'ಬಾಸ್' ಸಿನಿಮಾ ಬಿಡುಗಡೆಗೆ ಮತ್ತೆ ಟೆನ್ಷನ್; ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ ದರ್ಶನ್
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಕಾನೂನು ಸಮರ ಎದುರಿಸುತ್ತಿದ್ದಾರೆ. ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ 'ಬಾಸ್' ಸಿನಿಮಾವೊಂದು ಬಿಡುಗಡೆ ವಿಘ್ನಗಳನ್ನು ಎದುರಿಸುತ್ತಿದೆ. ಅಷ್ಟಕ್ಕೂ ದರ್ಶನ್ಗೂ 'ಬಾಸ್' ಸಿನಿಮಾಗೂ ಟೈಟಲ್ ಅಷ್ಟೇ ಅಲ್ಲ. ಹಲವು ವಿಷಯಗಳಿಗೆ ಸಾಮ್ಯತೆಯಿದೆ ಅನ್ನೋದು ಈಗಾಗಲೇ ವರದಿಯಾಗಿದೆ.
'ಬಾಸ್' ಸಿನಿಮಾ ರೇಣುಕಾಸ್ವಾಮಿ ಪ್ರಕರಣವನ್ನೇ ಇಟ್ಕೊಂಡು ಕಥೆಯನ್ನು ಹೆಣೆದಿದೆ ಎಂಬ ಆರೋಪವಿದೆ. ಆದರೆ, ಚಿತ್ರತಂಡ ಈ ಆರೋಪವನ್ನು ಸರಾಸಗಟಾಗಿ ತಳ್ಳಿ ಹಾಕಿದೆ. ಆದರೂ, ಸಿನಿಮಾ ಟೀಸರ್ ಹಾಗೂ ತುಣುಕುಗಳು ಈ ಪ್ರಕರಣಕ್ಕೆ ಹೊಂದಿಕೊಂಡಂತೆ ಭಾಸವಾಗುವದಂತೂ ನಿಜ. ಈ ಕಾರಣಕ್ಕಾಗಿಯೇ ವಿಜಯಲಕ್ಷ್ಮಿ ದರ್ಶನ್ ಸಿನಿಮಾ ಬಿಡುಗಡೆಗೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಅಲ್ಲಿಂದ 'ಬಾಸ್' ಸಿನಿಮಾ ತಂಡ ಬಿಡುಗಡೆ ಮಾಡಲು ಕಾನೂನು ಹೋರಾಟ ಮುಂದುವರೆಸಿತ್ತು. ಕೊನೆಗೂ ನ್ಯಾಯಾಲಯ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ ಬಳಿಕ ಇದೇ ಜೂನ್ 19ಕ್ಕೆ ಸಿನಿಮಾ ಬಿಡುಗಡೆಗೆ ಮುಂದಾಗಿತ್ತು. ಆದ್ರೀಗ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಿನಿಮಾ ಬಿಡುಗಡೆಗೆ ತಡೆ ಕೋರಿ ಕರ್ನಾಟಕ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.


Click it and Unblock the Notifications