'ಚಿರುತ' ನಾಯಕಿ ಜೊತೆ ರಹಸ್ಯ ಮದುವೆ.. ಹನಿಮೂನ್: ಮೊದಲ ಸಿನಿಮಾದಲ್ಲೇ ಗಾಸಿಪ್.. ರಾಮ್ ಚರಣ್ ಪ್ರತಿಕ್ರಿಯೆ ಏನಿತ್ತು?
RRR ಸಿನಿಮಾದ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಮೆಗಾ ಕುಟುಂಬದ ಸೂಪರ್ಸ್ಟಾರ್ ಆಗಿದ್ದರೂ, ವಿವಾದಗಳಿಗೆ ಸಿಕ್ಕಿಕೊಂಡಿದ್ದು ತೀರಾ ವಿರಳ. ಇತ್ತೀಚೆಗಂತೂ ರಾಮ್ ಚರಣ್ ಹೆಸರು ಮತ್ತೊಬ್ಬ ನಟಿಯೊಂದಿಗೆ ತಳುಕು ಹಾಕಿಕೊಂಡಿದ್ದಿಲ್ಲ.
ರಾಮ್ ಚರಣ್ ದಾಂಪತ್ಯ ಜೀವನ ಕೂಡ ನೀಟಾಗಿರುವುದಕ್ಕೂ ಇದೇ ಕಾರಣ. ವಿವಾದಗಳಿಂದ, ಗಾಳಿ ಸುದ್ದಿಗಳಿಂದ ತಮ್ಮನ್ನು ತಾವು ದೂರವೇ ಇಟ್ಟುಕೊಂಡಿದ್ದಾರೆ. ಇಷ್ಟೊಂದು ಜಾಗರೂಕರಾಗಿದ್ದರೂ, ರಾಮ್ ಚರಣ್ ವೃತ್ತಿ ಜೀವನ ಆರಂಭದ ಹೊಸ್ತಿಲಲ್ಲೇ ಒಂದು ಗಾಳಿ ಸುದ್ದಿ ಟಾಲಿವುಡ್ನಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.

ಅಂದ್ಹಾಗೆ ರಾಮ್ ಚರಣ್ ಮೊದಲ ಸಿನಿಮಾ 'ಚಿರುತ' ಬಿಡುಗಡೆಯಾದ ಸಮಯದಲ್ಲಿ ಒಂದು ಸುದ್ದಿ ಹರಿದಾಡಿತ್ತು. ಆ ಬಗ್ಗೆ ಇಂದಿಗೂ ರಾಮ್ ಚರಣ್ಗೆ ಪ್ರಶ್ನೆಗಳು ಎದುರಾಗುತ್ತವೆ. ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಈ ಹಳೇ ಸುದ್ದಿ ವೈರಲ್ ಆಗಿದೆ. ಅದಕ್ಕೆ ರಾಮ್ಚರಣ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
'ಚಿರುತ' ಸಮಯದಲ್ಲಿ ಲವ್ವಿ ಡವ್ವಿ
2007ರಲ್ಲಿ ರಾಮ್ ಚರಣ್ 'ಚಿರುತ' ಸಿನಿಮಾ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಪುರಿ ಜಗನ್ನಾಥ್ ನಿರ್ದೇಶಕರು. ಈ ಸಿನಿಮಾದಲ್ಲಿ ರಾಮ್ ಚರಣ್ಗೆ ಹೀರೊಯಿನ್ ಆಗಿದ್ದವರು ನೇಹಾ ಶರ್ಮಾ. ಮೆಗಾ ಪವರ್ಸ್ಟಾರ್ ಮೊದಲ ಸಿನಿಮಾವೇ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು.
'ಚಿರುತ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಟಾಲಿವುಡ್ನಲ್ಲಿ ವದಂತಿಯೊಂದು ಹಬ್ಬಿತ್ತು. ರಾಮ್ ಚರಣ್ ಹಾಗೂ ನೇಹಾ ಶರ್ಮಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು. ಈ ಸುದ್ದಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ರಹಸ್ಯ ಮದುವೆ.. ಹನಿಮೂನ್
ರಾಮ್ ಚರಣ್ 'ಚಿರುತ' ನಾಯಕಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಸುದ್ದಿ ಹಬ್ಬಿದ್ದರೆ, ಅದು ವದಂತಿ ಅಂತ ನಂಬಿ ಸುಮ್ಮನಾಗಿತ್ತಿದ್ದರೋ ಏನೋ.. ಆದರೆ, ರಾಮ್ ಚರಣ್ ನಟಿ ನೇಹಾ ಶರ್ಮಾರನ್ನು ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ. ಅಲ್ಲದೆ ಹನಿಮೂನ್ಗೂ ಹೋಗಿದ್ದಾರೆ ಅನ್ನೋ ಸುದ್ದಿ ಹಬ್ಬಿದ್ದವು.

ಒಂದಿಷ್ಟು ದಿನ ಈ ಸುದ್ದಿ ಟಾಲಿವುಡ್ನ ಗಾಸಿಪ್ ಕಾಲಂಗಳಲ್ಲಿ ರಾರಾಜಿಸಿದ್ದವು. ಕೊನೆಗೂ ರಾಮ್ ಚರಣ್ ಈ ಗಾಸಿಪ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದರು. ಆ ವೇಳೆ ತಂದೆ ಚಿರಂಜೀವಿ ಹೇಳಿದ ಮಾತು, ಅಂದು ಸ್ನೇಹಿತೆಯಾಗಿದ್ದ ಉಪಾಸನ ಏನಂದ್ರು? ಅನ್ನೋದನ್ನು ಮುಕ್ತವಾಗಿ ಮಾತಾಡಿದ್ದರು.
ಚಿರು, ಉಪಾಸನಾ ಹೇಳಿದ್ದೇನು?
ರಾಮ್ ಚರಣ್ ಸಂದರ್ಶನವೊಂದರಲ್ಲಿ ಈ ಗಾಸಿಪ್ ಬಗ್ಗೆ ಹೀಗಂದಿದ್ದರು. " ನನಗೀಗ ಮದುವೆಯಾಗಿದೆ. ಇಂತಹ ಸುದ್ದಿಗಳು ನನ್ನ ಮದುವೆ ಮೇಲೆ ಪರಿಣಾಮ ಬೀರುತ್ತವೆ. ಈಗ ನನ್ನ ಹೆಂಡತಿಗೆ ಬೇರೆ ಮಹಿಳೆಯರಿಂದ ನನ್ನ ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಬರಬಾರದು. ಹಾಗಿರುವುದು ನನ್ನ ಜವಾಬ್ದಾರಿ ಕೂಡ. ಇಂತಹ ಸುದ್ದಿಗೆ ಬಂದಾಗ ನನ್ನ ತಂದೆ ಸುಳ್ಳು ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿದ್ದರು" ಎಂಬುದಾಗಿ ರಾಮ್ ಚರಣ್ ಹೇಳಿದ್ದರು.
ಈ ಸುದ್ದಿ ಬಂದಾಗ ರಾಮ್ ಚರಣ್ ಹಾಗೂ ಉಪಾಸನಾ ಸ್ನೇಹಿತರಾಗಿದ್ದರು. ಆ ವೇಳೆ ಉಪಾಸನ ಹೇಳಿದ್ದನ್ನೂ ನೆನಪಿಸಿಕೊಂಡಿದ್ದಾರೆ. " ಅಂದು ನಾನು ಹಾಗೂ ಉಪಾಸನಾ ಇಬ್ಬರೂ ಸ್ನೇಹಿತರಾಗಿದ್ದೆವು. ಇದು ಸುಳ್ಳು ಸುದ್ದಿ ಅನ್ನೋದು ಆಕೆಗೂ ಗೊತ್ತಿತ್ತು. ಆದರೆ, ಮದುವೆ ಬಳಿಕ ಇಂತಹ ಸುದ್ದಿಗಳು ನಮ್ಮ ಹತ್ತಿರಕ್ಕೂ ಬರದಂತೆ ನೋಡಿಕೊಂಡಿದ್ದೇವೆ" ಎಂದು ರಾಮ್ ಚರಣ್ ಸಂದರ್ಶನದಲ್ಲಿ ಹೇಳಿದ್ದರು.


Click it and Unblock the Notifications











