twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ನಿರ್ದೇಶಕಿ ಸಂಜನಾ ರೆಡ್ಡಿಗೆ ತೀವ್ರ ಅನಾರೋಗ್ಯ, ಸ್ಥಿತಿ ಗಂಭೀರ

    |

    ಇತ್ತೀಚೆಗಷ್ಟೇ ಕ್ರೀಡಾಪಟು ಕರ್ಣಂ ಮಲ್ಲೇಶ್ವರಿ ಕುರಿತು ಬಯೋಪಿಕ್ ನಿರ್ದೇಶಿಸುವುದಾಗಿ ಪ್ರಕಟಿಸಿದ್ದ ತೆಲುಗು ಚಿತ್ರರಂಗದ ನಿರ್ದೇಶಕಿ ಸಂಜನಾ ರೆಡ್ಡಿ ತೀವ್ರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

    ನರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಸಂಜನಾ ಅವರನ್ನು ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿರುವ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ವೆಂಟಿಲೇಟರ್ ಅಳವಡಿಸಲಾಗಿದೆ. ಆದರೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮುಂದೆ ಓದಿ...

    ಪ್ರಸಿದ್ಧ ಕ್ರೀಡಾಪಟುವಿನ ಬಯೋಪಿಕ್ ಸಿನಿಮಾ ತಿರಸ್ಕರಿಸಿದರೇ ನಿತ್ಯಾ ಮೆನನ್?ಪ್ರಸಿದ್ಧ ಕ್ರೀಡಾಪಟುವಿನ ಬಯೋಪಿಕ್ ಸಿನಿಮಾ ತಿರಸ್ಕರಿಸಿದರೇ ನಿತ್ಯಾ ಮೆನನ್?

    ರೋಗ ಪತ್ತೆಗೆ ಪ್ರಯತ್ನ

    ರೋಗ ಪತ್ತೆಗೆ ಪ್ರಯತ್ನ

    'ಅಧಿಕ ಜ್ವರದಿಂದ ಬಳಲುತ್ತಿದ್ದ ಸಂಜನಾ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಸ್ಥಿತಿ ಗಂಭೀರವಾದ ಕಾರಣ ಜೀವ ಸಂರಕ್ಷಕದಲ್ಲಿ ಇರಿಸಲಾಗಿದೆ. ನರರೋಗ ತಜ್ಞರೊಬ್ಬರು ಅವರ ಅನಾರೋಗ್ಯದ ಸಮಸ್ಯೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಬಹಳ ಗಂಭೀರವಾಗಿದೆ' ಎಂದು ಮೂಲಗಳು ತಿಳಿಸಿವೆ.

    ಡಯಟ್‌ನಿಂದಾಗಿ ಸಮಸ್ಯೆ

    ಡಯಟ್‌ನಿಂದಾಗಿ ಸಮಸ್ಯೆ

    'ಅವರು ಕೆಲವು ಸಮಯದಿಂದ ಡಯಟ್‌ನಲ್ಲಿದ್ದರು. ಕೆಲವೊಂದೆರಡು ದಿನಗಳಿಂದ ಕೇವಲ ದ್ರವ ರೂಪದಲ್ಲಿ ಆಹಾರ ಸೇವನೆ ಮಾಡುತ್ತಿದ್ದರು. ಇದರಿಂದ ಅವರಲ್ಲಿ ನಿಶ್ಶಕ್ತಿ ಉಂಟಾಗಿತ್ತು. ಅವರು ಬಹಳ ನಿತ್ರಾಣರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕಿಂತ ಹೆಚ್ಚೇನೂ ಆಗಿಲ್ಲ. ಕೆಲವು ದಿನಗಳಲ್ಲಿ ಅವರು ಬಿಡುಗಡೆಯಾಗಲಿದ್ದಾರೆ' ಎಂದು ನಿರ್ಮಾಪಕ ಕೋನಾ ವೆಂಕಟ್ ರೆಡ್ಡಿ ತಿಳಿಸಿದ್ದಾರೆ.

    ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ಖ್ಯಾತ ನಟ ನಂದಮುರಿ ಬಾಲಕೃಷ್ಣ ಪುತ್ರಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ಖ್ಯಾತ ನಟ ನಂದಮುರಿ ಬಾಲಕೃಷ್ಣ ಪುತ್ರ

    ನರಕ್ಕೆ ಸಂಬಂಧಿಸಿದ ಸಮಸ್ಯೆ

    ನರಕ್ಕೆ ಸಂಬಂಧಿಸಿದ ಸಮಸ್ಯೆ

    ಆದರೆ ಸಂಜನಾ ಅವರ ಸಂಬಂಧಿಕರು ಹೇಳುವಂತೆ ಅವರು ಬಹಳ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನರ ಮಂಡಲಕ್ಕೆ ಸಂಬಂಧಿಸಿದಂತೆ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ಸ್ಥಿತಿ ಹೇಗಿದೆ ಎಂಬುದಕ್ಕೆ ಖಚಿತ ಮಾಹಿತಿ ಇಲ್ಲ. ಯಶೋದಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ತಿಳಿಸಿವೆ.

    ಕರ್ಣಂ ಮಲ್ಲೇಶ್ವರಿ ಸಿನಿಮಾ

    ಕರ್ಣಂ ಮಲ್ಲೇಶ್ವರಿ ಸಿನಿಮಾ

    2018ರಲ್ಲಿ ರಾಜ್ ತರುಣ್ ನಾಯಕರಾಗಿದ್ದ 'ರಾಜು ಗಾಡು' ಎಂಬ ಚಿತ್ರ ನಿರ್ದೇಶಿಸುವ ಮೂಲಕ ಸಂಜನಾ ರೆಡ್ಡಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದರು. ಕ್ರೀಡಾಪಟು ಕರ್ಣಂ ಮಲ್ಲೇಶ್ವರಿ ಜನ್ಮದಿನದಂದು ಅವರ ಬಯೋಪಿಕ್ ಘೋಷಣೆಯಾಗಿತ್ತು. ಕೋನ ವೆಂಕಟ್ ನಿರ್ಮಾಣದಲ್ಲಿ ಸಂಜನಾ ರೆಡ್ಡಿ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ತಿಳಿಸಲಾಗಿತ್ತು.

    English summary
    Rajugadu director Sanjana Reddy was admitted to a Hyderabad hospital on Sunday. She was on ventilator support in ICU.
    Tuesday, June 9, 2020, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X