22 ವರ್ಷಕ್ಕೆ ಪ್ರಾಣ ಬಿಟ್ಟ ನಾಯಕಿ ಪ್ರತ್ಯುಷಾ.. 25 ವರ್ಷಗಳ ಬಳಿಕ ಬಂದ ತೀರ್ಪಿಗೆ ತಾಯಿ ಹೇಳಿದ್ದೇನು?
ಪ್ರತ್ಯುಷಾ.. ಅತೀ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ತೆಲುಗು ನಟಿ. ಈಕೆ ನಟಿಸಿದ್ದು ಕೇವಲ ಐದು ವರ್ಷ. ಹೆಸರು, ಹಣ ಎಲ್ಲವೂ ತಾನಾಗಿಯೇ ಹುಡುಕಿಕೊಂಡು ಬರುತ್ತಿದ್ದ ಸಮಯದಲ್ಲೇ ಇಹಲೋಕವನ್ನೇ ತ್ಯಜಿಸಿಬಿಟ್ಟರು. ಅಷ್ಟಕ್ಕೂ ಆ ನಟಿಗೆ ಏನಾಗಿತ್ತು?
ತೆಲುಗು ನಟಿ ಪ್ರತ್ಯುಷಾಗೆ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾಗಳಲ್ಲಿ ನಟಿಸಬೇಕು ಅಂತ ಆಸೆ. ಆ ಆಸೆಗೆ ತಕ್ಕಂತೆ ಅವಕಾಶಗಳೂ ಕೂಡ ಸಿಕ್ಕಿತ್ತು. ತೆಲಂಗಾಣದ ಭುವನಗಿರಿ ಮೂಲದ ನಟಿ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದ್ದಂತೆ ಅಮ್ಮನೊಂದಿಗೆ ಹೈದರಾಬಾದ್ಗೆ ಎಂಟ್ರಿ ಕೊಟ್ಟರು. ಆರಂಭದಲ್ಲಿ ಟಿವಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಸಿನಿಮಾಗೆ ಎಂಟ್ರಿ ಕೊಟ್ಟರು. ಆಗ ಪ್ರತ್ಯುಶಾಗೆ ವಯಸ್ಸು ಕೇವಲ 18. ಮೋಹನ್ ಬಾಬು ನಟಿಸಿದ್ದ 'ರಾಯುಡು' ಸಿನಿಮಾದಲ್ಲಿ ಮಗಳಾಗಿ ಪ್ರತ್ಯುಷಾ ಮೊದಲ ಅವಕಾಶ ಪಡೆದುಕೊಂಡರು.

ಮೊದಲ ಸಿನಿಮಾಗೆ ಅವಕಾಶ ಸಿಗುತ್ತಿದ್ದಂತೆ ಟಾಲಿವುಡ್ನ ಫೇವರಿಟ್ ನಟಿಯಾಗಿಬಿಟ್ಟರು. ಐದು ವರ್ಷಗಳ ಅವರ ಸಿನಿಮಾ ಕರಿಯರ್ನಲ್ಲಿ 11 ಸಿನಿಮಾಗಳಲ್ಲಿ ನಟಿಸಿದ್ದರು. 2002ರಲ್ಲಿ ಪ್ರತ್ಯುಷಾ ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾಗಿದ್ದಾರೆಂಬ ಸುದ್ದಿ ಹಬ್ಬಿತ್ತು. ಮಗಳ ಸಾವಿನ ಬಗ್ಗೆ ತಾಯಿ ಸರೋಜಿನಿ ದೇವಿ ಅನುಮಾನ ವ್ಯಕ್ತಪಡಿಸಿದ್ದರು. ಮಗಳ ಬಾಯ್ಫ್ರೆಂಡ್ ಸಿದ್ಧಾರ್ಥ್ ಕಾರಣವೆಂದು ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿತ್ತು. ಅದರ ತೀರ್ಪು ಬಂದಿದ್ದು, ಸಿದ್ಧಾರ್ಥ್ ರೆಡ್ಡಿಯನ್ನು ಶರಣಾಗುವಂತೆ ಸೂಚಿಸಿದೆ. ಆದರೂ, ನಟಿ ತಾಯಿ ಅಸಮಧಾನ ಹೊರ ಹಾಕಿದ್ದಾರೆ. ಅದ್ಯಾಕೆ ಅಂತ ನೋಡುವುದಾರೇ,
ಪ್ರತ್ಯುಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೈದರಾಬಾದ್ನ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ ಸಿದ್ಧಾರ್ಥ್ ರೆಡ್ಡಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹5,000 ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಿದ್ಧಾರ್ಥ್ ರೆಡ್ಡಿ ಹೈಕೋರ್ಟ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2011ರಲ್ಲಿ ಹೈಕೋರ್ಟ್ ಸಿದ್ಧಾರ್ಥ್ ರೆಡ್ಡಿಯ ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಕೆ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ, ಪ್ರತ್ಯುಷಾ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
14 ವರ್ಷಗಳ ಕಾಲ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆದು, ತೀರ್ಪು ಹೊರಬಿದ್ದಿದ್ದು, ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಈ ಸಂಬಂಧ ಪ್ರತ್ಯುಷಾ ತಾಯಿ ಸರೋಜಿನಿ ಟಿವಿ 9ಗೆ ನೀಡಿದ ಸಂದರ್ಶನದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. "24 ವರ್ಷಗಳಿಂದ ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸುತ್ತೇನೆ. ಆದರೆ, ನನ್ನ ಮಗಳ ಸಾವಿನ ಪ್ರಕರಣದಲ್ಲಿ ನನಗೆ ನ್ಯಾಯ ಸಿಕ್ಕಿಲ್ಲ. ನನ್ನ ಮಗಳ ಜೀವ ಹೋಗಿದ್ದು, ಅತ್ಯಾಚಾರಕ್ಕೆ ಒಳಗಾಗಿದ್ದಳು. ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ನಾನು ಇದೇ ವಾದ ಮಾಡುತ್ತೇನೆ" ಎಂದು ಸರೋಜಿನಿ ದೇವಿ ಹೇಳಿಕೆ ಕೊಟ್ಟಿದ್ದಾರೆ.

ಇಷ್ಟೇ ಅಲ್ಲದೆ, ಸಿದ್ದಾರ್ಥ್ ರೆಡ್ಡಿಗೆ ಜೀವಾವಧಿ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. "ಹೈಕೋರ್ಟ್ ತೀರ್ಪನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನನಗೆ ಮಾಹಿತಿ ಇರುವಂತೆ ಸಿದ್ಧಾರ್ಥ್ ರೆಡ್ಡಿ ವಿದೇಶದಲ್ಲಿದ್ದಾನೆ. ತಕ್ಷಣ ಶರಣಾಗುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ನನ್ನ ಮಗಳ ಭವಿಷ್ಯ, ಜೀವನ ಹಾಳಾಯ್ತು. ಈ ಕಾರಣಕ್ಕೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲೇಬೇಕು" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದೇ ಸಂದರ್ಶನದಲ್ಲಿ ಸಾಕ್ಷ್ಯಗಳನ್ನು ಹೇಗೆ ನಾಶ ಮಾಡಲಾಯ್ತು ಅನ್ನೋದನ್ನು ವಿವರಿಸಿದ್ದಾರೆ. "ನನ್ನ ಮಗಳ ಸತ್ತ ಸಮಯದಲ್ಲಿಯೇ ಸಾಕ್ಷ್ಯಗಳನ್ನು ನಾಶ ಮಾಡಲಾಗಿತ್ತು. ಲಭ್ಯವಿರುವ ಸಾಕ್ಷ್ಯಗಳನ್ನೇ ಇಟ್ಟುಕೊಂಡು ನಾನು ಕಾನೂನು ಹೋರಾಟವನ್ನು ನಡೆಸುತ್ತಿದ್ದೇನೆ. ಎಲ್ಲಾ ಸಾಕ್ಷ್ಯಗಳು ಸಿಕ್ಕಿದ್ದರೆ ಸಿದ್ಧಾರ್ಥ್ ರೆಡ್ಡಿಗೆ ಜೀವಾವಧಿ ಶಿಕ್ಷೆ ಆಗುತ್ತಿತ್ತು. ಈ ಪ್ರಕರಣದಲ್ಲಿ ಗಮನಿಸಬೇಕಾದ ವಿಷಯ ಏನಂದ್ರೆ, ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಮುನಿಸ್ವಾಮಿ ವರದಿಯನ್ನು ಪರಿಗಣಿಸಿಲ್ಲ" ಎಂದು ಸರೋಜಿನಿ ದೇವಿ ಬೇಸರ ಹೊರ ಹಾಕಿದ್ದಾರೆ.


Click it and Unblock the Notifications











