನಿರ್ದೇಶನದ ಚಿತ್ರದಲ್ಲಿ ನಟಿಸುವುದು ಹೆಚ್ಚುಕಮ್ಮಿ ಕನ್ಫರ್ಮ್ ಆಗಿತ್ತು. ಆದರೆ ಈಗ ಚಿತ್ರ ಸೆಟ್ಟೇರುವುದು ಸ್ವಲ್ಪ ಲೇಟಾಗುವ ಸಾಧ್ಯತೆಯಿದೆ.
ರವಿಕುಮಾರ್ ಬ್ಯೂಸಿ ಶೆಡ್ಯೂಲ್
ರವಿಕುಮಾರ್ ಈಗ ರಜನೀಕಾಂತ್ ಅಭಿನಯದ ಚಿತ್ರದಲ್ಲಿ ಬ್ಯೂಸಿಯಾಗಿರುವುದರಿಂದ ಚಿತ್ರ ಆರೇಳು ತಿಂಗಳು ಲೇಟಾಗುವ ಸಾಧ್ಯತೆ ಹೆಚ್ಚು. ರವಿಕುಮಾರ್ - ಸುದೀಪ್ ಕಾಂಬಿನೇಶನಿನ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುವುದು ಖಾತ್ರಿಯಾಗಿತ್ತು.
ಮಾಣಿಕ್ಯ ಶೂಟಿಂಗ್
ಮಾಣಿಕ್ಯ ಚಿತ್ರದ ಶೂಟಿಂಗ್ ಸದ್ಯ ಭರದಿಂದ ಸಾಗಿದೆ. ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಬೈಕ್ ಸ್ಟಂಟ್ ವೇಳೆ ಸುದೀಪ್ ಗಾಯಗೊಂಡು, ಚೇತರಿಸಿ ಕೊಂಡಿದ್ದರು.
ಯುಗಾದಿ ವೇಳೆ ಮಾಣಿಕ್ಯ
ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಮಾಣಿಕ್ಯ ಚಿತ್ರ ಇದೇ ಯುಗಾದಿ ಹಬ್ಬದ ವೇಳೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದರು.
ರವಿಮಾಮನ ಜೊತೆ ಸುದೀಪ್
ಮಾಣಿಕ್ಯ ಚಿತ್ರದ ಮೂಲಕ ಮೊದಲ ಬಾರಿಗೆ ಕನಸುಗಾರ ರವಿಚಂದ್ರನ್ ಮತ್ತು ಸುದೀಪ್ ಒಟ್ಟಾಗಿ ನಟಿಸಲಿದ್ದಾರೆ. ತೆಲುಗಿನ ಮಿರ್ಚಿ ಚಿತ್ರದ ರಿಮೇಕಾಗಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸುದೀಪ್, ರಮ್ಯಾ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಶೋಭರಾಜ್, ರವಿಶಂಕರ್ ಮುಂತಾದ ಕಲಾವಿದರು ಇದ್ದಾರೆ.