X
ಹೋಮ್ ಚಲನಚಿತ್ರಗಳ ಒಳನೋಟ

ಸೂಪರ್ ಹಿಟ್ ಧಾರಾವಾಹಿ ಕೊಟ್ಟು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಕಿರುತೆರೆ ನಟರಿವರು!

Author Sowmya Bairappa | Updated: Saturday, January 25, 2025, 11:02 AM [IST]

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟ-ನಟಿಯರಿಗಿಂತ ಸೀರಿಯಲ್ ಕಲಾವಿದರು ಜನರಿಗೆ ಹೆಚ್ಚು ಪರಿಚಿತರಾಗಿರುತ್ತಾರೆ. ಕೆಲವರಂತೂ ತಮ್ಮ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿರುತ್ತಾರೆ. ಒಳ್ಳೆಯ ನಟರಾಗಬೇಕು, ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಗಳಿಸಬೇಕು ಎಂಬೆಲ್ಲಾ ಕನಸುಗಳನ್ನು ಹೊತ್ತು ಬಂದವರಿಗೆ ಮೊದಲು ಮಣೆ ಹಾಕಿದ್ದು ಕೂಡ ಕನ್ನಡ ಕಿರುತೆರೆ. ಕನ್ನಡ ಚಿತ್ರರಂಗಕ್ಕೆ 'ಕಿರುತೆರೆ' ಸಾಕಷ್ಟು ಪ್ರತಿಭಾವಂತ ಕಲಾವಿದರನ್ನು ನೀಡಿದೆ. ಇಲ್ಲಿ ಸೂಪರ್ ಹಿಟ್ ಧಾರಾವಾಹಿ ಕೊಟ್ಟು ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಧನುಷ್ ಗೌಡ
1

ಈ ಹಿಂದೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸೂಪರ್ ಹಿಟ್ 'ಗೀತಾ' ಸೀರಿಯಲ್ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದಿದ್ದ  ಧನುಷ್ ಗೌಡ, ಇದೀಗ 'ನೂರು ಜನ್ಮಕೂ' ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. 2020ರಲ್ಲಿ ಆರಂಭವಾಗಿದ್ದ ಗೀತಾ ಧಾರಾವಾಹಿಯಲ್ಲಿ ಧನುಷ್, ವಿಜಯ್ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಇದೀಗ ನೂರು ಜನ್ಮಕೂ ಸೀರಿಯಲ್‌ನಲ್ಲಿ ಚಿರು ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಶರತ್ ಪದ್ಮನಾಭ್
2

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ 'ಪಾರು' ಧಾರಾವಾಹಿಯಲ್ಲಿ ಆದಿತ್ಯನಾಗಿ ಮೋಡಿ ಮಾಡಿದ್ದ ಶರತ್ ಪದ್ಮನಾಭ್, ಇದೀಗ 'ನಾ ನಿನ್ನ ಬಿಡಲಾರೆ' ಎಂಬ ಹಾರರ್ ಶೈಲಿಯ ಧಾರಾವಾಹಿ ಮೂಲಕ  ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕರುಳಬಳ್ಳಿಯ ಕಾಪಾಡಲು ಹೋರಾಡೋ ಅಮ್ಮನ ‘ಆತ್ಮ’ಕತೆ ಎಂಬ ಅಡಿಬರಹವಿರುವ ಈ ಸೀರಿಯಲ್ ಜನವರಿ 27ರಿಂದ ಪ್ರಸಾರ ಕಾಣ್ತಿದೆ. ಈ ಸೀರಿಯಲ್‌ನಲ್ಲೂ ಶರತ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.

ಅಭಿಷೇಕ್ ಶ್ರೀಕಾಂತ್
3

ಕಲರ್ಸ್ ವಾಹಿನಿಯ ಜನಪ್ರಿಯ ಸೀರಿಯಲ್‌ಗಳ ಪೈಕಿ 'ಲಕ್ಷಣ' ಕೂಡ ಒಂದು. ಈ ಧಾರಾವಾಹಿಯಲ್ಲಿ ಮೌರ್ಯ ಎಂಬ ನೆಗೆಟಿವ್ ರೋಲ್‌ನಲ್ಲಿ ಮಿಂಚಿ, ಸೀರಿಯಲ್‌ ವೀಕ್ಷಕರ ಮನಗೆದ್ದಿದ್ದ ಅಭಿಷೇಕ್ ಶ್ರೀಕಾಂತ್, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಲರ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ವಧುವಿನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸೀರಿಯಲ್ ಜನವರಿ 27ರಿಂದ ಪ್ರಸಾರ ಕಾಣ್ತಿದೆ.

ದುರ್ಗಾಶ್ರೀ
4

ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ನೇತ್ರಾವತಿ' ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟಿದ್ದ ನಟಿ ದುರ್ಗಾಶ್ರೀ, ನಂತರ ಪರಭಾಷಾ ಧಾರಾವಾಹಿಗಳಲ್ಲಿ ಮಿಂಚಿದ್ದರು. ಇದೀಗ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವಧು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಈ ಸೀರಿಯಲ್‌ ಜನವರಿ 27ರಿಂದ ಪ್ರಸಾರವಾಗಲಿದ್ದು, ಅಭಿಷೇಕ್ ಶ್ರೀಕಾಂತ್ ನಾಯಕನಾಗಿ ನಟಿಸಿದ್ದಾರೆ.


ವಿಜಯ ಸೂರ್ಯ
5

ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ಸಿದ್ಧಾರ್ಥ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗುಳಿಕೆನ್ನೆ ಹುಡುಗ ವಿಜಯ್ ಸೂರ್ಯ, ಸುಮಾರು ಏಳೆಂಟು ವರ್ಷಗಳ ಕಾಲ ಆ ಪಾತ್ರದ ಮೂಲಕ ಮೋಡಿ ಮಾಡಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಪ್ರೇಮಲೋಕ ಹಾಗೂ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಕಲರ್ಸ್ ವಾಹಿನಿಗೆ ಕಂಬ್ಯಾಕ್ ಮಾಡಿರುವ ವಿಜಯ್, ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ದತ್ತ ಭಾಯ್ ಎಂಬ ಖಡಕ್ ಪಾತ್ರ ಮಾಡುತ್ತಿದ್ದಾರೆ. ಇಷ್ಟುದಿನ ಲವರ್ ಬಾಯ್ ಆಗಿ ಮೋಡಿ ಮಾಡಿದ್ದ ಇವರು, ಮಾಸ್ ಅವತಾರದಲ್ಲಿ ಮಿಂಚುತ್ತಿದ್ದಾರೆ.

ನೀತಾ ಅಶೋಕ್
6

ಈ ಟಿವಿ ವಾಹಿನಿಯಲ್ಲಿ ದಶಕಗಳ ಹಿಂದೆ ಪ್ರಸಾರವಾಗಿದ್ದ 'ಯಶೋದೆ' ಸೀರಿಯಲ್‌ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ನೀತಾ ಅಶೋಕ್, ಇದೀಗ ನಾ ನಿನ್ನ ಬಿಡಲಾರೆ ಎಂಬ ಹಾರರ್ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಯಶೋದೆ ಬಳಿಕ ನಾ ನಿನ್ನ ಬಿಡಲಾರೆ, ನೀಲಾಂಬರಿ ಎಂಬ ಹಾರರ್ ಧಾರಾವಾಹಿಗಳಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಆರು ವರ್ಷಗಳ ನಂತರ ಜೀ ಕನ್ನಡ ವಾಹಿನಿಯ 'ನಾ ನಿನ್ನ ಬಿಡಲಾರೆ' ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+