X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡು ಹೊರಬಂದ ಸ್ಪರ್ಧಿಗಳಿವರು!

Author Sowmya Bairappa | Published: Thursday, October 17, 2024, 03:47 PM [IST]

ಬಿಗ್‌ಬಾಸ್ ಕಾರ್ಯಕ್ರಮ ವ್ಯಕ್ತಿತ್ವಗಳ ನಡೆಯುವ ಆಟ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು 100 ದಿನ ಉಳಿದು ಟ್ರೋಫಿ ಗೆಲ್ಲುವುದಕ್ಕಿಂತ, ತಮ್ಮ ವ್ಯಕ್ತಿತ್ವದಿಂದಲೇ ವೀಕ್ಷಕರ ಮನಗೆಲ್ಲುವುದು ಅಷ್ಟೇ ಮುಖ್ಯವಾಗಿರುತ್ತದೆ. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಕೇವಲ ಎರಡು ವಾರಗಳು ಕಳೆದಿವೆ. ಈ ಎರಡೇ ವಾರಕ್ಕೆ ಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ, ತಳ್ಳಾಟ, ನೂಕಾಟ ಹೆಚ್ಚಾಗಿವೆ. ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಗಲಾಟೆ, ಕಿರಿಕ್‌ಗಳು ಫ್ಯಾಮಿಲಿ ಆಡಿಯೆನ್ಸ್‌ಗೆ ಟಾಕ್ಸಿಕ್ ಅನಿಸುತ್ತಿದೆ. ದೈಹಿಕವಾಗಿ ಹಲ್ಲೆ ನಡೆಸಿ, ಬಿಗ್‌ಬಾಸ್‌ನಿಂದ ಹೊರಬಂದ ಸ್ಪರ್ಧಿಗಳ ಯಾರು ಎಂಬ ಮಾಹಿತಿ ಇಲ್ಲಿದೆ.


cover image
ಹುಚ್ಚ ವೆಂಕಟ್

ಬಿಗ್‌ಬಾಸ್ ಕನ್ನಡ ಸೀಸನ್  3ರಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ಗಮನ ಸೆಳೆದವರು ಹುಚ್ಚ ವೆಂಕಟ್. ದೊಡ್ಮನೆಗೆ ಎಂಟ್ರಿಕೊಟ್ಟಿದ್ದ ವೆಂಕಟ್, ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಎದುರಲ್ಲೇ ಸಹ ಸ್ಫರ್ಧಿ ರವಿ ಮೂರೂರ್ ಮೇಲೆ ಹಲ್ಲೆ ಮಾಡಿದ್ದರು. ಕೂಡಲೇ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರಹಾಕಲಾಗಿತ್ತು. ಇದಾದ ಬಳಿಕ ಹುಚ್ಚ ವೆಂಕಟ್ ನಾಲ್ಕನೇ ಸೀಸನ್‌ನಲ್ಲಿ ಅತಿಥಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದರು. ಈ ಸಂದರ್ಭ ಆ ಸೀಸನ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಒಳ್ಳೆ ಹುಡುಗ ಪ್ರಥಮ್ ಅವರ ಮೇಲೆ ಹಲ್ಲೆ ಮಾಡಿದ್ದರು. ಬಿಗ್‌ಬಾಸ್ ಆಯೋಜಕರು ತಕ್ಷಣ ಅವರನ್ನು ಮನೆಯಿಂದ ಹೊರ ಕರೆದುಕೊಂಡು ಬಂದಿದ್ದರು. 


 ಮತ್ತೆ ಅವಕಾಶ ಕೇಳಿದ್ದ ಹುಚ್ಚ ವೆಂಕಟ್

ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗುವ ಸಮಯದಲ್ಲಿ ಹುಚ್ಚ ವೆಂಕಟ್ ತಮಗೆ  ಮತ್ತೊಮ್ಮೆ ಬಿಗ್‌ಬಾಸ್‌ಗೆ ಬರಲು ಅವಕಾಶ ಮಾಡಿಕೊಡಿ ಅಂತ ಸುದೀಪ್ ಹಾಗೂ ಕಲರ್ಸ್ ಕನ್ನಡದವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ಮತ್ತೆ ನಾನು ಬಿಗ್‌ಬಾಸ್ ಮನೆಗೆ ಬರೋದಕ್ಕೆ ನನಗೆ ಒಂದು ಅವಕಾಶ ನೀಡಿ. ಖಂಡಿತಾ ಯಾವುದೇ ರೀತಿಯ ಗಲಾಟೆ ಮಾಡಲ್ಲ. ಎಲ್ಲಾ ಟಾಸ್ಕ್‌ಗಳನ್ನು ಮಾಡುತ್ತೇನೆ. ಪ್ಲೀಸ್ ನನಗೆ ಅವಕಾಶ ಕೊಡಿ. ಒಂದು  ದಿನಕ್ಕಾದರೂ ನಾನು ಬರುತ್ತೇನೆ. ಒಂದು ವಾರ ಅಥವಾ ಇಡೀ ಸೀಸನ್ ಇರಬೇಕು ಎಂದರೂ ನಾನು ರೆಡಿ ಎಂದಿದ್ದರು. 


ಸಂಯುಕ್ತ ಹೆಗ್ಡೆ

ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಬಿಗ್‌ಬಾಸ್ ಕನ್ನಡ ಸೀಸನ್ 5ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಆದರೆ, ದೊಡ್ಮನೆಗೆ ಎಂಟ್ರಿಕೊಟ್ಟಿದ್ದ 15 ದಿನದೊಳಗೆ ಸಹಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಬಿಗ್‌ಬಾಸ್ ಮನೆಯಿಂದ ಹೊರಹೋಗಿದ್ದರು. ಸೀಸನ್ 5ರಲ್ಲಿ ಎಂದಿನಂತೆ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿತ್ತು. ಅದರಂತೆ ಮಹಿಳಾ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಹಾಗೂ ಮಹಿಳಾ ಸ್ಪರ್ಧಿಗಳ ಬಳಿಯಿರುವ ಗೋಪುರದ ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ಸಂದರ್ಭ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದರು. ಜೊತೆಗೆ ಅವರಿಗೆ ಎರಡು ಬಾರಿ ಹೊಡೆದಿದ್ದರು. ಸಮೀರ್ ಆಚಾರ್ಯ ಕೆನ್ನೆಗೆ ಬಾರಿಸಿದ್ದಕ್ಕೆ ಸಂಯುಕ್ತ ಅವರನ್ನು ಹೊರಕಳುಹಿಸಲಾಗಿತ್ತು. 


ಲಾಯರ್ ಜಗದೀಶ್ & ರಂಜಿತ್

ಬಿಗ್‌ಬಾಸ್ ಕನ್ನಡ ಸೀಸನ್  11ರಲ್ಲಿ ಜಗದೀಶ್ ಅವರು ಬಿಗ್‌ಬಾಸ್ ಕಾರ್ಯಕ್ರಮದ ಬಗ್ಗೆ ಬಿಪ್ ಪದಗಳನನ್ನು ಬಳಸಿದ್ದರು. ಬಳಿಕ ಮನೆಯ ಸದಸ್ಯರೆಲ್ಲರೂ ಲಾಯರ್ ಜಗದೀಶ್ ಮೇಲೆ ಮುಗಿಬಿದ್ದು ಕಿಡಿಕಾರಿದ್ದರು. ಈ ಜಗಳ ಮುಂದುವರೆದು ರಂಜಿತ್ ಅವರು ಜಗದೀಶ್‌ಗೆ ಪಂಚ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಲಾಯರ್ ಜಗದೀಶ್ ಅವರನ್ನು ಹೊರಕಳುಹಿಸಲಾಗಿದ್ದು,  ಇದಕ್ಕೆ ಪೂರಕವೆಂಬಂತೆ ಜಗದೀಶ್ ಅಭಿಮಾನಿ ಜೊತೆಗೆ ತೆಗೆದುಕೊಂಡಿರುವ ಫೋಟೋ ವೈರಲ್ ಆಗ್ತಿದೆ. ಇತ್ತ ರಂಜಿತ್ ಅವರಿಗೆ ಎಚ್ಚರಿಕೆ ನೀಡಿ, ಮತ್ತೆ ದೊಡ್ಮನೆಯೊಳಗೆ ಕಳುಹಿಸಲಾಗಿದೆ ಎಂಬ ಸುದ್ದಿಯಿದೆ. ಇಂದಿನ ಸಂಚಿಕೆಯಲ್ಲಿ ಅದರ ಅಸಲಿಯತ್ತು ತಿಳಿಯಲಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+