ರಾಮ್‌ ಚರಣ್‌ಗೆ ಮತ್ತೊಂದು ಮಗು ಆಗೋದಿಲ್ಲ: ಟಾಲಿವುಡ್ ಜ್ಯೋತಿಷಿ ನುಡಿದ ಭವಿಷ್ಯದಲ್ಲಿ ಇನ್ನೇನಿದೆ?

ಟಾಲಿವುಡ್‌ನಲ್ಲಿ ಜ್ಯೋತಿಷಿ ವೇಣು ಸ್ವಾಮಿ ಹವಾ ಕೊಂಚ ಜೋರಾಗಿಯೇ ಇದೆ. ಈ ಜ್ಯೋತಿಷಿ ನುಡಿದ ಭವಿಷ್ಯ ತೆಲುಗು ತಾರೆಯರ ಜೀವನದಲ್ಲಿ ನಿಜವಾಗಿದೆ. ಹೀಗಾಗಿ ವೇಣು ಸ್ವಾಮಿ ಏನಾದರೂ ಭವಿಷ್ಯ ನುಡಿದಿದ್ದಾರೆ ಅಂದ್ರೆ, ಅದು ನಿಜವಾಗುತ್ತೆ ಎಂದೇ ಭಾವಿಸಲಾಗುತ್ತೆ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ವೇಣುಸ್ವಾಮಿ 'ಆದಿಪುರುಷ್' ಸಿನಿಮಾದ ಬಗ್ಗೆ ಭವಿಷ್ಯ ನುಡಿದಿದ್ದರು. ಪ್ರಭಾಸ್ ಜಾತಕದ ಪ್ರಕಾರ, 'ಆದಿಪುರುಷ್' ಅದ್ಭುತ ಯಶಸ್ಸು ಸಿಗುವುದಿಲ್ಲವೆಂದು ಹೇಳಿದ್ದರು. ಅದು ಕೂಡ ಈಗ ನಿಜವಾಗಿದೆ.

Ram Charan Will Have Only One Kid

ಈಗ ರಾಮ್ ಚರಣ್ ಹಾಗೂ ಉಪಾಸನಾ ಪುತ್ರಿಯ ಜಾತಕ ಭವಿಷ್ಯವನ್ನು ನುಡಿದಿದ್ದಾರೆ. ರಾಮ್ ಚರಣ್ ದಂಪತಿ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ಬಗ್ಗೆ ಟಾಲಿವುಡ್‌ನಲ್ಲಿ ಫೇಮಸ್ ಆಗಿರೋ ಜ್ಯೋತಿಷಿ ವೇಣು ಸ್ವಾಮಿ ಆ ಮಗುವಿನ ಜಾತಕ ಭವಿಷ್ಯ ನುಡಿದಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಮ್ ಚರಣ್ ಮಗುವಿನ ಬಗ್ಗೆ ಏನಿದೆ ಭವಿಷ್ಯ?

ಕೆಲವು ದಿನಗಳ ಹಿಂದಷ್ಟೇ ಮೆಗಾ ಕುಟುಂಬಕ್ಕೆ ರಾಜಕುಮಾರಿಯ ಆಗಮನವಾಗಿದೆ. ಮದುವೆ ಆಗಿ 11 ವರ್ಷಗಳ ಬಳಿಕ ರಾಮ್ ಚರಣ್ ದಂಪತಿಗೆ ಹೆಣ್ಣು ಮಗುವಿನ ಜನಿಸಿದ್ದಳು. ಜ್ಯೋತಿಷಇ ವೇಣು ಸ್ವಾಮಿ ಈ ಮಗುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮಗುನಿನ ಜನನದ ಸಮಯ ಅದ್ಭುತವಾಗಿದ್ದು, ಜಾತಕದಲ್ಲಿ ರಾಜಯೋಗವಿದೆ ಎಂದು ಹೇಳಿದ್ದಾರೆ.

ಮಂಗಳವಾರ ಬೆಳಗಿನ ಜಾವ ಸುಮಾರು 1.46ಕ್ಕೆ ರಾಮ್ ಚರಣ್ ದಂಪತಿಗೆ ಹೆಣ್ಣು ಮಗು ಜನಿಸಿದ್ದಳು. ಈ ಮೂಲಕ ಮೆಗಾ ಕುಟುಂಬಕ್ಕೆ ವಾರಸುದಾರಳು ಬಂದಿದ್ದಾಳೆ ಎಂದು ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದಾರೆ. ಪುನರ್ವಸು ನಕ್ಷತ್ರ, ಮಿಥುನ ರಾಶಿಯಲ್ಲಿ ಜನಿಸಿದ್ದು, ಮಗಳಿಂದ ಮೆಗಾ ಕುಟುಂಬಕ್ಕೆ ರಾಜಯೋಗ ಬರುತ್ತೆ. ಆದರೆ, ರಾಮ್ ಚರಣ್‌ಗೆ ಇನ್ನೊಂದು ಮಗು ಆಗುವುದಿಲ್ಲ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

Ram Charan Will Have Only One Kid

ಚಿರಂಜೀವಿ, ರಾಮ್ ಚರಣ್ ಮೀರಿಸುತ್ತಾಳೆ

ರಾಮ್ ಚರಣ್ ಮಗಳ ಬಗ್ಗೆ ಜ್ಯೋತಿಷಿ ವೇಣುಸ್ವಾಮಿ ಪಾಸಿಟಿವ್ ಆಗಿ ಭವಿಷ್ಯ ನುಡಿದಿದ್ದಾರೆ. ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಏರುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಹೆಣ್ಣು ಮಗು ಚಿರಂಜೀವಿ ಕುಟುಂಬಕ್ಕೆ ಕೀರ್ತಿ ತರುತ್ತಾಳೆ ಎಂದು ಹೇಳಿದ್ದಾರೆ.

ಅಲ್ಲದೆ ಈ ಮಗು ತನ್ನ ತಾತ ಚಿರಂಜೀವಿ ಹಾಗೂ ತಂದೆ ರಾಮ್‌ ಚರಣ್‌ ಅನ್ನೂ ಮೀರಿಸು ಮುನ್ನುಗ್ಗುತ್ತಾರೆ ಎಂದು ಹೇಳಿದ್ದಾರೆ. ಈ ಮಾತು ಮೆಗಾ ಕುಟುಂಬದ ಅಭಿಮಾನಿಗಳಿಗೆ ಹೊಸ ಹುಮ್ಮಸ್ಸು ತಂದಿದೆ. ಸುಮಾರು 11 ವರ್ಷಗಳಿಂದ ಮಗುವಿಗಾಗಿ ಕಾದಿದ್ದ ದಂಪತಿಗೆ ಕೊನೆಗೂ ಖುಷಿಯ ವಿಷಯ ಸಿಕ್ಕಿದೆ.

ತಾಯಿ, ತಂದೆ, ತಾತ ಒಂದಾಗುತ್ತಾರೆ

ವೇಣು ಸ್ವಾಮಿ ತಮ್ಮ ಭವಿಷ್ಯವಾಣಿಯಲ್ಲಿ ಈ ಮಗುವಿನ ಜನನದಿಂದ ತಾಯಿ, ತಂದೆ, ತಾತ ಎಲ್ಲರೂ ಒಂದಾಗುತ್ತಾರೆ ಎಂದಿದ್ದಾರೆ. ಆದ್ರೆ, ವೇಣುಸ್ವಾಮಿ ಹೀಗೆ ಅಂದಿದ್ಯಾಕೆ? ಈ ಮಾತಿನ ಅರ್ಥವೇನು? ಅನ್ನೋ ಇನ್ನೂ ಗೊತ್ತಾಗಿಲ್ಲ. ರಾಮ್ ಚರಣ್ ಮಗಳ ಜಾತಕದಲ್ಲಿ ಚಿಕ್ಕಪುಟ್ಟ ದೋಷಗಳಿವೆ. ಹಲ್ಲು ಹಾಗೂ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.

ಮೆಗಾ ಫ್ಯಾಮಿಲಿಗೆ ಮೊಮ್ಮಗಳ ಆಗಮನದಿಂದ ಚಿರಂಜೀವಿ ಫುಲ್ ಖುಷಿಯಾಗಿದ್ದಾರೆ. "ಲಿಟಲ್ ಮೆಗಾ ಪ್ರಿನ್ಸೆಸ್‌ಗೆ ಸ್ವಾಗತ" ಎಂದು ಮೆಗಾಸ್ಟಾರ್ ಟ್ವೀಟ್ ಮಾಡಿದ್ದರು. ಪೋಷಕರಾಗಿದ್ದಕ್ಕೆ ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರೂ ಸಂಭ್ರಮದಲ್ಲಿ ಮುಳುಗಿದ್ದಾರೆ.

More from Filmibeat

English summary
Tollywood Astrologer Venuswamy Horoscope on Ram Charan and Upasana Daughter,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X