ಚಲನಚಿತ್ರಗಳ ಒಳನೋಟ
ಬಿಗ್ಬಾಸ್ ಮನೆಯಲ್ಲಿ ವಿನಯ್ ಗೌಡ ಆಗಾಗ ಸಿಟ್ಟಾಗಿ ಕೂಗಾಡುವುದನ್ನು ವೀಕ್ಷಕರು ನೋಡಿದ್ದಾರೆ. ವಾರಾಂತ್ಯ ಸಂಚಿಕೆಯಲ್ಲಿ ಯಾರು ಯಾವ ಪುಸ್ತಕ ಬರೆದರೆ ಸೂಕ್ತ ಎಂಬ ಚಟುವಟಿಯನ್ನು ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ನೀಡಿದ್ದರು. ಈ ವೇಳೆ ಡ್ರೋನ್ ಪ್ರತಾಪ್ 'ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ? ಎಂಬ ಪುಸ್ತಕವನ್ನು ವಿನಯ್ಗೆ ನೀಡಿದರು. ಇದರಿಂದಾಗಿ ವಿನಯ್ಗೆ ಪ್ರತಾಪ್ ಮೇಲೆ ಕೋಪ ಹೆಚ್ಚಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಲೇ ಇತ್ತು. ಆದ್ರೀಗ ವಿನಯ್ ಅವರು ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ.