ಪ್ರಬುದ್ಧ ಪ್ರೇಮಕಥೆಯ ಭಾವನಾತ್ಮಕ ಜರ್ನಿ ಈ 'ಸ್ವಾತಿ ಮುತ್ತಿನ ಮಳೆ ಹನಿ'
ಮೋಹಕತಾರೆ ರಮ್ಯಾ ಇದೇ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಬೇಕಿತ್ತು. ಇನ್ನೇನು ತಾವೇ ನಿರ್ಮಾಣ ಮಾಡಿ ನಟಿಸಬೇಕು ಅಂತಾನೂ ತೀರ್ಮಾನ ಮಾಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ್ದರು.
ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ಕೇವಲ ನಿರ್ಮಾಣಕ್ಕೆ ಮಾತ್ರ ಮಾಡಲು ನಿರ್ಧರಿಸಿದ್ದರು. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಸಿರಿ ರವಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ಬಹುಬೇಗನೇ ಸಿನಿಮಾ ಮಾಡಿ ಮುಗಿಸಿದ್ದು, ಸದ್ಯ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾ ರಾಜ್ ಬಿ ಶೆಟ್ಟಿಯೇ ಹೀರೊ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಈ ಸಿನಿಮಾ ಪೋಸ್ಟರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಜೊತೆ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹಾ ಶರ್ಮಾ, ಜೆಪಿ ತುಮ್ಮಿನಾಡ್, ಗೋಪಾಲ್ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರವೀಣ್ ಶ್ರೀಯಾನ್ ಕ್ಯಾಮರಾ ಹಾಗೂ ಎಡಿಟಿಂಗ್ ಮಾಡುತ್ತಿದ್ದು, ಮಿಧುನ್ ಮುಕುಂದನ್ ಟ್ಯೂನ್ ಹಾಕಿದ್ದಾರೆ. ಅಂದ್ಹಾಗೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಒಂದು ಪ್ರಬುದ್ಧ ಲವ್ಸ್ಟೋರಿ. ಇದೊಂದು ಭಾವುಕ ಪ್ರಯಾಣ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಭಾವುಕ ಜರ್ನಿಯನ್ನು ಹೇಗಿರುತ್ತೆ ಅನ್ನೋದನ್ನು ಹೇಳುವುದಕ್ಕೇ ಸಿನಿಮಾದ ಕೆಲವು ಭಾವನಾತ್ಮಕ ಫೋಟೊಗಳನ್ನು ಚಿತ್ರತಂಡ ರಿಲೀಸ್ ಮಾಡಿದೆ.


Click it and Unblock the Notifications











