X
ಹೋಮ್ ಚಲನಚಿತ್ರಗಳ ಒಳನೋಟ

ಮಾನಸಾಗೆ ಮೆಚ್ಯೂರಿಟಿಯಿಲ್ಲ, ಮಂಜಣ್ಣ ಒಬ್ಬರನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡ್ತಾರೆ: ನೇರ ನಾಮಿನೇಟ್ ಮಾಡಿದ ಐಶು-ವಿಕ್ರಂ

Author Sowmya Bairappa | Published: Wednesday, October 23, 2024, 11:17 AM [IST]

ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕೆಂಬುದು ಪ್ರತಿಯೊಬ್ಬ ಸ್ಪರ್ಧಿಗಳ ಬಯಕೆಯಾಗಿರುತ್ತದೆ. ಕ್ಯಾಪ್ಟನ್ ಆದರೆ ಇಮ್ಯೂನಿಟಿ ಸಿಗುತ್ತದೆ. ಇಡೀ ಮನೆಯ ಮೇಲೆ ಹಿಡಿತ ಸಿಗುತ್ತದೆ. ಹೀಗಾಗಿ, ಸ್ಪರ್ಧಿಗಳು ಕ್ಯಾಪ್ಟನ್ ಪಟ್ಟ ಅಲಂಕರಿಸಲು ನಾನಾ ಕಸರತ್ತು ನಡೆಸುತ್ತಾರೆ. ಟಾಸ್ಕ್‌ಗಳಲ್ಲಿ ಗೆಲ್ಲಲು ಶತಪ್ರಯತ್ನ ನಡೆಸುತ್ತಾರೆ. ಈ ವಾರ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.


cover image
ದೊಡ್ಮನೆಯಲ್ಲಿ ಈ ವಾರ ಜೋಡಿ ಕ್ಯಾಪ್ಟನ್

ಬಿಗ್‌ಬಾಸ್ ಮನೆಯಲ್ಲಿ ಪ್ರತಿವಾರ ಒಬ್ಬರು ಕ್ಯಾಪ್ಟನ್ ಆಗಬೇಕೆಂಬುದು ಈವರೆಗೂ ನಡೆದುಕೊಂಡು ಬಂದ ನಿಯಮ. ಆದರೆ, ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಈ ವಾರ ಜೋಡಿ ಕ್ಯಾಪ್ಟನ್ ಮಾಡಲಾಗಿದೆ. ಬಿಗ್‌ಬಾಸ್ ನೀಡಿದ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ತ್ರಿವಿಕ್ರಮ್ ಹಾಗೂ ಐಶ್ವರ್ಯಾ ಸಿಂಧೋಗಿ ಜೋಡಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಆಗುವುದರ ಜೊತೆಗೆ ಈ ವಾರ ಮನೆಯಿಂದ ಹೊರಹೋಗಲು ಇಬ್ಬರು ಸ್ಪರ್ಧಿಗಳನ್ನು ನೇರವಾಗಿವಾಗಿ ನಾಮಿನೇಟ್ ಮಾಡಿದ್ದಾರೆ. 

ಮಂಜು ಬಗ್ಗೆ ತ್ರಿವಿಕ್ರಮ್ ಹೇಳಿದ್ದೇನು?

ಉಗ್ರಂ ಮಂಜು ಅವರನ್ನು ನಾಮಿನೇಟ್ ಮಾಡಿದ ತ್ರಿವಿಕ್ರಮ್, ನಾನು ಮೊದಲನೇ ಹಾಗೂ ಎರಡನೇ ವಾರ ನೋಡಿದಂತಹ ಮಂಜಣ್ಣ, ಲೀಡರ್ ಮಂಜಣ್ಣ, ಈ ಮೂರನೇ ವಾರ ಮಿಸ್ ಅದ್ರು ಅಂತ ಅನಿಸುತ್ತಿದೆ. ಈಗ ಅವರು ಇರುವಂತಹ ರೀತಿ, ಏನೂ ನಡೆಯದಿದ್ದರೂ, ಏನೋ ಆಗಿದೆ ಅನ್ನೋ ರೀತಿ ವರ್ತಿಸುವುದು. ಒಬ್ಬರನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡುವುದು. ಈ ರೀತಿ ಒಂದು ಕಡೆ ಕಾರ್ನರ್ ಆಗುವಂತಹ ಮಂಜಣ್ಣನನ್ನು ನಾನು ನೋಡಿರಲಿಲ್ಲ. ಅವರು ಮೊದಲಿನಂತಿರಬೇಕು. ಅದನ್ನು ನಾನು ನೋಡಬೇಕು ಎಂದು ಬಯಸುತ್ತೇನೆ. ಆ ಕಾರಣಕ್ಕೆ ಮಂಜಣ್ಣನನ್ನು ನಾಮಿನೇಟ್ ಮಾಡ್ತೀನಿ ಎಂದರು. 

ಮಾನಸ ಬಗ್ಗೆ ಐಶ್ವರ್ಯಾ ಹೇಳಿದ್ದೇನು?

ಮಾನಸ ಅವರನ್ನು ನಾಮಿನೇಟ್ ಮಾಡಿದ ಐಶ್ವರ್ಯಾ, ಮನೆಯ ಸದಸ್ಯರ ಜೊತೆ ಬೇಡದೇ ಇರುವ ವಿಚಾರಗಳಿಗಾಗಿ ಮಾನಸ ತುಂಬಾ ಸಲ ವಾಗ್ವಾದಗಳನ್ನು ನಡೆಸಿದ್ದಾರೆ. ಏನೇ ಒಳ್ಳೆಯದನ್ನು ಹೇಳುವುದಕ್ಕೆ ಹೋದರೂ ಅವರು ಅದನ್ನು ಪರ್ಸನ;್ ಆಗಿ ತೆಗೆದುಕೊಂಡು, ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಅವರು ಯಾವತ್ತೂ ಕೂಡ ಯಾವುದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಂಡಿಲ್ಲ. ಸ್ವಲ್ಪ immature ಆಗಿ ವರ್ತಿಸುತ್ತಾರೆ ಅಂತ ನನಗೆ ಅನಿಸುತ್ತೆ. ಹಾಗಾಗಿ ಅವರನ್ನು ಆಯ್ಕೆ ಮಾಡಿರುವುದಾಗಿ ಬಿಗ್‌ಬಾಸ್ ಮುಂದೆ ತಿಳಿಸಿದ್ದಾರೆ. 


ಟಾಸ್ಕ್‌ನಲ್ಲಿ ಮನುಷತ್ವ ಮರೆತ ಸ್ಪರ್ಧಿಗಳು

ನಿನ್ನೆ ನಡೆದ ಕ್ಯಾಪ್ಟನ್ಸಿ ಟಾಸ್ಕ್ ಸಂದರ್ಭದಲ್ಲಿ ಅನುಷಾ ರೈ ಅವರು ಮೈ, ಮುಖಕ್ಕೆ ಜೋರಾಗಿ ನೀರು ಎರಚುಲಾಯ್ತು. ಬಳಿಕ ದಿಂಬಿನಿಂದ ಹೊಡೆದು ಎರಡ್ಮೂರು ಬಾರಿ ಬೀಳಿಸಲಾಯಿತು. ಒಂದು ಸುತ್ತಿನ ಆಟ ಮುಗಿಯುವಾಗಲೇ ಅನುಷಾ ಅವರಿಗೆ ತುಂಬಾ ನೋವಾಗಿತ್ತು. ಹಾಗಿದ್ದರೂ ಕೂಡ ಟಾಸ್ಕ್ ಬಿಟ್ಟುಕೊಡಬಾರದೆಂದು ಆಟ ಮುಂದುವರೆಸಿದರು. ಈಗಾಗಲೇ ಅವರಿಗೆ ನೋವಾಗಿದೆ ಅಂತ ಗೊತ್ತಿದ್ದರೂ ತ್ರಿವಿಕ್ರಮ್, ಗೋಲ್ಡ್ ಸುರೇಶ್ ಹಾಗೂ ಶಿಶಿರ್ ಮತ್ತೆ ಜೋರಾಗಿ ಹೊಡೆದಿದ್ದಾರೆ. ಇದನ್ನು ಕಂಡು ಮೋಕ್ಷಿತಾ ಪೈ ಕಣ್ಣೀರು ಹಾಕಿದ್ದಾರೆ. 


ಸ್ಪರ್ಧಿಗಳ ವರ್ತನೆ ಖಂಡಿಸಿದ ಭವ್ಯಾ

ಟಾಸ್ಕ್ ವೇಳೆ ಅನುಷಾ ಅವರಿಗೆ ಜೋರಾಗಿ ಹೊಡೆದ್ದನ್ನು ಖಂಡಿಸಿದ ಭವ್ಯಾ, ಬಳಿಕ ಮನೆಯ ಸದಸ್ಯರ ಮುಂದೆ ಈ ವಿಷಯ ಚರ್ಚಿಸಿದ್ದಾರೆ. ಹುಡುಗಿಯನ್ನೇ ಟಾರ್ಗೆಟ್‌ ಮಾಡಿ ಹೊಡೆದದ್ದು ಯಾಕೆ ಅಂತ ಪ್ರಶ್ನಿಸಿದರು. ಇದಕ್ಕೆ ತ್ರಿವಿಕ್ರಮ್, ಮಂಜು ಹಾಗೂ ಶಿಶಿರ್ ವಿರೋಧ ವ್ಯಕ್ತಪಡಿಸಿದರು. ಹತ್ತನೇ ಸೀಸನ್‌ನಲ್ಲೂ ಈ ರೀತಿ ನಡೆದಾಗ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಕಣ್ಣಿಗೆ ಹಾನಿಯಾಗಿತ್ತು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+