ಚಲನಚಿತ್ರಗಳ ಒಳನೋಟ
ಕನ್ನಡ ಚಿತ್ರಗಳಿಗೆ ಹೊಸತನದ ಸ್ಪರ್ಶ ನೀಡಿದವರು ಯೋಗರಾಜ್ ಭಟ್. ಇವರನ್ನು ಕನ್ನಡದ ವಿಕಟ ಕವಿ ಅಂತಲೇ ಕರೆಯುತ್ತಾರೆ. ಭಟ್ಟರ ಎಲ್ಲಾ ಸಿನಿಮಾಗಳಲ್ಲೂ ಒಂದು ರೀತಿಯ ಹೊಸತನವಿರುತ್ತದೆ. ಜೊತೆಗೆ ಇವರ ಸಿನಿಮಾದ ಹಾಡುಗಳು, ಡೈಲಾಗ್ಗಳು ಅಷ್ಟೇ ವಿಭಿನ್ನವಾಗಿರುತ್ತವೆ. ಸದ್ಯ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಎಂಬ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಈ ಸಿನಿಮಾಗೂ ಮೊದಲು ನೋಡಲೇಬೇಕಾದ ಭಟ್ಟರ ಲವ್ ಸ್ಟೋರಿ ಸಿನಿಮಾಗಳ ಪಟ್ಟಿ ಇಲ್ಲಿದೆ.