X
ಹೋಮ್ ಚಲನಚಿತ್ರಗಳ ಒಳನೋಟ

ಅರ್ಧಕ್ಕೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 6 ಸಿನಿಮಾಗಳು ಯಾವ್ಯಾವು ಗೊತ್ತಾ? ಇಲ್ಲಿದೆ ಲಿಸ್ಟ್

Author Sowmya Bairappa | Published: Thursday, February 15, 2024, 04:42 PM [IST]

ಸಾಕಷ್ಟು ಸಿನಿಮಾಗಳು ಘೋಷಣೆಯಾಗಿ ಅರ್ಧಕ್ಕೆ ನಿಂತು ಬಿಡುತ್ತವೆ. ಮತ್ತೆ ಕೆಲವು ಮುಹೂರ್ತ ಆಚರಿಸಿಕೊಂಡು, ಅರ್ಧ ಚಿತ್ರೀಕರಣ ಮುಗಿದ ಬಳಿಕ ನಿಂತ ಅನೇಕ ಉದಾಹರಣೆಗಳಿವೆ. ಸಂಪೂರ್ಣವಾಗಿ ನಿರ್ಮಾಣವಾಗಿ ಕಾರಣಾಂತರಗಳಿಂದ ಬಿಡುಗಡೆಯಾಗದಿರುವ ಚಿತ್ರಗಳೂ ಇವೆ. ಸ್ಟಾರ್ ನಟರ ಸಿನಿಮಾಗಳು ಸೆಟ್ಟೇರುವ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುತ್ತವೆ. ಇನ್ನು ನಟ ದರ್ಶನ್ ನಟಿಸುತ್ತಾರೆ ಅಂದ್ರೆ ಸಾಕು ಸಹಜವಾಗಿಯೇ ಆ ಸಿನಿಮಾ ಚರ್ಚೆ ಹುಟ್ಟುಹಾಕುತ್ತದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿಬೇಕಿದ್ದ ಒಂದಷ್ಟು ಸಿನಿಮಾಗಳು ಇದೇ ರೀತಿ ಕಾರಣಾಂತರಗಳಿಂದ ನಿಂತಿವೆ. ಅದರಲ್ಲಿ ಕೆಲವು ಅಧಿಕೃವಾಗಿ ಘೋಷಣೆ ಸಹ ಆಗಿರಲಿಲ್ಲ. ಅವುಗಳು ಯಾವವು? ಅರ್ಧಕ್ಕೆ ನಿಂತಿದ್ದೇಕೆ ಎಂಬ ಮಾಹಿತಿ ಇಲ್ಲಿದೆ.


cover image
ರಾಜವೀರ ಮದಕರಿ ನಾಯಕ

ಚಿತ್ರದುರ್ಗದ ಕೊನೆಯ ಪಾಳೆಗಾರನಾದ ಮದಕರಿನಾಯಕನ ಜೀವನಾಧಾರಿತ ಚಿತ್ರ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಧ್ಯೆ ಪೈಫೋಟಿ ನಡೆದದ್ದು ಸುಳ್ಳಲ್ಲ. ನಂತರ ದರ್ಶನ್ ಈ ಸಿನಿಮಾ ಹೀರೋ ಆಗಿದ್ದರು. ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ಸಿನಿಮಾ ಸೆಟ್ಟೇರಿತ್ತು. ಕೇರಳದಲ್ಲಿ ಒಂದು ವಾರ ಶೂಟಿಂಗ್ ಕೂಡ ನಡೆದಿತ್ತು. ಆದರೆ, ಆನಂತರದಲ್ಲಿ ಸಿನಿಮಾದ ಮೇಲೆ ಯಾಕೋ ಹಿಡಿತ ಸಿಗಲಿಲ್ಲ ಎಂಬ ಕಾರಣಕ್ಕೆ ನಿಲ್ಲಿಸಿದ್ದಾಗಿ ಇತ್ತೀಚೆಗೆ ದರ್ಶನ್ ಹೇಳಿಕೊಂಡಿದ್ದರು. 

 

ನವಗ್ರಹ 2

ದರ್ಶನ್ ಹಾಗೂ ದಿನಕರ್ ತೂಗುದೀಪ್ ಅವರ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಸಿನಿಮಾ ನವಗ್ರಹ.  ಕನ್ನಡದ ಖ್ಯಾತ ಖಳನಟರ ಮಕ್ಕಳು ನಟಿಸಿದ್ದ ಈ ಚಿತ್ರ ಅಂದು ಅಷ್ಟಾಗಿ ಸದ್ದು ಮಾಡದಿದ್ದರೂ, ಅಭಿಮಾನಿಗಳು ಅದನ್ನು ಮರೆತ್ತಿಲ್ಲ. ಈ ಸಿನಿಮಾದ ಸೀಕ್ವೆಲ್ ಮಾಡಲು ಮೊದಲೇ ನಿರ್ಧರಿಸಲಾಗಿತ್ತು. ಅದೇ ಕಾರಣಕ್ಕೆ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಇಟ್ಟಿದ್ದರು. ಇವತ್ತಿಗೂ ಆ ಸಿನಿಮಾ ಮುಂದುವರೆದ ಭಾಗ ಮಾಡಲು ದಿನಕರ್ ಉತ್ಸುಕರಾಗಿದ್ದು, ಅದಕ್ಕೆ ಕಾಲ ಕೂಡಿಬರಬೇಕಿದೆ.

 

ಸರ್ವಾಂತರ್ಯಾಮಿ

ಸಾರಥಿ ಸಿನಿಮಾ ಬಳಿಕ ದಿನಕರ್ ಅವರ ನಿರ್ದೇಶನದಲ್ಲಿ 'ಸರ್ವಾಂತರ್ಯಾಮಿ' ಎಂಬ ಶೀರ್ಷಿಕೆಯಲ್ಲಿ ಚಿತ್ರವೊಂದು ಬರಲಿದೆ ಅಂತ ಸುದ್ದಿಯಾಗಿತ್ತು. ದರ್ಶನ್ ಅವರ 50ನೇ ಸಿನಿಮಾ 'ಸರ್ವಾಂತರ್ಯಾಮಿ' ಎಂದೇ ಹಲವರುಭಾಮಿಸಿದ್ದರು. ಆದ್ರೀಗ ಡಿ ಬಾಸ್ 56 ಸಿನಿಮಾ ಮುಗಿಸಿದರೂ ಅದು ಮಾತ್ರ ತೆರೆಗೆ ಬರಲಿಲ್ಲ.  

ಗೋಲ್ಡ್ ರಿಂಗ್

'ರಾಜವೀರ ಮದಕರಿ ನಾಯಕ' ನಿಂತ ಕಾರಣ ಈ ಸಿನಿಮಾ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಆದರೆ, ಕೊನೆಗೆ ರಾಕ್‌ಲೈನ್- ದರ್ಶನ್ ಕಾಂಬಿನೇಷನ್‌ನಲ್ಲಿ 'ಕಾಟೇರ' ಸಿನಿಮಾ ಬಂತು. 'ಗೋಲ್ಡ್ ರಿಂಗ್' ಕಥೆ ಏನಾಯ್ತು? ಮುಂದೆ ಈ ಸಿನಿಮಾ ತೆರೆಗೆ ಬರಲಿದ್ಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

 

ಆಸ್ಫೋಟ

11 ವರ್ಷಗಳ ಹಿಂದೆ ನಟ ದರ್ಶನ್ 'ಆಸ್ಫೋಟ' ಎನ್ನುವ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಎಎಂಆರ್‌ ರಮೇಶ್ ಈ ಚಿತ್ರ ಕಟ್ಟಿಕೊಡಲು ಮುಂದಾಗಿದ್ದರು. ರಾಜೀವ್ ಗಾಂಧಿ ಹತ್ಯೆ ಸುತ್ತಾ ಈ ಕಥೆ ಕೂಡ ಸುತ್ತುತ್ತದೆ. ಚಿತ್ರದಲ್ಲಿ ತಮಿಳುನಾಡಿನ ನಿಷ್ಠಾವಂತ ಪೊಲೀಸ್ ಅಧಿಕಾರಿ ಕಾರ್ತಿಕೇಯನ್ ಕಥೆ ಕಟ್ಟಿಕೊಡಲು ನಿರ್ಧರಿಸಿದ್ದರು. ದರ್ಶನ್ ಜೊತೆಗೂ ಮಾತುಕತೆ ನಡೆಸಿದ್ದರು. ಡಿ ಬಾಸ್ ಸಹ ಕಥೆ ಹೇಳಿ ಥ್ರಿಲ್ಲಾಗಿದ್ದರು ಎಂದು ನಿರ್ದೇಶಕರು ಹೇಳಿದ್ದರು. ಆದರೆ, ಆ ಸಿನಿಮಾ ಮಾತ್ರ ಬರಲೇಯಿಲ್ಲ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+