Don't Miss!
- News ಕುಡಿಯಲು ನೀರಿಲ್ಲ ಚುನಾವಣೆ ಮಾಡ್ತಾರಂತೆ, ನೀರು ಕೊಡಿ ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡ್ತೀವಿ- ವಾಟಾಳ್ ವಾರ್ನಿಂಗ್
- Automobiles KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್ ಬೆಲೆ ಏನು, EMI ಎಷ್ಟು?
- Sports Rohit Sharma: ಆರ್ಸಿಬಿಗೆ ಬನ್ನಿ ರಾಜನಂತೆ ನೋಡ್ಕೊಂತೀವಿ- ರೋಹಿತ್ ಶರ್ಮಾಗೆ ಸ್ವಾಗತ ಕೋರಿದ ಬೆಂಗಳೂರು ಫ್ಯಾನ್ಸ್
- Finance ಹಣದ ಕಂತೆಯನ್ನೇ ಹಾಸಿಗೆ ಮಾಡಿ ಮಲಗಿದ ರಾಜಕಾರಣಿ ಫೋಟೋ ವೈರಲ್!
- Lifestyle ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ..! ಎಷ್ಟು ಲಾಭವಿದೆ ಗೊತ್ತಾ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಿ.ಎನ್.ಸೀತಾರಾಂ 'ಮಗಳು ಜಾನಕಿ' ಗಾನವಿಯ 'ಭಾವಚಿತ್ರ' ಅನಾವರಣ: ಏನಿದು ವಿಷಯ?
ಟಿಎನ್ ಸೀತಾರಾಂ ನಿರ್ದೇಶಿಸಿದ 'ಮಗಳು ಜಾನಕಿ' ಧಾರಾವಾಹಿ ನೋಡಿದವರಿಗೆ ನಟಿ ಗಾನವಿ ಲಕ್ಷ್ಮಣ್ ಪರಿಚಯ ಚೆನ್ನಾಗೇ ಇರುತ್ತೆ. ಇನ್ನು ಇತ್ತೀಚೆಗೆ ತೆರೆಕಂಡ 'ಹೀರೋ' ಸಿನಿಮಾ ನೋಡಿದವರಿಗೂ ಗಾನವಿ ಲಕ್ಷ್ಮಣ ನೆನಪಿನಲ್ಲಿರುತ್ತಾರೆ. 'ಹೀರೋ' ಸಿನಿಮಾದಿಂದ ಗ್ರ್ಯಾಂಡ್ ಆಗಿ ಬಿಗ್ ಸ್ಕ್ರೀನ್ಗೆ ಎಂಟ್ರಿ ಗಾನವಿಯ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ 'ಭಾವಚಿತ್ರ'. ಈ ಸಿನಿಮಾ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಈಗ ಹಾಡುಗಳನ್ನು ನೋಡಿ ಅಂತಿದೆ.
'ಭಾವಚಿತ್ರ' ಸಿನಿಮಾದ ಕತೆ ಗಾನವಿ ಲಕ್ಷ್ಮಣ್ ಸುತ್ತನೇ ಸಾಗುತ್ತೆ. ಒಂದು ಊರಿನಲ್ಲಿ ಒಂದು ಹಳೆಯ ದೇವಸ್ಥಾನ. ಅದರ ಶಿಲ್ಪಕಲೆಯ ಬಗ್ಗೆ ಅಧ್ಯಯನ ನಡೆಸುವ ಪಾತ್ರದಲ್ಲಿ ಗಾನವಿ 'ಭಾವಚಿತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಿದ್ದು, ಭಾವ ಚಿತ್ರದ ಕತೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಗಾನವಿ 'ಭಾವಚಿತ್ರ'ಕ್ಕೆ ಇತಿಹಾಸದ ತಿರುವು
'ಭಾವಚಿತ್ರ' ಇದೊಂದು ಥ್ರಿಲ್ಲರ್, ಸೆಂಟಿಮೆಂಟ್ ಸಿನಿಮಾ ಅನ್ನುವುದು ಸಿನಿಮಾದ ಟ್ರೈಲರ್ ಹೇಳುತ್ತಿದೆ. ಸಿನಿಮಾದ ಹೆಸರೇ ಹೇಳುವಂತೆ ಕಥೆ ಭಾವಚಿತ್ರ ಹಾಗೂ ಕ್ಯಾಮೆರಾ ಮೇಲೆ ಸಾಗುತ್ತೆ ಅನ್ನುವುದನ್ನು ಚಿತ್ರತಂಡವೇ ಹೇಳಿದೆ. ಹಾಗಂತ ಕೇವಲ ಥ್ರಿಲ್ಲರ್, ಸೆಂಟಿಮೆಂಟ್ ಅಷ್ಟೇ ಅಲ್ಲ. ಇಲ್ಲಿ ಲವ್ ಸ್ಟೋರಿ ಕೂಡ ಇದೆ. ಅನಿರೀಕ್ಷಿತ ಟ್ವಿಸ್ಟ್ ಅಂಡ್ ಟರ್ನ್ ಗಳಿವೆ. ಇಲ್ಲಿ ಗಾನವಿ ಶಿಲ್ಪಕಲೆ ಅಭ್ಯಾಸ ಮಾಡಲು ಬಂದಿದ್ದರೆ. ಅತ್ತ ಚಿತ್ರದ ನಾಯಕ ಫೋಟೊಗ್ರಫಿ ಮಾಡಲು ಬಂದಿರುತ್ತಾನೆ. ಇವರಿಬ್ಬರ ನಡುವೆ ನಡೆಯುವ ಕಥೆಯೇ ಈ 'ಭಾವಚಿತ್ರ'.
ಮಗಳು ಜಾನಕಿ ಧಾರಾವಾಹಿ ವೇಳೆ ಕಥೆ ಹೇಳಿದ್ದ ನಿರ್ದೇಶಕ
'ಭಾವಚಿತ್ರ' ಸಿನಿಮಾ ಕಥೆಯನ್ನು ನಿರ್ದೇಶಕ ಗಿರೀಶ್ ಕುಮಾರ್ 'ಮಗಳು ಜಾನಕಿ' ಧಾರಾವಾಹಿಯ ಸಮಯದಲ್ಲೇ ಗಾನವಿ ಲಕ್ಷ್ಮಣ್ಗೆ ಹೇಳಿದ್ದರು. ಆಗಲೇ ಗಾನವಿ ಕಥೆಯನ್ನು ಇಷ್ಟಪಟ್ಟಿದ್ದರು. ಹೀಗಾಗಿ ಗಾನವಿ ಹಾಗೂ ನಿರ್ದೇಶಕರದ್ದು ತೀರಾ ಹಳೆಯ ಸಂಬಂಧ. 'ಭಾವಚಿತ್ರ' ಸಿನಿಮಾದಲ್ಲಿ ಗಾನವಿಗೆ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವುದು ಚಕ್ರವರ್ತಿ. ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ 'ಯಾನ' ಸಿನಿಮಾದಲ್ಲಿ ಚಕ್ರವರ್ತಿ ನಟಿಸಿದ್ದು, ಇದು ಅವರ 2ನೇ ಸಿನಿಮಾ.
2017ರಲ್ಲಿ ಬಿಡುಗಡೆಯಾಗಿದ್ದ 'ಅವಾಹಯಾಮಿ' ಸಿನಿಮಾದ ನಿರ್ದೇಶಕ ಗಿರೀಶ್ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಗಾನವಿ ಜೊತೆ ಗಿರೀಶ್ ಬಿಜ್ಜಳ, ಶ್ರೀನಾಥ್ರಾವ್, ರಜತ್ ಮಯಿ ಮುಂತಾದವರು ನಟಿಸಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಈ ಸಿನಿಮಾವನ್ನು ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಗುಡಿಬಂಡೆಯಲ್ಲಿ ಚಿತ್ರೀಕರಣ ಮಾಡಾಗಿದೆ. ಈಗ ಸಿನಿಮಾದ ಹಾಡುಗಳನ್ನು ಗಾಯಕ ರಾಜೇಶ್ಕೃಷ್ಣನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.