ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ವೀಕೆಂಡ್ ಎಪಿಸೋಡ್ಗಳು ಮುಕ್ತಾಯಗೊಂಡಿವೆ. ಸುದೀಪ್ ಬದಲಿಗೆ ಶನಿವಾರ ಎಪಿಸೋಡ್ ಯೋಗರಾಜ್ ಭಟ್ ನಡೆಸಿಕೊಟ್ಟರೆ, ಭಾನುವಾರ ಸಂಚಿಕೆಯನ್ನು ಸೃಜನ್ ಲೋಕೇಶ್ ನಡೆಸಿಕೊಟ್ಟಿದ್ದಾರೆ. ದೊಡ್ಮನೆಗೆ ಎಂಟ್ರಿಕೊಟ್ಟ ಸೃಜನ್, ಮನೆಯ ಸದಸ್ಯರಿಗೆ ತಮ್ಮ ಸಹಸ್ಪರ್ಧಿಗಳ ಬಗ್ಗೆ ಇರುವ ಅಭಿಪ್ರಾಯ ತಿಳಿಸುವಂತೆ ಹೇಳಿದ್ದಾರೆ. ಇಲ್ಲಿ ಕಳೆದ ಸಂಚಿಕೆಯಲ್ಲಿ ಏನಾಯ್ತು ಎಂಬ ಮಾಹಿತಿಯನ್ನು ನೀಡಲಾಗಿದೆ.