Don't Miss!
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bigg Boss Kannada OTT: ಜೈಲಿಗೆ ಹೋಗಿದ್ದಕ್ಕೆ ಬಿಗ್ ಬಾಸ್ಗೆ ಅವಾಜ್ ಹಾಕಿದ ಸೋನು ಗೌಡ?
ಬಿಗ್ ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದವರಿಗೆ ಜೈಲಿಗೆ ಹಾಕುತ್ತಾರೆ. ಅಟ್ ದಿ ಸೇಮ್ ಟೈಮ್ ಬೆಸ್ಟ್ ಪರ್ಫಾಮರ್ ನನ್ನು ಗುರುತಿಸುತ್ತಾರೆ. ಮನೆ ಮಂದಿಯೆಲ್ಲಾ ಸೇರಿಕೊಂಡು ಯಾರು ಕಳಪೆ ಪ್ರದರ್ಶನ ನೀಡಿದವರು ಎಂದು ಹೇಳಬೇಕು. ಹೆಚ್ಚು ವೋಟ್ ಬಂದವರನ್ನು ಜೈಲಿಗೆ ಹಾಕಲಾಗುತ್ತದೆ. ಕಳೆದ ವಾರ ಜಯಶ್ರೀ ಕಳಪೆ ಪ್ರದರ್ಶನ ನೀಡಿದ್ದರು. ಹಾಗಾಗಿ ಜೈಲಿನಲ್ಲಿ ಇದ್ದರು. ಆದರೆ ಈ ವಾರ ಜಯಶ್ರೀ ಆ ಕಳಂಕವನ್ನು ಬ್ರೇಕ್ ಮಾಡಿದ್ದಾಳೆ. ಬೆಸ್ಟ್ ಪರ್ಫಾಮರ್ ಎಂಬ ಬಿರುದನ್ನು ಪಡೆದಿದ್ದಾರೆ.
Bigg Boss Kannada OTT: ನಿಲ್ತಿಲ್ಲಪ್ಪಾ ನಂದಿನಿ ಮತ್ತು ಜಯಶ್ರೀ ಫೈಟ್!
ಆದರೆ ಈ ವಾರದ ಕಳಪೆಯಾಗಿ ಸೋನುಗೌಡ ಜೈಲುಪಾಲಾಗಿದ್ದಾರೆ. ಇಷ್ಟು ದಿನ ಆರಾಮವಾಗಿ ಇದ್ದ ಸೋನು, ತಾನು ಯಾವತ್ತಿಗೂ ಕಳಪೆ ಪ್ರದರ್ಶನದ ಬೋರ್ಡ್ ಹಿಡಿಯುತ್ತೀನಿ ಎಂದು ಭಾವಿಸಿರಲಿಲ್ಲ ಎನಿಸುತ್ತದೆ. ಅನಿರೀಕ್ಷಿತವಾಗಿ ಸಿಕ್ಕ ಉಡುಗೊರೆಯನ್ನು ಒಪ್ಪಿಕೊಳ್ಳುವುದಕ್ಕೆ ಸೋನು ಪಟ್ಟ ಪಾಡು ಅಷ್ಟಿಷ್ಟಲ್ಲ.
ಸೋನುಗೆ ಕಳಪೆ ಬಿರುದು
ಬಿಗ್ ಬಾಸ್ ಮನೆಯಲ್ಲಿ ಗೆಲುವು ಸಾಧಿಸಬೇಕು ಎಂದರೆ ಎಲ್ಲದರಲ್ಲೂ ಆಕ್ಟಿವ್ ಆಗಿರಬೇಕು. ಮನೆ ಸದಸ್ಯರ ಜೊತೆಗೆ ಬಾಂಧವ್ಯ ಚೆನ್ನಾಗಿರಬೇಕು, ಮನೆ ಕೆಲಸವನ್ನು ಮಾಡಬೇಕು, ನೋಡುಗರಿಗೆ ಎಂಟರ್ಟೈನ್ ಮಾಡಬೇಕು. ತನ್ನಲ್ಲಿರುವ ಕಲೆಯನ್ನು ಪ್ರದರ್ಶನ ಮಾಡಬೇಕು. ಇಲ್ಲವಾದರೆ ನಾಮಿನೇಟ್ ಆಗುವ ಸಂದರ್ಭದಲ್ಲಿಇದೆಲ್ಲವೂ ಮ್ಯಾಟರ್ ಆಗುತ್ತದೆ. ಮನೆಯಿಂದ ಹೊರ ಬರಬೇಕಾಗುತ್ತದೆ. ಇದೀಗ ಮನೆಯ ಕೆಲಸ ಮಾಡಲು ಸೋಮಾರಿತನ ಪ್ರದರ್ಶಿಸುವ ಸೋನುಗೆ ಕಳಪೆ ಪ್ರದರ್ಶನ ಸಿಕ್ಕಿದೆ.
Bigg Boss Kannada OTT: ರೂಪೇಶ್ಗೆ ಮಗಳನ್ನು ಕೊಟ್ಟ ಆರ್ಯವರ್ಧನ್: ಒಂದೇ ಮನೆಯಲ್ಲಿ ಅಳಿಯ ಮಾವ!
ರಾಕಿ ಮೇಲೆ ಸೋನು ಕೆಂಡಾಮಂಡಲ
ಈ ವಾರದ ಕಳಪೆ ಪ್ರದರ್ಶನದಲ್ಲಿ ಸೋನು ಜೈಲು ಪಾಲಾಗಿದ್ದೆ ತಡ, ಜೈಲಿನ ಒಳಗೆ ಹೋಗಿ ಗಳಗಳನೆ ಕಣ್ಣೀರು ಸುರಿಸಿದ್ದಾಳೆ. ಸೋನು ಜೈಲಿಗೆ ಹೋಗುವುದಕ್ಕೆ ರಾಕೇಶ್ ಕಾರಣನಾಗಿದ್ದಾನೆ. ಹಾಗಂತ ರಾಕೇಶ್ ಒಬ್ಬನ ಮಾತು ನಡೆಯುವುದಿಲ್ಲ. ಮನೆ ಮಂದಿಯ ಅಭಿಪ್ರಾಯದಿಂದ ಯಾರಿಗೆ ಹೆಚ್ಚು ಅಂಕ ಬಂದಿರುತ್ತದೋ ಅಂಥವರಿಗೆ ಬಿಗ್ ಬಾಸ್ ಶಿಕ್ಷೆ ನೀಡುತ್ತದೆ. ಆದರೆ ರಾಕೇಶ್ ಕೂಡ ಕಳಪೆ ಎಂದುಬಿಟ್ಟ ಅನ್ನೋ ಕಾರಣಕ್ಕೆ ಸೋನುಗೆ ತೀರಾ ಹರ್ಟ್ ಆಗಿದೆ.
ಇನ್ನಾದರೂ ಸರಿಯಾಗುತ್ತಾಳಾ ಸೋನು?
ಬಿಗ್ ಬಾಸ್ ಮನೆಯೊಳಗೆ ಮನೆ ಕೆಲಸದ ವಿಚಾರದಲ್ಲಿ ದೊಡ್ಡ ಸೋಮಾರಿಗಳು ಎಂದರೆ ಅದು ಸೋನು, ಚೈತ್ರಾ ಮತ್ತು ಜಯಶ್ರೀ. ಮೂರು ಜನ ಮಾತನಾಡುತ್ತಾ ಕುಳಿತು ಬಿಟ್ಟರೆ ಮುಗಿಯಿತು, ಯಾರೇ ಕೆಲಸ ಮಾಡುತ್ತಿದ್ದರು ಮನಸ್ಸು ಕರಗಲ್ಲ. ಮಾಡಬೇಕು ಎಂದು ಎನಿಸುವುದಿಲ್ಲ. ಮೊನ್ನೆಯಷ್ಟೇ ಇದೇ ವಿಚಾರಕ್ಕೆ ಸೋನುಗೆ, ರಾಕೇಶ್ ಸಮಾಧಾನವಾಗಿ ಬುದ್ದಿ ಹೇಳಿಕೊಟ್ಟಿದ್ದರು. ಮನೆ ಕೆಲಸ ಮಾಡಲು ಉರಿದುಂಬಿಸಿದ್ದರು. ಆದರೆ ಸೋನುದು ಒಂದೇ ಹಠ. ನಾವೇನು ಇಲ್ಲಿ ಕೆಲಸ ಮಾಡಲು ಬಂದಿದ್ದೀವಾ ಅಂತ. ಇದೇ ಕಾರಣಕ್ಕೆ ರಾಕೇಶ್ ಕಳಪೆ ಬಿರುದು ನೀಡಿದ್ದಾರೆ.
ಬಿಗ್ ಬಾಸ್ ಅನ್ನೇ ತರಾಟೆಗೆ ತೆಗೆದುಕೊಂಡ ಸೋನು
ಇಷ್ಟು ವರ್ಷ ನಡೆದುಕೊಂಡ ಬಂದ ಬಿಗ್ ಬಾಸ್ ಶೋನಲ್ಲಿ ಯಾವ ಸ್ಪರ್ಧಿಗಳು ಬಿಗ್ ಬಾಸ್ ಅನ್ನು ಬೈದಿದ್ದು ಇಲ್ಲ. ಆದರೆ ಸೋನು ಸಾಕಷ್ಟು ಬಾರಿ ಬಿಗ್ ಬಾಸ್ ಮೇಲೆ ಗರಂ ಆಗಿದ್ದಾಳೆ. ಇದೀಗ ಕಳಪೆ ಬೋರ್ಡ್ ಹೊತ್ತು, ಜೈಲು ಸೇರಿದ ಸೋನು, ಮತ್ತೆ ಗರಂ ಆಗಿದ್ದಾರೆ. ನಾವೇನು ಇಲ್ಲಿ ಮನೆ ಕೆಲಸ ಮಾಡಲು ಬಂದಿದ್ದೀವಾ..? ಯಾವನು ಹೇಳಿದ್ದು. ಇವತ್ತು ಬುದ್ದಿ ಕಲಿತಂತೆ ಆಯ್ತು. ನಂಬಿದವರೆ ದ್ರೋಹ ಮಾಡಿದರು. ಸರಿಯಾಗಿ ಆಯಿತು ಬಿಡು ಎಂದು ಆಕ್ರೋಶ ಹೊರ ಹಾಕಿದ್ದಾಳೆ.