X
ಹೋಮ್ ಚಲನಚಿತ್ರಗಳ ಒಳನೋಟ

ಹಸಿದವರು ಅಲ್ಲಾಡ್ತಿದ್ರು, ಉಂಡವ್ರು ಉಳ್ಳಾಡ್ತಿದ್ರು ಎಂದ ಡ್ರೋನ್ ಪ್ರತಾಪ್: ಇತ್ತ ಸ್ನೇಹಿತ್ ಮಾತಿಗೆ ಕಣ್ಣೀರಿಟ್ಟ ಭಾಗ್ಯಶ್ರೀ

Author Sowmya Bairappa | Published: Saturday, November 18, 2023, 01:07 PM [IST]

ಬಿಗ್‌ಬಾಸ್‌ ಸೀಸನ್ 10ರ ಆಎನೇ ವಾರದ ಕ್ಯಾಪ್ಟನ್ ಆಗಿ ಕಾರ್ತಿಕ್ ಮಹೇಶ್ ಆಯ್ಕೆಯಾಗಿದ್ದಾರೆ. ಸತತವಾಗಿ ಪ್ರತಿವಾರ ನಾಮಿನೇಟ್ ಆಗುತ್ತಿದ್ದ, ಕಾರ್ತಿಕ್ ಈ ವಾರ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ. ಈ ವಾರದ ಎಲಿಮಿನೇಷನ್‌ನಲ್ಲಿ ಬಚಾವ್ ಆದರೆ ಮುಂದಿನ ವಾರದ ನಾಮಿನೇಷನ್‌ನಿಂದ ಸೇಫ್ ಆಗುತ್ತಾರೆ. ಇನ್ನು ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಮತ್ತೊಂದು ಗಾದೆ ಹೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇನ್ನೊಂದೆಡೆ ಸ್ನೇಹಿತ್ ಮಾತಿಗೆ ಭಾಗ್ಯಶ್ರೀ ಕಣ್ಣೀರು ಹಾಕಿದ್ದಾರೆ.


cover image
ಡ್ರೋನ್ ಪ್ರತಾಪ್ ಗಾದೆ

ಪ್ರತಾಪ್ ಡೊಡ್ಮನೆಯಲ್ಲಿ ಗಾದೆ ಹೇಳುತ್ತಲೇ ಇರುತ್ತಾರೆ. ಈ ಮೊದಲು ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ ಎಂದಿದ್ದಾರೆ. ಈಗ ಮತ್ತೊಂದು ಗಾದೆ ಹೇಳಿದ್ದಾರೆ. ಈ ವಾರ ಮನೆಯವರಿಂದ ಬಂದ ಲೆಟರ್ ಪಡೆಯಲು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ತುಕಾಲಿ ಸಂತುಗೆ ಪತ್ರ ಸಿಕ್ಕಿತ್ತು. ಆದರೆ, ಡ್ರೋನ್ ಪ್ರತಾಪ್‌ಗೆ ಸಿಕ್ಕಿರಲಿಲ್ಲ. ಸಂತೋಷ್ ಪತ್ರ ಸಿಕ್ಕ ಖುಷಿಯಲ್ಲಿ ಸುತ್ತಾಡೋಕೆ ಹೋಗೋಣ ಎಂದಿದ್ದಾರೆ. ಆಗ ಪ್ರತಾಪ್, ಹಸಿದವರು ಅಲ್ಲಾಡ್ತಿದ್ರು, ಉಂಡವ್ರು ಉಳ್ಳಾಡ್ತಿದ್ರು' ಎಂದಿದ್ದಾರೆ. ಇದನ್ನು ಕೇಳಿದ ಎಲ್ಲರೂ ನಕ್ಕಿದ್ದಾರೆ.

 

ಭಾಗ್ಯಶ್ರೀಯನ್ನು ಟಾರ್ಗೆಟ್ ಮಾಡಿದ ಸ್ನೇಹಿತ್

ದೊಡ್ಮನೆಯಲ್ಲಿ ಸ್ಪರ್ಧಿಗಳು ಪರಸ್ಪರ ಟಾರ್ಗೆಟ್ ಆರಂಭಿಸಿದ್ದಾರೆ. ಸ್ನೇಹಿತ್ ಅವರು ಸದಾ ಭಾಗ್ಯಶ್ರೀಯನ್ನು ಟಾರ್ಗೆಟ್ ಮಾಡುತ್ತಲೇ ಇರುತ್ತಾರೆ. ಇದೀಗ  ಟಾಸ್ಕ್‌ನಲ್ಲಿ ಭಾಗ್ಯಶ್ರೀ ಅವರು ನನಗೆ ಬರುತ್ತೆ ಅಂತ ಹೋದ್ರು. ಆದರೆ, ಸಮಯದ ವಿಚಾರಕ್ಕೆ ಸೋತ್ರು. ಮನೆಯ ವಿಚಾರಕ್ಕೆ ಬಂದರೆ ಬೇಡದೇ ಇರುವ ವಿಚಾರದಲ್ಲಿ ಮೂಗು ತೋರಿಸುವುದು ನನಗೆ ಇಷ್ಟವಾಗಿಲ್ಲ ಎಂದಿದ್ದಾರೆ. ಇದಕ್ಕೆ ಭಾಗ್ಯಶ್ರೀ ಬೇಡದೇ ಇರುವ ವಿಚಾರದಲ್ಲಿ ಮೂಗು ತೋರಿಸುವುದು ಅಂದರೆ ಏನರ್ಥ? ಮನೆಯವರ ಮುಂದೆ ಹೇಳಿ. ಇನ್ನೊಬ್ಬರ ಜೀವನದಲ್ಲಿ ಎಂದು ಹೇಳಬಾರದು. ನನಗೆ ಎಂದು ಕನ್ನಡದಲ್ಲಿ ಒಂದು ವರ್ಡ್ ಇದೆ. ಏನಾದರೂ ಒಂದು ಪಾಟಿಂಟ್‌ಔಟ್ ಮಾಡಬೇಕು ಅಂತ ಹುಡುಕುತ್ತಿದ್ದರೆ, ದಯವಿಟ್ಟು ಬಿಟ್ಟು ಬಿಡಿ ಎಂದರು.

ಹೌದು ಪಾಯಿಂಟೌಟ್ ಮಾಡ್ತೀನಿ

ಭಾಗ್ಯಶ್ರೀ ಪ್ರಶ್ನೆಗೆ ಉತ್ತರಿಸಿದ ಸ್ನೇಹಿತ್, ನನ್ನ ಜೀವನದಲ್ಲಿ ನೀವು ಮೂಗು ತೋರಿಸಿದ್ದಕ್ಕೆ ನಾನು ಹೇಳಿದ್ದು. ನಿಮಗೆ ಅದನ್ನು ತೆಗೆದುಕೊಳ್ಳುವುದಕ್ಕೆ ಆಗಿಲ್ಲ ಅಂದ್ರೆ ಬಿಟ್ಟಾಕಿ. ಇನ್ನೊಬ್ಬರ ಜೀವನ ಅಂದ್ರೆ ನನ್ನ ಜೀವನ. ನಾನು ಸೆಂಟೆನ್ಸ್‌ನ ಹೇಗೆ ಬೇಕಾದರೂ ಫಾಮ್  ಮಾಡಿಕೊಳ್ಳುತ್ತೇನರ. ಹೌದು ಪಾಯಿಂಟೌಟ್ ಮಾಡ್ತೀನಿ ಎಂದರು. ಇದಕ್ಕೆ ಭಾಗ್ಯಶ್ರೀ ಕಣ್ಣೀರು ಹಾಕಿದ್ದಾರೆ.

 

ನಮ್ರತಾ ಮುಂದೆ ಅಸಲಿ ಸತ್ಯ

ಇತ್ತ ನಮ್ರತಾ ಬಳಿ ಸ್ನೇಹಿತ್ ಅಸಲಿ ಸತ್ಯ ಹೊರಹಾಕಿದ್ದಾರೆ. ಕಾರ್ತಿಕ್ ಜೊತೆ ನಮ್ರತಾ ಡೇಟ್‌ಗೆ ಹೋಗ್ತಾರಂತೆ ಅಂತ ಭಾಗ್ಯಶ್ರೀ ನನ್ನತ್ರ ಹೇಳಿದ್ರು. ಅದು ನನ್ನನ್ನು ಉರಿಸೋಕೆ ಅಂತ ಹೇಳಿದ್ದು ಎಂದರು. ಅದಕ್ಕೆ ನಮ್ರತಾ, ಈ ಬಗ್ಗೆ ನಾವು ಕಾಮಿಡಿ ಮಾಡ್ತೀವಿ. ಹಾಗೆಯೇ ಅವರೂ ಕಾಲು ಎಳೆದಿದ್ದಾರೆ. ಅದರಲ್ಲೇನಿದ? ನಿಮಗೆ ಅದಕ್ಕಿಂತ ಮುಂಚೆಯೇ ಅವರ ಜೊತೆ ಸಮಸ್ಯೆಯಿದೆ. ಅವರ ಜೊತೆ ಮಾತಾಡಿ ಬಗೆಹರಿಸಿಕೊಳ್ಳಿ ಎಂದರು. 

ಈ ವಾರ ಹೊರಹೋಗೋದ್ಯಾರು?

ಕಳೆದ ವಾರ ಬಿಗ್‌ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಿರಲಿಲ್ಲ. ಈ ವಾರ ಒಬ್ಬರು ದೊಡ್ಮನೆಯಿಂದ ಹೊರಹೋಗೋದು ಪಕ್ಕಾ ಆಗಿದ್ದು, ನಾಮಿನೇಟ್ ಆಗಿರುವ ವಿನಯ್ ಗೌಡ, ನಮ್ರತಾ, ತನಿಷಾ ಕುಪ್ಪಂಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್, ನೀತು ಹಾಗೂ ಭಾಗ್ಯಶ್ರೀ ಪೈಕಿ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+