X
ಹೋಮ್ ಚಲನಚಿತ್ರಗಳ ಒಳನೋಟ

ನನ್ನಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ, ನೀನು ಗೆದ್ದರೆ ನನಗೆ ಖುಷಿಯಾಗುತ್ತೆ: ಪ್ರತಾಪ್‌ಗೆ ಕ್ಷಮೆ ಕೇಳಿ ವಿನಯ್

Author Sowmya Bairappa | Published: Wednesday, January 10, 2024, 06:08 PM [IST]

ಬಿಗ್‌ಬಾಸ್‌ ಮನೆಯಲ್ಲಿ ವಿನಯ್ ಗೌಡ ಆಗಾಗ ಸಿಟ್ಟಾಗಿ ಕೂಗಾಡುವುದನ್ನು ವೀಕ್ಷಕರು ನೋಡಿದ್ದಾರೆ. ವಾರಾಂತ್ಯ ಸಂಚಿಕೆಯಲ್ಲಿ ಯಾರು ಯಾವ ಪುಸ್ತಕ ಬರೆದರೆ ಸೂಕ್ತ ಎಂಬ ಚಟುವಟಿಯನ್ನು ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ನೀಡಿದ್ದರು. ಈ ವೇಳೆ ಡ್ರೋನ್ ಪ್ರತಾಪ್ 'ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ? ಎಂಬ ಪುಸ್ತಕವನ್ನು ವಿನಯ್‌ಗೆ ನೀಡಿದರು. ಇದರಿಂದಾಗಿ ವಿನಯ್‌ಗೆ ಪ್ರತಾಪ್ ಮೇಲೆ ಕೋಪ ಹೆಚ್ಚಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಲೇ ಇತ್ತು. ಆದ್ರೀಗ ವಿನಯ್ ಅವರು ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ.


cover image
ಅವಾಚ್ಯ ಶಬ್ಧ ಬಳಸಿದ್ದ ವಿನಯ್

ಪ್ರತಾಪ್ ಮೇಲೆ ಕೋಪಗೊಂಡಿದ್ದ ವಿನಯ್, 'ತಿ* ಮುಚ್ಕೊಂಡು ಇರು....ಏನು ಅಲ್ಲಾಡ್ಸಕ್ಕೆ ಆಗಲ್ಲ. ನನಗೆ ಏನು ಮಾತನಾಡಬೇಕು ಅಂತ ಗೊತ್ತು. ನೀನು ಹೆದರಿಲ್ಲ ಅಂದ್ರೆ ** ಹೋಯ್ತು ಎಂದೆಲ್ಲಾ ಮಾತನಾಡಿದ್ದರು. ಕೆಟ್ಟ ಶಬ್ದ ಬಳಸಬೇಡಿ ಅಂತ ಮನೆಯ ಇತರ ಸದಸ್ಯರು ವಿರೋಧಿಸಿದ್ದರು. 

ಪ್ರತಾಪ್ ಮೇಲೆ ಹೋದರು, ನೀವು ಕೆಳಗೆ ಕಾಣಿಸಿದ್ರಿ

ವಿನಯ್ ಅವರು ಪ್ರತಾಪ್‌ಗೆ ಅವಾಚ್ಯ ಶಬ್ದ ಬಳಸಿರುವುದನ್ನು ವರ್ತೂರು ಸಂತೋಷ್ ವಿರೋಧಿಸಿದ್ದರು. ಪ್ರತಾಪ್ ಮೇಲೆ ಹೋದರು, ನೀವು ಕೆಳಗೆ ಕಾಣಿಸಿದ್ರಿ. ಸಿನಿಮಾದಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾ, ಬೈಯುತ್ತಾ ಇರುವವರನ್ನು ಏನೆಂದು ಕರೆಯುತ್ತಾರೆ ಹೇಳಿ ಎಂದರು. ಆಗ ವಿನಯ್, ವಿಲನ್ ಎಂದರು. ಅದಕ್ಕೆ ಸಂತೋಷ್ ಅಷ್ಟೇ, ನೀವು ಆಗಿದ್ದೂ ಅದೇ ಎಂದರು. ಅದಕ್ಕೆ ವಿನಯ್, ನಾನು ಮಾತನಾಡಿದ್ದು ಕೆಟ್ಟದಾಗಿ ಇತ್ತು. ನಾನು ಮಾತನಾಡೋದೇ ಹಾಗೆ. ಆದರೆ, ವಿಷಯ ತಪ್ಪಿರಲಿಲ್ಲ ಎಂದಿದ್ದರು. 

 

ಕ್ಷಮೆ ಕೇಳಿದ ವಿನಯ್ ಗೌಡ

ಫಿನಾಲೆ ತಲುಪಿ, ಟಾಪ್ 2 ಸ್ಪರ್ಧಿಗಳ ಪೈಕಿ ನೀವು ಒಬ್ಬರಾದರೆ ನಿಮ್ಮ ಜೊತೆಗಿರುವ ಇನ್ನೊಬ್ಬ ಸ್ಪರ್ಧಿ ಯಾರಾಗಬೇಕು ಅಂತ ಬಯಸುತ್ತೀರಿ? ಅಂತ ಪ್ರಶ್ನಿಸಿದರು. ಈ ಸಂದರ್ಭ ವಿನಯ್ 'ಕಾರ್ತಿಕ್' ಹೆಸರು ಹೇಳಿದ್ದರು. ಬಳಿಕ ಮಾತನಾಡಿದ ಅವರು, ನನಗೆ ಕೋಪ ಬಂದಾಗ ಕೂಗಾಡುತ್ತೇನೆ. ಇದರಿಂದ ಯಾರಿಗಾರದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ, ಪ್ರತಾಪ್ ನಿನಗೂ ಕೂಡ ಎಂದರು. ಬಳಿಕ ಪ್ರತಾಪ್ ಬಳಿ ತೆರಳಿ ಹಗ್ ಕೊಟ್ಟು, ನನ್ನಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ. ನೀನು ಗೆದ್ದರೆ ನನಗೆ ಖುಷಿ ಆಗುತ್ತದೆ ಎಂದರು. ವಿನಯ್ ಕ್ಷಮೆ ಕೇಳಿದ್ದಕ್ಕೆ ಇತರ ಸದಸ್ಯರು ಖುಷಿಪಟ್ಟರು. ಪ್ರತಾಪ್ ಅವರಿಗೂ ವಿನಯ್ ಕ್ಷಮೆ ಕೇಳಿದ್ದು ಖುಷಿಯಾಯಿತು. ನಂತರ ಪ್ರತಾಪ್, ತಪ್ಪಿನ ಅರಿವಾಯಿತಲ್ಲ, ಅದು ಖುಷಿಯ ವಿಚಾರ. ನೀವು ಗೆದ್ದರೆ ನನಗೂ ಸಂತೋಷವೇ. ನಾಲಿಗಗೆ ಲಗಾಮು ಹಾಕಿಕೊಳ್ಳಿ ಅಂತ ಮನವಿ ಮಾಡಿದರು. ಅದಕ್ಕೆ ವಿನಯ್ ಕೂಡ ಸಮ್ಮತಿ ಸೂಚಿಸಿದರು.   

ಕಣ್ಣೀರು ಹಾಕಿದ ತನಿಷಾ

14ನೇ ವಾರದ ನಾಮಿನೇಷನ್ ಪ್ರಕ್ರಿಯೆ ಸಂದರ್ಭ ಕಾರ್ತಿಕ್ ಅವರು ತನಿಷಾನ ನಾಮಿನೇಟ್ ಮಾಡಿದರು. ಇದು ತನಿಷಾಗೂ ಸೇರಿದಂತೆ ಇತರ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿತು.  ತನಿಷಾ ಕಣ್ಣಲ್ಲಿ ನೀರು ತುಂಬಿಕೊಂಡು ಹಾರ್ಟ್‌ಗೆ ನಿಧಾನವಾಗಿ ಚುಚ್ಚು. ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ ಎಂದರು. ನಂತರ ವಿನಯ್, ನಮ್ರತಾ ಹಾಗೂ ಸಂಗೀತಾ ಈ ಬಗ್ಗೆ ಚರ್ಚಿಸಿದ್ದಾರೆ. ನಾವು ಫ್ರೆಂಡ್‌ಶಿಪ್ ಕಾರ್ಡ್ ಅಂತ ಹೇಳಿದ್ದಕ್ಕೆ ಕಾರ್ತಿಕ್ ಈ ರೀತಿ ಮಾಡಿದ್ದಾರೆ. ಆರೋಪ ಸುಳ್ಳು ಅಂತ ತೋರಿಸುವುದು ಅವರ ಉದ್ದೇಶ ಅಂತ ಅಭಿಪ್ರಾಯಪಟ್ಟರು.

ನಾನೇನು ಮಾಡಲಿ?

ತನಿಷಾ ಹಾಗೂ ಕಾರ್ತಿಕ್ ಬಿಗ್‌ಬಾಸ್‌ ಮನೆಗೆ ಬರುವ ಮುಂಚೆಯೇ ಸ್ನೇಹಿತರು. ಇಷ್ಟು ದಿನಗಳ ಕಾಲ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಆದ್ರೀಗ ಅವರಿಬ್ಬರ ನಡುವೆ ಬಿರುಕು ಮೂಡಿದೆ. ಇಂದಿನ ಸಂಚಿಕೆಯಲ್ಲಿ ಫಿನಾಲೆ ಟಿಕೆಟ್ ಪಡೆಯಲು 'ಬಿಗ್‌ಬಾಸ್‌' ತನಿಷಾಗೆ ಹೊಸ ಟಾಸ್ಕ್ ನೀಡಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಜಗಳ ನಡೆದಿದ್ದು, ಕಾರ್ತಿಕ್ ಅವರ ತಲೆಮೇಲೆ ಅವರೇ ಕಲ್ಲು ಎತ್ತಿಹಾಕಿಕೊಂಡರೆ ನಾನೇನು ಮಾಡಲಿ ಅಂತ ತನಿಷಾ ಹೇಳಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+