X
ಹೋಮ್ ಚಲನಚಿತ್ರಗಳ ಒಳನೋಟ

ಗಂಡ್ ಮಕ್ಳ ಮೇಲೆ ಹೊಡೆಯೋಕೆ ಹೊಕ್ಕಾಳೆ: ಮಾನಸ ಬಗ್ಗೆ ದೂರು ಹೇಳಿದ ಹನುಮಂತು

Author Sowmya Bairappa | Published: Monday, October 28, 2024, 11:22 AM [IST]

ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ನಾಲ್ಕನೇ ವೀಕೆಂಡ್ ಎಪಿಸೋಡ್‌ಗಳು ಮುಕ್ತಾಯಗೊಂಡಿವೆ. ಸುದೀಪ್ ಬದಲಿಗೆ ಶನಿವಾರ ಎಪಿಸೋಡ್ ಯೋಗರಾಜ್ ಭಟ್ ನಡೆಸಿಕೊಟ್ಟರೆ, ಭಾನುವಾರ ಸಂಚಿಕೆಯನ್ನು ಸೃಜನ್ ಲೋಕೇಶ್ ನಡೆಸಿಕೊಟ್ಟಿದ್ದಾರೆ. ದೊಡ್ಮನೆಗೆ ಎಂಟ್ರಿಕೊಟ್ಟ ಸೃಜನ್, ಮನೆಯ ಸದಸ್ಯರಿಗೆ ತಮ್ಮ ಸಹಸ್ಪರ್ಧಿಗಳ ಬಗ್ಗೆ ಇರುವ ಅಭಿಪ್ರಾಯ ತಿಳಿಸುವಂತೆ ಹೇಳಿದ್ದಾರೆ. ಇಲ್ಲಿ ಕಳೆದ ಸಂಚಿಕೆಯಲ್ಲಿ ಏನಾಯ್ತು ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಮಾನಸಾ ಬಗ್ಗೆ ಹನುಮಂತ ಹೇಳಿದ್ದೇನು?

ಸೃಜನ್ ಲೋಕೇಶ್ ಹನುಮಂತು ಅವರನ್ನು ಕರೆದು 'ಮಾನಸ ಯಾವ ರೀತಿ ಮಾತನಾಡಬೇಕು ಎಂಬುದು ನಿನ್ನ ಅಭಿಪ್ರಾಯ' ಅಂತ ಕೇಳಿದರು. ಇದಕ್ಕೆ ಉತ್ತರಿಸಿದ ಹನುಮಂತ, ಅರ್ಧಂಬರ್ಧ ತಿಳಿದುಕೊಂಡು ಆರ್ಡರ್ ಮಾಡೋದು ಸರಿಯಾಗಲ್ರೀ. ಯಾವಾಗಲೂ ವಿಚಾರ ತಿಳಿದುಕೊಂಡು ಮಾತನಾಡಬೇಕು. ಮಾನಸ ಮಾತು ಕೇಳಿ ಬೇರೆಯವರಿಗೆ ಬೇಜಾರ್ ಆಗೈತ್ರೀ ಎಂದು ಹೇಳಿದ್ದಾರೆ. 

 ಗಂಡ್ ಮಕ್ಳ ಮೇಲೆ ಹೊಡೆಯೋಕೆ ಹೊಕ್ಕಾಳೆ

ನಂತರ ಇನ್ನೊಂದು ಆರೋಪ ಮಾಡಿದ ಹನುಮಂತ, ಗಂಡು ಮಕ್ಳು ಮೈಮೇಲೆ ಏರಿ ಏರಿ ಹೊಕ್ಕಾಳೆ ಹಂಗೆ...ಅಂದ್ರ ಗಂಡ್ ಮಕ್ಳಿಗೆ ಹೊಡೆಯೋಕೆ ಹೋಗೋ ಥರ ಬಾಯಿ ಮಾಡ್ತಾಳೆ. ಮುಖದಾಗ ಮುಖ ಇಟ್ ಮಾತನಾಡ್ತಾಳೆ ಅಂದರು. ಹನುಮಂತು ಮಾತು ಕೇಳಿಸಿಕೊಂಡ ಸೃಜನ್, ಅಂತಿಮವಾಗಿ ಮಾನಸ ಹೇಗೆ ಮಾತನಾಡಬೇಕು ಹೇಳು ಎಂದರು. ಆಗ 'ನೋಡಣ್ಣ...ಹಿಂಗ್ ಅಣ್ಣ...ಹಿಂಗ್ ಅಲ್ಲಣ್ಣ, ಇದಣ್ಣ, ಇದಲ್ಲಣ್ಣ' ಅಂತ ಮಾತನಾಡಬೇಕು ಅಂತ ಸಲಹೆ ನೀಡಿದ್ದಾರೆ. ಮಾನಸ ಅವರು ಹನುಮಂತು ಮಾತನ್ನು ಫಾಲೋ ಮಾಡ್ತಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. 

ಹನುಮಂತನ ಬಗ್ಗೆ ಸ್ಫರ್ದಿಗಳಿಗಿರುವ ಅಭಿಪ್ರಾಯ

ಶನಿವಾರದ ಸಂಚಿಕೆಯಲ್ಲಿ ಯೋಗರಾಜ್ ಭಟ್ 'ಹನುಮಂತ ನಿಜವಾಗಿಯೂ ಮುಗ್ಧನಾ? ಅಥವಾ ಸ್ಮಾರ್ಟ್ ಆಗಿದ್ದಾನಾ? ಅಂತ ಪ್ರಶ್ನೆ ಮಾಡಿದ್ದರು. ಆಗ ತ್ರಿವಿಕ್ರಮ್, ಹನುಮಂತ ಭಯಂಕರ ಕಿಲಾಡಿ. ತಲೆ ಇದ್ದೇ ಆಟ ಆಡುತ್ತಿದ್ದಾನೆ ಅಂತ ನನಗೆ ಮಾದಲ ದಿನವೇ ಅನಿಸಿತು ಅಂದರು. ಶಶಿರ್, ಬುದ್ಧಿವಂತಿಕೆಯಂತೂ ಖಂಡಿತಾ ಇದೆ. ಆದರೆ, ಅದನ್ನು ಎಲ್ಲಿ ಹೇಗೆ ತೊರಿಸಬೇಕು ಎಂಬುದಕ್ಕೆ ಅವನಿಗಿನ್ನೂ ಅವಕಾಶ ಸಿಕ್ಕಿಲ್ಲ ಎಂದರು. ಆಗ ಹನುಮಂತು, ಬಿಟ್ಟರೇ ಈಗಲೇ ಹೋಗುತ್ತೇನೆ. ನನಗೆ ತಲೆ ಕೆಟ್ಟೈತಿ. ಒಂದು ವಾರಕ್ಕೆ ತಲೆ ಆಪ್ ಆಗೈತಿ. ಯಾಕಂದ್ರ, ಇಷ್ಟೊಂದು ತಲೆ ನಮಗಿಲ್ಲ. ಅಷ್ಟೊಂದು ವಿಚಾರ ತಲೆಯಲ್ಲಿಟ್ಟುಕೊಂಡು ಮಾತನಾಡೋಕೆ ಆಗಲ್ಲ ಎಂದರು.

ಎಲಿಮಿನೇಟ್ ಆದವರು ಯಾರು?

ನಾಲ್ಕನೇ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗಲು ಮೋಕ್ಷಿತಾ, ಭವ್ಯಾ, ಚೈತ್ರಾ, ಗೌತಮಿ, ಹಂಸಾ, ಮಂಜು, ಮಾನಸಾ, ಶಿಶಿರ್ ಹಾಗೂ ಗೋಲ್ಡ್‌ ಸುರೇಶ್ ನಾಮಿನೇಟ್ ಆಗಿದ್ದರು. ಎಲ್ಲರೂ ಸೇಫ್ ಆಗಿ ಕೊನೆಯಲ್ಲಿ ಮೋಕ್ಷಿತಾ ಹಾಗೂ ಹಂಸಾ ಉಳಿದುಕೊಂಡರು. ಆದ್ರೀಗ ಹಂಸ ಪ್ರತಾಪ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದ್ದು, ಇಂದಿನ ಸಂಚಿಕೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ.


ಮೋಕ್ಷಿತಾ & ತ್ರಿವಿಕ್ರನ್ ಫೈಟ್

ಎಲಿಮಿನೇಷನ್ ಹಂತದಲ್ಲಿದಾಗ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ತ್ರಿವಿಕ್ರಮ್ ಗುಂಪುಗಾರಿಕೆ ಮಾಡ್ತಾರೆ ಅಂತ ಕಾರಣ ನೀಡಿದ್ದರು. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಮೋಕ್ಷಿತಾ ಹಾಗೂ ತ್ರಿವಿಕ್ರಮ್ ನಡುವೆ ಫೈಟ್ ನಡೆದಿದೆ. ಇಷ್ಟುದಿನ ಮನೆಯಲ್ಲಿ ಸೈಲೆಂಟ್ ಆಗಿದ್ದ ಮೋಕ್ಷಿತಾ, ತಮ್ಮ ಉಗ್ರ ಸ್ವರೂಪ ತೋರಿಸಿದ್ದಾರೆ. 



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+