Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Gandhada Gudi Twitter Review: ಅಪ್ಪು ಕರೆದುಕೊಂಡು ಹೋಗುವ ಗುಡಿಯೇ 'ಗಂಧದ ಗುಡಿ'!
ಇಷ್ಟು ದಿನ ಆದು ಕೂತಿದ್ದ ಕ್ಷಣ ಬಂದೇ ಬಿಟ್ಟಿದೆ. ಪುನೀತ್ ರಾಜ್ಕುಮಾರ್ ಕನಸನ್ನು ಈಗಾಗಲೇ ಹಲವು ಮಂದಿ ಕಣ್ತುಂಬಿಕೊಂಡಿದ್ದಾರೆ. 'ಗಂಧದ ಗುಡಿ' ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲೆಲ್ಲಿ ಸಿನಿಮಾ ನೋಡಿದ್ದಾರೋ ಅಲ್ಲೆಲ್ಲಾ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ.
90 ನಿಮಿಷ ತೆರೆಮೇಲೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೋಡಿ ಫ್ಯಾನ್ಸ್ ಭಾವಕರಾಗಿದ್ದಾರೆ. ಮತ್ತೆ ಕೆಲವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಒಬ್ಬೊಬ್ಬ ಅಭಿಮಾನಿಗೆ ಒಂದೊಂದು ರೀತಿಯ ಅನುಭವ ಆಗಿದೆ. ಆ ಎಲ್ಲಾ ಅನುಭವಗಳನ್ನು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ 'ಗಂಧದ ಗುಡಿ' ಎಲ್ಲಿ ನೋಡ್ತಾರೆ? ಕಾರ್ಯಕ್ರಮದ ಪಟ್ಟಿಯೇನು?
'ಹೊಸ ಯುಗ ಆರಂಭ ಆಗಿದೆ'
ಪವರ್ಸ್ಟಾರ್ ವಿನೂತನ ಪ್ರಯತ್ನಕ್ಕೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಜನರು ಹೆಮ್ಮೆಪಡುವಂತೆ ಮಾಡುವಲ್ಲಿ ಅಪ್ಪು ಯಶಸ್ವಿಯಾಗಿದ್ದಾರೆ. " ಹೊಸ ಯುಗ ಆರಂಭ ಆಗಿದೆ. ಅಪ್ಪು ಸರ್ ಹುಟ್ಟಿದ ಯುಗದಲ್ಲಿ ನಾನು ಹುಟ್ಟಿದ್ದೇನೆ ಅಂತ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕನ್ನಡ ಕರ್ನಾಟಕ ಇರುವವರೆಗೂ ಅಪ್ಪು ಸರ್ ಸಾರ್ವಭೌಮ." ಎಂದು ಮನೋಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಅಪ್ಪು ಪುಣ್ಯಭೂಮಿಯಲ್ಲಿ 'ಗಂಧದ ಗುಡಿ' ಸೆಲೆಬ್ರೆಷನ್: 24 ಗಂಟೆ ಸಾಧು ಕೋಕಿಲಾ ಮನರಂಜನೆ!
'ಇದು ಹೃದಯ ಸ್ಪರ್ಷಿಸುವ ಅನುಭವ'
" ಗಂಧದ ಗುಡಿ ಇದೊಂದು ಹೃದಯ ಸ್ಪರ್ಷಿಸುವ ಅನುಭವ. ಪುನೀತ್ ಸರ್ ಇಲ್ಲಿ ತುಂಬಾನೇ ಎಂಜಾಯ್ ಮಾಡಿದ್ದಾರೆ. ಇಲ್ಲಿ ಹಂಚಿಕೊಂಡಿರುವ ಅವರ ಖುಷಿ ಹಾಗೂ ಭಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮದೇ ಭೂಮಿಯನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತಿದ್ದೇನೆ. ವಿಶ್ವದರ್ಜೆಯ ಮಟ್ಟದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಿ ನಮಗೆ ನೀಡಿರುವುದು ಅದ್ಭುತ. ಇಡೀ ತಂಡಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ."
'ಈ ಕಂಗಳು ಮಾಡಿದ ಪುಣ್ಯವೋ'
'ಗಂಧದ ಗುಡಿ' ನೋಡಿ ಹೊರಬಂದವರಿಗೆ ಈ ಸಿನಿಮಾ ಹೊಸ ಅನುಭವವನ್ನು ನೀಡುತ್ತಿದೆ. ಕೆಲವರಿಗೆ ಮತ್ತೆ ಅಣ್ಣಾವ್ರು ನಟಿಸಿದ 'ಗಂಧದ ಗುಡಿ' ಸಿನಿಮಾನೇ ಇಷ್ಟ ಆಗಿದೆ. ಅವರ ಸಿನಿಮಾದ ಹಾಡುಗಳು ನೆನಪಿಗೆ ಬಂದಿದೆ. " ಇದು ಯಾರ ತಪಸಿನ ಫಲವೋ.. ಈ ಕಂಗಳು ಮಾಡಿದ ಪುಣ್ಯವೋ..! ಕರ್ನಾಟಕದ ಭವ್ಯ ಪ್ರಕೃತಿಯನ್ನು ಅದ್ಭುತವಾಗಿ ಅನ್ವೇಷಣೆ ಮಾಡಿ, ಸರಳವಾಗಿ ತೆರೆಮೇಲೆ ತೋರಿಸಲಾಗಿದೆ." ಎಂದು ಶ್ರೇಯಸ್ ಪ್ರಕಾಶ್ ಎಂಬುವವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!
'ಗಂಧದ ಗುಡಿ ಇದು ನಮ್ಮ ಹೆಮ್ಮೆ'
"ನನ್ನ ಬದುಕಿನಲ್ಲೇ ಅತ್ಯಂತ ಅದ್ಭುತ ಅನುಭವ ಕೊಟ್ಟ ಸಿನಿಮಾವಿದು. ಎಪಿಕ್ ಸಿನಿಮಾವನ್ನು ನೀಡಿದ್ದಕ್ಕೆ ಡಾ.ಪುನೀತ್ ರಾಜ್ಕುಮಾರ್ ಸರ್, ಅಮೋಘವರ್ಷ ಸರ್ ಹಾಗೂ ತಂಡಕ್ಕೆ ಧನ್ಯವಾದಗಳು. ಈ ಸಿನಿಮಾವನ್ನು 4K ಸ್ಕ್ರೀನ್ನಲ್ಲಿಯೇ ನೋಡಬೇಕು. ಗಂಧದ ಗುಡಿ ಇದು ನಮ್ಮ ಹೆಮ್ಮೆ." ಎಂದು ಸಿದ್ದೇಶ್ ಎಂಬುವವರು ಟ್ವೀಟ್ ಮಾಡಿ, ಸಿನಿಮಾ ಬಗ್ಗೆ ತಿಳಿಸಿದ್ದಾರೆ. ಅಪ್ಪು ಕೊನೆಯ ಸಿನಿಮಾದಲ್ಲೂ ಸಮಾಜಕ್ಕೆ ಸಂದೇಶ ನೀಡಿ ಹೋಗಿದ್ದಾರೆ. ಟ್ವಿಟರ್ ರಿವ್ಯೂಗಳನ್ನು ನೋಡಿದರೆ ಅದು ಜನರಿಗೆ ತಲುಪುವಲ್ಲಿ ಯಶಸ್ವಿಯಾಗುತ್ತೆ ಅನ್ನುವುದರಲ್ಲಿ ಅನುಮಾನವೇ ಇಲ್ಲ.