ಹೈದರಾಬಾದ್ನಲ್ಲಿ ತೆಲುಗು ನಟ ಪೃಥ್ವಿರಾಜ್ ಕಾರು ಅಪಘಾತ
ತೆಲುಗು ಚಿತ್ರರಂಗದ ಹಾಸ್ಯನಟ ಪೃಥ್ವಿರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಸೋಮವಾರ ಹೈದರಾಬಾದ್ನ ಬಂಜಾರ ಹಿಲ್ಸ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಸ್ವತಃ ಪೃಥ್ವಿರಾಜ್ ಮಾಹಿತಿ ನೀಡಿದ್ದು, ಹಾನಿಗೊಳಗಾದ ಕಾರಿನ ಕೆಲವು ಚಿತ್ರಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
''ಬಂಜಾರ ಹಿಲ್ಸ್ನ ಕ್ಯಾನ್ಸರ್ ಆಸ್ಪತ್ರೆಯ ಬಳಿ ಅಪಘಾತ ಸಂಭವಿಸಿದೆ. ನನ್ನ ವಾಹನಕ್ಕೆ ಇನ್ನೋವಾ ಕಾರು ಹಿಂದೆಯಿಂದ ಡಿಕ್ಕಿ ಹೊಡೆದಿದೆ. ಇದೀಗ ನನ್ನ ಕಾರಿಗೆ ಡ್ಯಾಮೇಜ್ ಆಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಜನರು ಜಮಾಯಿಸಿದರು'' ಎಂದು ವಿವರಿಸಿದ್ದಾರೆ.

ಇನ್ನು ಈ ಪೋಸ್ಟ್ ನೋಡುತ್ತಿದ್ದ ಆತಂಕ ಮತ್ತು ಗಾಬರಿಗೆ ಒಳಗಾದ ಅಭಿಮಾನಿಗಳು ಹಾಗೂ ನೆಟ್ಟಿಗರು ಪೃಥ್ವಿರಾಜ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆದರೆ, ನಟ ಮಾತ್ರ ಇದರ ಬಗ್ಗೆ ಸ್ಪಷ್ಟ ಮತ್ತು ಸಂಪೂರ್ಣವಾದ ವಿವರ ನೀಡಿಲ್ಲ.
ಕಳೆದ ಕೆಲವು ದಿನಗಳ ಹಿಂದೆ ನಟ ಪೃಥ್ವಿರಾಜ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಸ್ಪತ್ರೆಯಲ್ಲಿರುವ ವಿಡಿಯೋ ಸಹ ಪೋಸ್ಟ್ ಮಾಡಿದ್ದರು. ಕೊರೊನಾ ನೆಗಿಟಿವ್ ಬಂದಿದೆ ಎಂದು ಸಹ ಹೇಳಿಕೊಂಡಿದ್ದರು.


Click it and Unblock the Notifications











