X
ಹೋಮ್ ಚಲನಚಿತ್ರಗಳ ಒಳನೋಟ

ಸ್ವಂತ ಬಿಸಿನೆಸ್ ನಡೆಸುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಿವರು!

Author Sowmya Bairappa | Updated: Thursday, October 19, 2023, 12:46 PM [IST]

ಇತ್ತೀಚೆಗೆ ನಟ-ನಟಿಯರು ನಟನೆ ಜೊತೆಗೆ ಉದ್ಯಮದಲ್ಲೂ ತೊಡಗಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ನಟನೆ ಹೊರತಾಗಿ ಇನ್ನೊಂದು ಆದಾಯದ ಮೂಲ ಹುಡುಕಿಕೊಂಡಿರುತ್ತಾರೆ. ಸಿನಿಮಾದಲ್ಲಿ ಅಥವಾ ಸೀರಿಯಲ್‌ಗಳಲ್ಲಿ ಅವಕಾಶಗಳು ಕಡಿಮೆಯಾದಾಗ ಬ್ಯುಸಿನೆಸ್ ಅವರ ಜೀವನಕ್ಕೆ ಆಧಾರವಾಗಿರುತ್ತದೆಯೆಂಬ ದೃಷ್ಟಿಯಂತೆ ಬ್ಯುಸಿನೆಸ್‌ಗೆ ಕೈಹಾಕಿರುತ್ತಾರೆ. ಈ ಬಾರಿ ದೊಡ್ಮನೆ ಪ್ರವೇಶಿಸಿರುವ ಹಲವು ಸ್ಪರ್ಧಿಗಳು ಉದ್ಯಮಿಗಳಾಗಿದ್ದಾರೆ. ಹಾಗಾದರೆ, ಆ ಸ್ಪರ್ಧಿಗಳು ಯಾರು? ಯಾವಾ ಉದ್ಯಮ ನಡೆಸ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.


cover image
ಮೈಕಲ್ ಅಜಯ್

ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿರುವ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಈ ಹಿಂದೆ ಎಂಟಿವಿ ರೋಡೀಸ್‌ನಲ್ಲಿ ಸ್ಪರ್ಧಿಸಿ ಮೊದಲ ರನ್ನರ್ ಅಪ್ ಆಗಿದ್ದರು. ಬ್ಯಾಸ್ಕೆಟ್ ಬಾಲ್ ಆಟಗಾರನಾಗಿರುವ ಮೈಕಲ್, ಸ್ವಂತ ಬರ್ಗರ್ ಶಾಪ್ ಹೊಂದಿದ್ದಾರೆ. ಈ ಮೂಲಕ ಯಶಸ್ವಿ ಉದ್ಯಮಿ ಕೂಡ ಆಗಿದ್ದಾರೆ. 

 

ತನಿಷಾ ಕುಪ್ಪಂಡ

ದೊಡ್ಮನೆಗೆ ಎಂಟ್ರಿಕೊಟ್ಟಿರುವ ತನಿಷಾ ಕುಪ್ಪಂಡ ಕೂಡ ಯಶಸ್ವಿ ಉದ್ಯಮಿ. ಮಂಗಳಗೌರಿ ಮದುವೆ ಹಾಗೂ ಇಂತಿ ನಿಮ್ಮ ಆಶಾ ಧಾರವಾಹಿಗಳ ಮೂಲಕ ಮನೆಮಾತಾದ್ದ ತನಿಷಾಗೆ ಮೊದಲಿನಿಂದಲೂ ಬ್ಯುಸಿನೆಸ್ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿಯಿತ್ತು. ಅದರಂತೆ ಅವರೀಗ ರೆಸ್ಟೊರೆಂಟ್ ಒಂದನ್ನು ನಡೆಸುತ್ತಿದ್ದಾರೆ. ತನಿಶಾ ತಮ್ಮ ರೆಸ್ಟೊರೆಂಟ್‌ಗೆ 'ಅಪ್ಪುಸ್ ಕಿಚನ್' ಅಂತ ಹೆಸರಿಟ್ಟಿದ್ದು, ಈ ಮೂಲಕ ಉದ್ಯಮದಲ್ಲೂ ಸಕ್ಸಸ್ ಕಾಣ್ತಿದ್ದಾರೆ. 

ಗೌರೀಶ್ ಅಕ್ಕಿ

ಬಿಗ್‌ಬಾಸ್ ಕನ್ನಡ ಸೀಸನ್ 10ರಯಾಗಿರುವ ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ತಮ್ಮದೇಯಾದ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಜೊತೆಗೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸಂಸ್ಥೆ ನಡೆಸುತ್ತಿದ್ದಾರೆ. ಈ ಸಂಸ್ಥೆಗೆ ಫೌಂಡರ್, ಡೈರೆಕ್ಷರ್ ಮತ್ತು ಸಿಇಒ ಕೂಡ ಗೌರೀಶ್ ಅವರೇ ಆಗಿದ್ದಾರೆ. 

ನೀತು ವನಜಾಕ್ಷಿ

ಬಿಗ್‌ಬಾಸ್‌ ಮನೆಗೆ ಕಾಳಿಟ್ಟಿರುವ ಮಿಸ್ ಟ್ರಾನ್ಸ್ ಕ್ವೀನ್ ನೀತು ವನಜಾಕ್ಷಿ, ಟ್ಯಾಟೂ ಸ್ಟುಡಿಯೋ ಹಾಗೂ ಬ್ಯೂಟಿಪಾರ್ಲರ್ ಹೊಂದಿದ್ದಾರೆ. ಭಾರತದ ಮೊದಲ  ಟ್ರಾನ್ಸ್‌ಜೆಂಡರ್ ಟ್ಯಾಟೂ ಆರ್ಟಿಸ್ಟ್ ಇವರು. ಜೊತೆಗೆ ನೀತು ಉತ್ತರ ಕರ್ನಾಟಕ ಮೂಲದವರಾಗಿದ್ದರಿಂದ ಅಲ್ಲಿನ ಸೊಗಡನ್ನು ಇಟ್ಟುಕೊಂಡು 'ಗಮ ಗಮ' ಎಂಬ ಹೊಟೇಲ್ ಶುರು ಮಾಡಿದ್ದಾರೆ. ಈ ಮೂರು ಉದ್ಯಮಗಳನ್ನು ಯಶಸ್ಬಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. 

 

ಡ್ರೋನ್ ಪ್ರತಾಪ್

dronark aerospace ಎಂಬ ಕಂಪನಿಗೆ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ಪ್ರತಾಪ್ ಸಿಇಒ ಹಾಗೂ ಫೌಂಡರ್. ಡ್ರೋನ್ ಪ್ರತಾಪ್ ಅವರ ಕಂಪನಿಯಲ್ಲಿ ತಯಾರಿಸಿರುವ ಡ್ರೋನ್‌ಗಳು ಕೃಷಿ ಭೂಮಿಗೆ ಔಷಧ ಸಿಂಪಡಣೆ ಮಾಡಲು ಉಪಯೋಗವಾಗಲಿದೆಯಂತೆ. ಪ್ರತಾಪ್ ಆಗಾಗ ರೈತರ ಕೃಷಿ ಭೂಮಿಗೆ ತೆರಳಿ ತಮ್ಮ ಡ್ರೋನ್ ಬಗ್ಗೆ ಮಾಹಿತಿ ನೀಡಿರುವುದುಂಟು. 

ವರ್ತೂರ್ ಸಂತೋಷ್

ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಪಡೆದಿರುವ ವರ್ತೂರ್ ಸಂತೋಷ್, ಇತ್ತೀಚೆಗೆ ಟ್ಯೂಮೆಟೋ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಮಾಡಿದ್ದರು. ಜೊತೆಗೆ ಇವರು ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೂಡ ಆಗಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+