ಚಲನಚಿತ್ರಗಳ ಒಳನೋಟ
ಬಿಗ್ಬಾಸ್ ಕನ್ನಡ ಸೀಸನ್ ೧೦ರ ಸ್ಪರ್ಧಿಯಾಗಿ ಬಂದಿದ್ದ ವರ್ತೂರು ಸಂತೋಷ್, ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರಬರುವ ನಿರ್ಧಾರ ಮಾಡಿದ್ದರು. ಐದನೇ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ವರ್ತೂರು ಅವರನ್ನು ಪ್ರೇಕ್ಷಕರು ಲಕ್ಷಾಂತರ ವೋಟ್ಗಳನ್ನು ನೀಡಿ ಸೇಫ್ ಮಾಡಿದ್ದರು. ಆದರೂ ಕೂಡ ನಾನು ಹೋಗಲೇಬೇಕು ಅಂತ ವರ್ತೂರು ಸಂತೋಷ್ ಪಟ್ಟು ಹಿಡಿದಿದ್ದರು. ಅಮ್ಮನ ಆಗಮನದ ನಂತರ ಬಿಗ್ಬಾಸ್ ಮನೆಯಲ್ಲೇ ಉಳಿಯುವ ನಿರ್ಧಾರ ಮಾಡಿದ್ದಾರೆ. ಇಲ್ಲಿ ವರ್ತೂರು ಸಂತೋಷ್ ದೊಡ್ಮನೆಯಿಂದ ಹೊರಹೋಗಲು ನಿರ್ಧಾರ ಮಾಡಿದ್ದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ.