ಸಿಎಂ ವಿಜಯ್ ಭೇಟಿಯಾದ ನಟಿ ಸ್ಯಾಮ್; "ವಿಜಯ್ ಸರ್ ಕೇವಲ ಬೆಳ್ಳಿತೆರೆಯ ಮೇಲಷ್ಟೇ ಹೀರೊ ಅಲ್ಲ"-ಸಮಂತಾ
ಬಹುಭಾಷಾ ನಟಿ ಸಮಂತಾ ತಮ್ಮ ಹೊಚ್ಚ ಸಿನಿಮಾದ 'ಮಾ ಇಂಟಿ ಬಂಗಾರಂ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಿನಿಮಾ ತಮಿಳಿಗೆ 'ಎಂಗಳ್ ತಂಗಂ' ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಈ ಸಿನಿಮಾದ ಪ್ರಚಾರಕ್ಕಾಗಿ ಚೆನ್ನೈಗೆ ಆಗಮಿಸಿದ್ದರು. ಈ ವೇಳೆ ತಮ್ಮ ಕೋ ಸ್ಟಾರ್ ಆಗಿದ್ದ ಪ್ರಸ್ತುತ ತಮಿಳುನಾಡಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ.
ಚೆನ್ನೈನಲ್ಲಿ ವಿಜಯ್ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಮಾತುಕಥೆ ನಡೆಸಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ ತಮಿಳುನಾಡು ಸಿಎಂ ವಿಜಯ್ ಅವರನ್ನು ಹೊಗಳಿ ಬರದುಕೊಂಡಿದ್ದಾರೆ. "ವಿಜಯ್ ಸರ್ ಕೇವಲ ತೆರೆಯ ಮೇಲಷ್ಟೇ ಹೀರೊ ಆಗಿ ಇರುವವರಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅವರಲ್ಲಿರುವ ಎನರ್ಜಿ, ಅವರ ವ್ಯಕ್ತಿತ್ವ, ಹಾಗೇ ಜನರು ಅವರಿಗೆ ಸ್ಪಂದಿಸುವ ರೀತಿ ನೋಡಿದರೆ, ಇನ್ನೂ ಯಾವುದೋ ದೊಡ್ಡ ಸಾಧನೆಗಾಗಿ ಹುಟ್ಟಿದವರು ಎಂದು ಯಾವಾಗಲೂ ಅನಿಸುತ್ತಿತ್ತು" ಎಂದು ಸಮಂತಾ ಬರೆದುಕೊಂಡಿದ್ದಾರೆ.



Click it and Unblock the Notifications