X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟ ಸಾಮಾನ್ಯ ಜನರು: ಹನುಮಂತನಿಗೆ ಜೈಕಾರ, ಮಾನಸಾಗೆ ಧಿಕ್ಕಾರ!

Author Sowmya Bairappa | Published: Friday, October 25, 2024, 11:12 AM [IST]

ಬಿಗ್‌ಬಾಸ್ ಮನೆಯಲ್ಲಿ ಸದ್ಯ ಧರ್ಮಪರ ಸೇನಾ ಹಾಗೂ ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ಎಂಬ ಎರಡು ರಾಜಕೀಯ ಪಕ್ಷಗಳು ರಚನೆಯಾಗಿವೆ. ಒಂದು ಪಕ್ಷಕ್ಕೆ ತ್ರಿವಿಕ್ರಮ್ ಲೀಡರ್ ಆಗಿದ್ದರೆ, ಇನ್ನೊಂದಕ್ಕೆ ಐಶ್ವರ್ಯಾ ಸಿಂಧೋಗಿ ಲೀಡರ್ ಆಗಿದ್ದಾರೆ. ಈ ಎರಡು ಪಕ್ಷಗಳಿಗೆ ಕಳೆದ ಸಂಚಿಕೆಯಲ್ಲಿ ಬಿಗ್‌ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದನ್ನು ಸರಿಯಾಗಿ ಆಡದೇ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು. ಇಂದಿನ ಸಂಚಿಕೆಯಲ್ಲಿ ಬಿಗ್‌ಬಾಸ್ ಇತಿಹಾಸದಲ್ಲೇ ಪ್ರಥಮ ಬಾರಿ ದೊಡ್ಮನೆಗೆ ಸಾಮಾನ್ಯ ಜನರು ಎಂಟ್ರಿಕೊಟ್ಟಿದ್ದಾರೆ.


cover image
ದೊಡ್ಮನೆಗೆ ಸಾಮಾನ್ಯ ಜನರು ಎಂಟ್ರಿ

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಬಿಗ್‌ಬಾಸ್ ಇತಿಹಾಸದಲ್ಲೇ ಪ್ರಥಮ ಬಾರಿ ದೊಡ್ಮನೆಗೆ ಸಾಮಾನ್ಯ ಜನರು ಎಂಟ್ರಿಕೊಟ್ಟಿದ್ದಾರೆ. ಇದನ್ನು ಕಂಡು ಸ್ಪರ್ಧಿಗಳು ಖುಷಿಪಟ್ಟಿದ್ದಾರೆ. ಈ ಸಂದರ್ಭ ತ್ರಿವಿಕ್ರಮ್ ತುಂಬಾ ದಿನಗಳಾದ ಮೇಲೆ ನನ್ನ ತಾಯಿ ಹಾಗೂ ಅಕ್ಕ ನೆನಪಾಗುತ್ತಿದ್ದಾರೆ ಎಂದಿದ್ದಾರೆ. ವ್ಯಕ್ತಿಯೊಬ್ಬರು 'ಹನುಮಂತಣ್ಣ ನಿನ್ನ ಪಂಚೆ ಎಲ್ಲಿದೆ?' ಅಂತ ಕೇಳಿದ್ದಾರೆ. ಅದಕ್ಕೆ ಹನುಮಂತ ಒಳಗಿದೆ, ತೆಗೆದುಕೊಂಡು ಬರಲೇ? ಅಂತ ಉತ್ತರಿಸಿದ್ದಾರೆ.

ಮಾನಸಾಗೆ ದಿಕ್ಕಾರ

ಇನ್ನು ತುಕಾಲಿ ಮಾನಸ ಸ್ಟೇಜ್‌ಗೆ ಬರುತ್ತಿದ್ದಂತೆ 'ನಿಮ್ಮ ಕಿರುಚಾಟ ಕಂಡು ಇಡೀ ಕರ್ನಾಟಕವೇ ಭಯಬಿದ್ದು ಹೋಗಿದೆ' ಎಂದಿದ್ದಾರೆ. ಅದಕ್ಕೆ ಮಾನಸ, ನಿನ್ನ ಸಮಸ್ಯೆ ಏನು ಹೇಳಣ್ಣ ಎನ್ನುತ್ತಿದ್ದಂತೆ ಎಲ್ಲರೂ 'ಧಿಕ್ಕಾರ ಧಿಕ್ಕಾರ' ಅಂತ ಕೂಗಿದ್ದಾರೆ. ಅದನ್ನು ಕಂಡು ಮಾನಸ ಸಪ್ಪೆ ಮುಖ ಮಾಡಿಕೊಂಡಿದ್ದಾರೆ. 

ಕಳೆದ ಸಂಚಿಕೆಯಲ್ಲಿ ಏನಾಯ್ತು?

ಗಾರ್ಡನ್ ಏರಿಯಾದಲ್ಲಿ ಎರಡು ಪಕ್ಷಗಳಿಗೆ ಒಂದೊಂದು ಬೋರ್ಡ್ ಇಡಲಾಗಿತ್ತು. ಆಯಾ ತಂಡದ ಸದಸ್ಯರು ಬಿಗ್‌ಬಾಸ್ ಕಳುಹಿಸುವ ವಸ್ತುಗಳಲ್ಲಿ ಪೋಸ್ಟರ್ ತಯಾರಿಸಿ, ಆ ಬೋರ್ಡ್‌ಗೆ ಅಂಟಿಸಬೇಕಿತ್ತು. ಒಂದು ಪಕ್ಷದವರು ಪೋಸ್ಟರ್ ಅಂಟಿಸಿದರೆ, ಮತ್ತೊಂದು ಪಾರ್ಟಿಯವರು ಕಿತ್ತುಹಾಕಬೇಕಿತ್ತು. ಆಯಾ ಪಕ್ಷದ ಸದಸ್ಯರು ತಮ್ಮ ಪಾರ್ಟಿಯ ಪೋಸ್ಟರ್ ಕೀಳದಂತೆ ರಕ್ಷಣೆ ಮಾಡಿಕೊಳ್ಳಬೇಕಿತ್ತು. ಆದರೆ, ಎರಡು ತಂಡದ ಸ್ಪರ್ಧಿಗಳು ಬಿಗ್‌ಬಾಸ್ ನೀಡಿದ ಟಾಸ್ಕ್ ಅಗ್ರೆಸ್ಸಿವ್ ಆಗಿ ತೆಗೆದುಕೊಂಡರು. ಎರಡು ಬಾರಿ ಟಾಸ್ಕ್ ಆಡಿಸಿದ್ರೂ ಯಾವುದೇ ಫಲಿತಾಂಶ ಬರಲಿಲ್ಲ. ಹಾಗಾಗಿ ಬಿಗ್‌ಬಾಸ್ ಅಸಮಾಧಾನ ವ್ಯಕ್ತಪಡಿಸಿ, ಆಟ ರದ್ದುಗೊಳಿಸಿದ್ದರು. 


ಈ ವಾರ ಕಿಚ್ಚ ಸುದೀಪ್ ಇರಲ್ಲ

ಕಳೆದ ವಾರ ಕಿಚ್ಚ ಸುದೀಪ್ ತಾಯಿ ಸರೋಜಾ ವಿಧಿವಶರಾಗಿದ್ದಾರೆ. ಸುದೀಪ್ ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ದುಃಖದಲ್ಲಿರುವ ಕಿಚ್ಚ ವೀಕೆಂಡ್ ಶೂಟಿಂಗ್‌ನಲ್ಲಿ ಭಾಗವಹಿಸುವ ಸಾಧ್ಯತೆ ತೀರಾ ಕಡಿಮೆಯಿದೆ. ಇನ್ನು ಮೂರನೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ನಡೆಸಿಕೊಟ್ಟಿದ್ದು ಕೇವಲ ಒಂದು ಎಪಿಸೋಡ್ ಮಾತ್ರ. ತಾಯಿಯ ಅನಾರೋಗ್ಯದ ವಿಷಯ ಗೊತ್ತಾದ ಮೇಲೆಯೂ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಆಮೇಲೆ ಅಮ್ಮನ ಆರೋಗ್ಯ ಸ್ಥಿತಿ ಗಂಭೀರ ಅಂತ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ತೆರಳಿದ್ದರು.  


ಬಿಗ್‌ ಸರ್‌ಪ್ರೈಸ್

ಈ ವೀಕೆಂಡ್‌ನಲ್ಲಿ ಸುದೀಪ್ ಇರದಿದ್ದರೂ, ಬಿಗ್‌ಬಾಸ್ ತಂಡ ಹೊಸ ಸರ್‌ಪ್ರೈಸ್ ನೀಡಲಿದೆಯಂತೆ. ಅದು ಏನು ಅನ್ನೋದು ಸದ್ಯಕ್ಕಿರುವ ಸಸ್ಪೆನ್ಸ್. ಇದರ ಜೊತೆಗೆ ಈ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್ ಆಗಿದ್ದು, ಎಲಿಮಿನೇಷನ್ ಇದ್ಯಾ? ಇಲ್ಲವಾ? ಎನ್ನುವ ಕುತೂಹಲ ವೀಕ್ಷಕರಲ್ಲಿದೆ.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+