X
ಹೋಮ್ ಚಲನಚಿತ್ರಗಳ ಒಳನೋಟ

ಒಂದು ಹುಡುಗಿಗೆ ದಿಂಬಿನಿಂದ ಅಲ್ಲಿ ಹೊಡಿತೀರಲ್ಲ, ನಾಚಿಕೆ ಆಗಲ್ವಾ?-ಧನರಾಜ್ ವಿರುದ್ಧ ಸಿಡಿದೆದ್ದ ಮೋಕ್ಷಿತಾ-ಅನುಷಾ

Author Sowmya Bairappa | Published: Friday, November 8, 2024, 11:08 AM [IST]

ಬಿಗ್‌ಬಾಸ್ ಕನ್ನಡ ಸೀಸನ್ ೧೧ರ ಆರಂಭದಲ್ಲಿ ಮೋಕ್ಷಿತಾ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದರು. ಯಾರ ಸುದ್ದಿಗೂ ಹೋಗದೇ ತಮ್ಮ ಆಟವನ್ನು ಆಡುತ್ತಿದ್ದರು. ಆದರೆ, ಬಾಟ್ ೨ ಲೆವೆಲ್‌ಗೆ ಹೋಗಿ ಬಂದಾಗಿನಿಂದ ರೆಬಲ್ ಆದರು. ಕಳೆದ ಸಂಚಿಕೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಕ್ಷಿತಾ ಅವರನ್ನು ಧನರಾಜ್ ಹೊರಗಿಟ್ಟದ್ದಕ್ಕೆ ಸಿಡಿದೆದ್ದಿದ್ದಾರೆ. ಧನರಾಜ್‌ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದರಿಂದಾಗಿ ಧನರಾಜ್ ವಾಶ್‌ರೂಮ್ ಬಳಿ ಕಣ್ಣೀರು ಹಾಕಿದ್ದಾರೆ.


cover image
ಧನರಾಜ್ ಕೊಟ್ಟ ಕಾರಣವೇನು?

ಕಳೆದ ಸಂಚಿಕೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಇಬ್ಬರು ಸದಸ್ಯರನ್ನು ಬಿಗ್‌ಬಾಸ್ ಟಾಸ್ಕ್‌ವೊಂದನ್ನು ನೀಡಿದ್ದರು. ಇದರ ಅನುಸಾರ, ಮನೆಯ ಸದಸ್ಯರು ಕ್ಯಾಪ್ಟನ್ಸಿ ರೇಸ್‌ಗೆ ಹೋಗಲು ಅರ್ಹತೆಯಿಲ್ಲದ ಇಬ್ಬರು ಸ್ಪರ್ಧಿಗಳ ಫೋಟೋಗಳನ್ನು ಮನೆಯಲ್ಲಿ ಇಟ್ಟಿರುವ ಬೋರ್ಡ್‌ನಲ್ಲಿ ಇಡಬೇಕು. ಆಗ ಸ್ಪರ್ಧಿಗಳು ಸಮರ್ಥನೆ ಮಾಡಿಕೊಂಡು, ತಮ್ಮ ಫೋಟೋಗಳ ಬದಲು ಬೇರೆಯವರ ಫೋಟೋ ಇಡಬಹುದಿತ್ತು. ಈ ಸಂದರ್ಭ ಧನರಾಜ್ ಮೋಕ್ಷಿತಾ ಅವರ ಫೋಟೋ ಇಟ್ಟು, ಮನೆಯ ರೂಲ್ಸ್ ಅಂತ ಬಂದಾಗ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೋಕ್ಷಿತಾ ಎಡವುತ್ತಾರೆ. ಅವರಲ್ಲಿ ಗೊಂದಲವಿರುತ್ತೆ ಎಂದರು. 

 ದಿಂಬಿನಿಂದ ಅಲ್ಲಿಗೆ ಹೊಡಿತೀರಲ್ವಾ ನಾಚಿಕೆಯಾಗಲ್ವಾ?

ಇದರಿಂದಾಗಿ ಕೋಪಗೊಂಡ ಮೋಕ್ಷಿತಾ, ಧನರಾಜ್ ವಿರುದ್ಧ ಕಿಡಿಕಾರಿದ್ರು. ನೀವು ಕ್ಯಾಪ್ಟನ್ ಆಗಲು ಅರ್ಹರೇ ಅಲ್ಲ. ಧನರಾಜ್  ಸೈಲೆಟಂ್ ಆಗಿರ್ತಾರೆ. ಕೆಲವೇ ಕೆಲವರನ್ನು ನಾಮಿನೇಟ್ ಮಾಡ್ತಾರೆ. ಅವರ ಮಾತಲ್ಲಿ ಯಾವುದೇ ತೂಕ ಇರಲ್ಲ ಎಂದರು. ಧನರಾಜ್ ಅವರು ಈ ಹಿಂದೆ ಗೌತಮಿ ಅವರಿಗೆ ದಿಂಬಿನಿಂದ ಹೊಡೆದಿದ್ದರು. ಇದಕ್ಕೆ ಗೌತಮಿ ಸಿಟ್ಟಾಗಿದ್ದರು. ಈ ವಿಚಾರವನ್ನು ಮತ್ತೆ ಎತ್ತಿದ ಮೋಕ್ಷಿತಾ, 'ಒಂದು ಹೆಣ್ಣು ಮಲಗಿರುವಾಗ ದಿಂಬು ತೆಗೆದುಕೊಂಡು ಅಲ್ಲಿಗೆ ಹೊಡಿತೀರಲ್ಲ, ನಾಚಿಕೆ ಆಗಲ್ವಾ? ನಿಮ್ಮಂಥವರು ಹೇಗೆ ಕ್ಯಾಪ್ಟನ್ ಆಗ್ತೀರಿ. ನೀವು ನೀಡುವ ಕಾರಣಗಳನ್ನು ಸರಿಯಾಗಿ ಕೊಡಿ. ನೀವು ಸೆನ್ಸಿಬಲ್ ಆಗಿ ಇಲ್ಲ ಅನ್ನೋದು ಇದರಲ್ಲೇ ಗೊತ್ತಾಗುತ್ತೆ ಅಂತ ಕೆಂಡಕಾರಿದರು. ಅವರ ಜೊತೆ ಅನುಷಾ ಕೂಡ ಧನರಾಜ್ ವಿರುದ್ಧ ಗುಡುಗಿದರು.

ಧನರಾಜ್ ಕಣ್ಣೀರು

ಮನೆಯವರ ಮಾತಿನಿಂದ ಬೇಸರಗೊಂಡ ಧನರಾಜ್ ಬಾತ್‌ರೂಂ ಬಳಿ ತೆರಳಿ ಹನುಮಂತು ಎದುರು ಕಣ್ಣೀರು ಹಾಕಿದರು. ನಾನಿನ್ನೂ ಸ್ಟ್ರಾಂಗ್ ಆಗಿಲ್ಲ ಎಂದು ಬೇಸರ ಮಾಡಿಕೊಂಡು ಅತ್ತರು. ಆಗ ಹನುಮಂತ ನೀನು ಬೇಸರ ಮಾಡಿಕೊಂಡರೆ ನನಗೂ ಬೇಸರವಾಗುತ್ತೆ ಎಂದರು. ಆಗ ಅಲ್ಲಿಗೆ ಬಂದ ಭವ್ಯಾ, ಅಳಬೇಡಿ. ನೀವು ಅತ್ತರೆ ಮತ್ತಷ್ಟು ವೀಕ್ ಮಾಡ್ತಾರೆ ಅಂತ ಸಮಾಧಾನ ಮಾಡಿದರು. ಇನ್ನು ಧರ್ಮ ಕೀರ್ತಿರಾಜ್ ಕೂಡ ತ್ರಿವಿಕ್ರಮ್ ಬಳಿ ಧನರಾಜ್‌ಗೆ ಹಾರ್ಷ್ ಆಗಿ ಮಾತನಾಡಿದರು ಎಂದರು. ಅದಕ್ಕೆ ತ್ರಿವಿಕ್ರಮ್ ಅವರು ಡಿಫೆಂಡ್ ಮಾಡಿಕೊಳ್ಳಬೇಕಿತ್ತು ಎಂದರು.


ಚೈತ್ರಾ ಅವರು ತ್ರಿವಿಕ್ರಮ್ ಮೌತ್‌ಪೀಸ್

ವಾಶ್‌ರೂಮ್ ಏರಿಯಾದಲ್ಲಿ ಕುಳಿತು ಐಶ್ವರ್ಯಾ ಹಾಗೂ ಗೋಲ್ಡ್ ಸುರೇಶ್ ಅವರು ತ್ರಿವಿಕ್ರಮ್ ಬಗ್ಗೆ ಮಾತನಾಡಿದ್ದಾರೆ. ತ್ರಿವಿಕ್ರಮ್ ಹಕ್ಕಿಗಳು ಎಂದಿರುವ ಬಗ್ಗೆ ಚರ್ಚೆ ನಡೆಸಿದ ಐಶ್ವರ್ಯಾ, ಚೈತ್ರಾ ಅವರು ತ್ರಿವಿಕ್ರಮ್ ಮೌತ್‌ಪೀಸ್ ಆಗಿದ್ದಾರೆ ಅಂದರು. ಅದಕ್ಕೆ ಗೋಲ್ಡ್ ಸುರೇಶ್ ಕೂಡ ಹೌದು ಎಂದು ತಲೆ ಅಲ್ಲಾಡಿಸಿ, ಈಗಲೂ ಹಾಗೆಯೇ ಇದ್ದಾರೆ ಎಂದರು. 

ಕ್ಯಾಪ್ಟನ್ಸಿ ರೇಸ್‌ನಲ್ಲಿ ಭವ್ಯಾ-ತ್ರಿವಿಕ್ರಮ್

ಅಂತಿಮವಾಗಿ ಕ್ಯಾಪ್ಟನ್ ರೇಸ್‌ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಉಳಿದುಕೊಂಡಿದ್ದಾರೆ. ಆದರೆ, ಬಿಗ್‌ಬಾಸ್ ಇವರಿಬ್ಬರಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡಿಲ್ಲ. ಬದಲಿಗೆ ಮನೆಯ ಸದಸ್ಯರಿಗೆ ಆಯ್ಕೆಯ ಪ್ರಕ್ರಿಯೆ ನೀಡಲಾಗಿದೆ. ಬಹುತೇಕರು ತ್ರಿವಿಕ್ರಮ್ ಅವರ ಹೆಸರು ಹೇಳಿದ್ದು, ಅವರೇ ಕ್ಯಾಪ್ಟನ್ ಆಗುವ ಸಾಧ್ಯತೆಯಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+