Venu Swamy: "ಇಬ್ಬರು ತೆಲುಗು ಹೀರೊಗಳು ಸಾಯ್ತಾರೆ": ವೇಣುಸ್ವಾಮಿ ಭವಿಷ್ಯದಿಂದ ಟಾಲಿವುಡ್‌ ನಡುಕ

ಇತ್ತೀಚೆಗೆ ಟಾಲಿವುಡ್‌ನಲ್ಲಿ ಜ್ಯೋತಿಷಿ ವೇಣು ಸ್ವಾಮಿ ಹವಾ ಹೆಚ್ಚಾಗಿದೆ. ಕೆಲವು ದಿನಗಳ ಹಿಂದಷ್ಟೇ 'ಆದಿಪುರುಷ್' ಸಿನಿಮಾ ಸೋಲುತ್ತೆ ಎಂದು ಹೇಳಿದ್ದರು. ಹಾಗೇ ರಾಮ್ ಚರಣ್, ಉಪಾಸನಾ ದಂಪತಿ ಪುತ್ರಿಯ ಭವಿಷ್ಯವನ್ನೂ ನುಡಿದು ಸುದ್ದಿಯಲ್ಲಿದ್ದರು.

ಈಗ ಇದೇ ಜ್ಯೋತಿಷಿ ವೇಣು ಸ್ವಾಮಿ ಟಾಲಿವುಡ್ ಹೀರೊಗಳ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಇಷ್ಟು ದಿನ ಸಿನಿಮಾ ಮಂದಿಯ ಮದುವೆ, ವಿಚ್ಚೇದನ, ಸೋಲು-ಗೆಲುವಿನ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು. ಆದ್ರೀಗ ಇಬ್ಬರು ಹೀರೊಗಳ ವಿಚಾರದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.

Venu Swamy Sensational Astrology Prediction: 2 More Telugu Heroes Will Die

ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಜ್ಯೋತಿಷಿ ವೇಣು ಸ್ವಾಮಿ ಸೆಲೆಬ್ರೆಟಿಯಾಗಿದ್ದಾರೆ. ಹೀರೊ, ಹೀರೊಯಿಗಳು ತಮ್ಮ ಭವಿಷ್ಯ ಕೇಳಲು ಇವರ ಕಚೇರಿ ಮುಂದೆ ಕ್ಯೂ ನಿಲ್ಲುತ್ತಾರೆ. ಸೆಲೆಬ್ರೆಟಿಗಳ ಯಶಸ್ಸಿಗೆ ವೇಣುಸ್ವಾಮಿ ಕೊಟ್ಟ ಸಲಹೆ ಹಲವರಿಗೆ ವರ್ಕ್‌ಔಟ್ ಆಗಿದೆ. ಅಲ್ಲದೆ ಅವರಿಗೆ ನುಡಿಸದ ಭವಿಷ್ಯವೂ ನಿಜವಾಗಿದೆ. ಹೀಗಾಗಿ ಈಗ "ಇಬ್ಬರು ತೆಲುಗು ಹೀರೊಗಳು ಸಾಯ್ತಾರೆ" ಎಂದು ನುಡಿದ ಭವಿಷ್ಯ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಟಾಲಿವುಡ್‌ ಮಂದಿ ಎದೆಯಲ್ಲಿ ಡವ ಡವ

ಜ್ಯೋತಿಷ್ಯ, ಭವಿಷ್ಯವನ್ನು ನಂಬುವುದು ಬಿಡೋದು ಅವರವರ ವಿವೇಚನೆಗೆ ಬಿಟ್ಟಿದ್ದು. ಆದರೆ, ವೇಣು ಸ್ವಾಮಿ ಬಗ್ಗೆ ಟಾಲಿವುಡ್‌ನಲ್ಲಿ ಒಳ್ಳೆ ಅಭಿಪ್ರಾಯವಿದೆ. ವೇಣುಸ್ವಾಮಿ ಸಲಹೆಯನ್ನು ಟಾಲಿವುಡ್ ಪಾಲಿಸುತ್ತಾರೆ. ಆದ್ರೀಗ ಟಾಲಿವುಡ್‌ನಲ್ಲಿ ಇಬ್ಬರು ಹೀರೊಗಳು ಸಾಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅದನ್ನು ಕೇಳಿ ಟಾಲಿವುಡ್‌ನಲ್ಲಿ ಆತಂಕ ಶುರುವಾಗಿದೆ. ಹಾಗಿದ್ದರೆ, ವೇಣು ಸ್ವಾಮಿ ಹೇಳಿದ್ದೇನು?

Venu Swamy Sensational Astrology Prediction: 2 More Telugu Heroes Will Die

2026ರಲ್ಲಿ ಇಬ್ಬರು ಟಾಲಿವುಡ್ ಹೀರೊಗಳು ಸಾಯುತ್ತಾರೆ. ಒಬ್ಬರು ಅನಾರೋಗ್ಯದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಮತ್ತಿಬ್ಬರು ಸಾಲಭಾದೆ ತಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಾರೆ" ಎಂದು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಟಾಲಿವುಡ್‌ ಮಂದಿಯಲ್ಲಿ ಡವ ಡವ ಶುರುವಾಗಿದೆ ಎಂದು ಟಾಲಿವುಡ್‌.ನೆಟ್ ವರದಿ ಮಾಡಿದೆ.

"ಟಾಲಿವುಡ್‌ ಯುವ ನಟ ಸಾಯುತ್ತಾರೆ ಎಂದಿದ್ರು"

ವೇಣು ಸ್ವಾಮಿ ಹೇಳಿದ ಈ ಭವಿಷ್ಯದ ಬಗ್ಗೆ ಟಾಲಿವುಡ್‌ ಮಂದಿಗೆ ಡವ ಡವ ಶುರುವಾಗಿದ್ದಕ್ಕೆ ಕಾರಣವಿದೆ. ಕೆಲವೇ ವರ್ಷಗಳ ಹಿಂದೆ ಇದೇ ಜ್ಯೋತಿಷಿ ವೇಣು ಸ್ವಾಮಿ "ಟಾಲಿವುಡ್‌ನಲ್ಲಿ ಒಬ್ಬ ಯುವ ನಟ ಸಾಯುತ್ತಾರೆ" ಎಂದಿದ್ದರು.

ವೇಣುಸ್ವಾಮಿ ನುಡಿದಂತೆ ಟಾಲಿವುಡ್‌ನ ಯುವ ನಟ ತಾರಕ್ ರತ್ನ ಕೆಲವೇ ದಿನಗಳ ಹಿಂದಷ್ಟೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಹೀಗಾಗಿ ಇಬ್ಬರು ತೆಲುಗು ಹೀರೊಗಳು ಸಾಯುತ್ತಾರೆ ಎಂದಿರೋ ವೇಣು ಸ್ವಾಮಿ ಭವಿಷ್ಯವನ್ನು ಟಾಲಿವುಡ್ ಗಂಭೀರವಾಗಿ ತೆಗೆದುಕೊಂಡಿದೆ.

ಯಾರೀ ವೇಣುಸ್ವಾಮಿ?

ಟಾಲಿವುಡ್‌ನಲ್ಲಿ ವೇಣು ಸ್ವಾಮಿ ಸಿಕ್ಕಾಪಟ್ಟೆ ಜನಪ್ರಿಯ ಜ್ಯೋತಿಷಿ. ಇವರು ಹೇಳಿದ ಭವಿಷ್ಯವಾಣಿ ನಿಜವಾಗಿದೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಎರಡು ವರ್ಷ ಮುನ್ನವೇ ಭವಿಷ್ಯ ನುಡಿದಿದ್ದರು. ಆದರೆ, ಆ ವೇಳೆ ಇವರ ಭವಿಷ್ಯವನ್ನು ಯಾರೂ ನಂಬಿರಲಿಲ್ಲ.

ಇನ್ನೊಂದು ಕಡೆ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಳ್ಳುವಂತೆ ರಶ್ಮಿಕಾಗೆ ಇದೇ ವೇಣು ಸ್ವಾಮಿ ಹೇಳಿದ್ದರು. ಅಲ್ಲದೆ ರಶ್ಮಿಕಾ ಮಂದಣ್ಣ ಹಾಗೂ ನಿದಿ ಅಗರ್ವಾಲ್ ಇಬ್ಬರೂ ನಟಿಯರು ವೇಣು ಸ್ವಾಮಿ ಭವಿಷ್ಯವನ್ನು ನಂಬುತ್ತಾರೆಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿತ್ತು.

More from Filmibeat

English summary
Venu Swamy Shocking Astrology Prediction on Telugu Cinema industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X