X
ಹೋಮ್ ಚಲನಚಿತ್ರಗಳ ಒಳನೋಟ

ವರ್ತೂರು ಸಂತೋಷ್ ಮನೆಯಿಂದ ಹೊರಗಡೆ ಹೋಗಲೇಬೇಕು ಎನ್ನಲು ಇಲ್ಲಿವೆ ಕಾರಣಗಳು!

Author Sowmya Bairappa | Published: Tuesday, November 14, 2023, 10:54 AM [IST]

ಬಿಗ್‌ಬಾಸ್ ಕನ್ನಡ ಸೀಸನ್ ೧೦ರ ಸ್ಪರ್ಧಿಯಾಗಿ ಬಂದಿದ್ದ ವರ್ತೂರು ಸಂತೋಷ್, ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರಬರುವ ನಿರ್ಧಾರ ಮಾಡಿದ್ದರು. ಐದನೇ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ವರ್ತೂರು ಅವರನ್ನು ಪ್ರೇಕ್ಷಕರು ಲಕ್ಷಾಂತರ ವೋಟ್‌ಗಳನ್ನು ನೀಡಿ ಸೇಫ್ ಮಾಡಿದ್ದರು. ಆದರೂ ಕೂಡ ನಾನು ಹೋಗಲೇಬೇಕು ಅಂತ ವರ್ತೂರು ಸಂತೋಷ್ ಪಟ್ಟು ಹಿಡಿದಿದ್ದರು. ಅಮ್ಮನ ಆಗಮನದ ನಂತರ ಬಿಗ್‌ಬಾಸ್‌ ಮನೆಯಲ್ಲೇ ಉಳಿಯುವ ನಿರ್ಧಾರ ಮಾಡಿದ್ದಾರೆ. ಇಲ್ಲಿ ವರ್ತೂರು ಸಂತೋಷ್ ದೊಡ್ಮನೆಯಿಂದ ಹೊರಹೋಗಲು ನಿರ್ಧಾರ ಮಾಡಿದ್ದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ.


cover image
ಹುಲಿ ಉಗುರು ಪ್ರಕರಣ

ವರ್ತೂರ್ ಸಂತೋಷ್ ಬಿಗ್‌ಬಾಸ್‌ ಮನೆಗೆ ಬರುವಾಗ ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ವನ್ಯಜೀವಿ ಕಾಯಿದೆ ಪ್ರಕಾರ ಇದು ತಪ್ಪು. ಈ ಕುರಿತು ಸಂತೋಷ್ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಹಾಗಾಗಿ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರ ಕರೆತಂದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ನಂತರ ಜಾಮೀನು ಪಡೆದು ಹೊರಬಂದ ವರ್ತೂರು ಸಂತೋಷ್, ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದರು. ಆದರೆ, ಅವರು ದೈಹಿಕವಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದರೂ ಕೂಡ ಮಾನಸಿಕವಾಗಿ ಆ ವಿಷಯದ ಬಗ್ಗೆ ಹೆಚ್ಚು ಯೋಚಿಸುತ್ತಿದ್ದರು.

ತುಂಬಾ ಕಾಡುತ್ತಿರುವ ವಿಷಯ

ಇನ್ನು ನೋವಲ್ಲಿರುವ ಸಂತೋಷ್‌ಗೆ ಸಮಾಧಾನ ಮಾಡಲು ಕಳೆದ ಸಂಚಿಕೆಯಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ನ ನಟಿ ಸುಷ್ಮಾ ರಾವ್ ಬಿಗ್‌ಬಾಸ್ ಮನೆಗೆ ಬಂದಿದ್ದರು. ಈ ವೇಳೆ ನೋವು ತೋಡಿಕೊಂಡ ವರ್ತೂರು, ಹೊರಗಡೆ ಏನು ನಡೆಯಿತೋ ಅದು ತುಂಬಾ ಕಾಡುತ್ತಿದೆ. ನಾನು ಯಾರನ್ನೂ ಮೀಟ್ ಮಾಡೋಕೆ ಆಗಲಿಲ್ಲ. ಇಷ್ಟೆಲ್ಲಾ ವೋಟುಗಳು ಬಂದರೂ ಹೊರಗಡೆ ಹೋಗೋಕೆ ನಾನು ಹುಚ್ಚನಲ್ಲ. ಇಲ್ಲಿ ಎಲ್ಲರೂ ಬೇರೆ-ಬೇರೆ ರಂಗದಿಂದ ಬಂದಿದ್ದಾರೆ. ಈ ವಾತವಾರಣದಲ್ಲಿರಲು ಇಷ್ಟವಾಗುತ್ತಿಲ್ಲ. ನನಗೆ ಆ ಒಂದು ವಾರವನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 

 

ಸ್ಪರ್ಧಿಗಳ ಟಾರ್ಗೆಟ್

ವರ್ತೂರು ಹುಲಿ ಉಗುರು ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಉಳಿದ ಸ್ಪರ್ಧಿಗಳು ಎರಡು ವಾರ ಅವರನ್ನೇ ಟಾರ್ಗೆಟ್ ಮಾಡಿದ್ದರು. ಇದು ಅವರನ್ನು ಇನ್ನಷ್ಟು ನೋಯಿಸಿತ್ತು.  ವರ್ತೂರು ಸಂತೋಷ್‌ ಮನೆಯಿಂದ ಹೊರಹೋಗಲು ನಿರ್ಧರಿಸಿದ್ದರಿಂದ ಉಳಿದ ಸ್ಪರ್ಧಿಗಳು ಅವರ ಮನವೊಲಿಸಲು ಯತ್ನಿಸಿದರು.  ಈ ವೇಳೆ ಪ್ರತಿಕ್ರಿಯಿಸಿದ ವರ್ತೂರು, ಯಾಕೆ ನಾನು ಟಾಸ್ಕ್ ಆಡದೆ ನೀವೂ ಗೆದ್ದು ಬಿಟ್ಟಿದ್ದೀರಾ. ಯಾವಾಗಲೂ ಅದನ್ನೇ ಹೇಳುತ್ತೀರಾ. ನಿಮ್ಮ ಜೊತೆ ನಾನು ಇರುವುದಕ್ಕೆ ಆಗಲ್ಲ ಎಂದಿದ್ದರು. ಇಲ್ಲಿ ಒಂದೊಂದಕ್ಕೂ ಮಾತನಾಡುವುದು. ಸಕ್ಕರೆ ತಿಂದರೂ ಮಾತನಾಡುತ್ತಾರೆ. ಇವತ್ತು ಅಷ್ಟು ಲಕ್ಷ ಜನ ವೋಟ್ ಹಾಕಿದ್ದಾರೆ. ಇಲ್ಲಿಯೇ ಇದ್ದರೆ ಅವರಿಗೆ ಮತ್ತೆ ಮೋಸ ಮಾಡಿದ ಹಾಗೇ ಆಗುತ್ತೆ‌. ನನ್ನ ಆಚೆ ಕಡೆ ನೋಡಿ ಗೌರವ ಕೊಟ್ಟು ಕರೆಸಿಕೊಂಡು ಬಂದಿದ್ದಾರೆ. ಮೂರು ತಿಂಗಳು ಇದ್ದು ಬಾ ಅಂತ ಕಳುಹಿಸಿದ್ದರು. ಆದರೆ,ಇಲ್ಲಿ ಒಂದು ದಿನ ಇರುವುದಕ್ಕೂ ಆಗುತ್ತಿಲ್ಲ ಎಂದಿದ್ದರು. 

 

ನನ್ನ ಜೊತೆ ನಿಂತವರನ್ನು ಬಿಟ್ಟು, ನಾನಿಲ್ಲಿ ಸೇಫ್ ಆಗಿದ್ದೀನಿ

ಹುಲಿ ಉಗುರು ಪ್ರಕರಣದಿಂದ ಸಾಕಷ್ಟು ನೊಂದಿದ್ದ ವರ್ತೂರು, ಕಿಚ್ಚನ ಬಳಿ ಜನರಿಂದಲೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ಅವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅವರಿಗೆ ಧನ್ಯವಾದಗಳು. ಆದರೆ, ನನಗೆ ಇಲ್ಲಿರಲು ಆಗುತ್ತಿಲ್ಲ. ನಾನು ಬಿಗ್‌ಬಾಸ್‌ ಮನೆಗೆ ಮೊದಲು ಬಂದಾಗ ಇದ್ದ ಮನಸ್ಥಿತಿಗೂ, ಹೊರಗೆ ಹೋಗಿ ಬಂದಾಗ ಇರುವ ಮಸ್ಥಿತಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ಹೊರಗಡೆ ಒಂದು ಘಟನೆ ನಡೆದ ನಂತರ ಇಲ್ಲಿಗೆ ಬಂದು ಆಡುವುದಕ್ಕೆ ಆಗುತ್ತಿಲ್ಲ. ನನ್ನ ಜೊತೆಗೆ ನಿಂತವರನ್ನು ಹೊರಗಡೆ ಬಿಟ್ಟು, ಇಲ್ಲಿ ಬಂದು ನಾನು ಸೇಫ್ ಆಗಿದ್ದೀನಿ ಅಂತ ನನಗೆ ಅನಿಸುತ್ತಿದೆ ಎಂದಿದ್ದರು.  ಇದು ಕೂಡ ಅವರು ಮನೆಯಿಂದ ಹೊರಹೋಗಲು ನಿರ್ಧರಿಸಲು ಪ್ರಮುಖ ಕಾರಣವಾಗಿತ್ತು.

 

ಮದುವೆ ಪೋಟೋ ವೈರಲ್

ಇತ್ತ ವರ್ತೂರು ಸಂತೋಷ್ ಅವರದ್ದು ಎನ್ನಲಾದ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಟ್ರೋಲ್‌ ಪೇಜ್‌ಗಳಲ್ಲಿ ಫೋಟೋಗಳು ಹರಿದಾಡುತ್ತಿದ್ದು, ಎಸ್ ಜಯಶ್ರೀ ಎಂಬುವವರನ್ನು ವರ್ತೂರು ಸಂತೋಷ್ ವಿವಾಹವಾಗಿ್ದಾರೆ ಅಂತ ಹೇಳಲಾಗಿದೆ. ಮೂಹೂರ್ತ ಹಾಗೂ ಆರತಕ್ಷತೆ ಫೋಟೋಗಳು ವೈರಲ್ ಆಗುತ್ತಿವೆ. ಈ ಬಗ್ಗೆ ಯಾರಿಗೂ ಕ್ಲಾರಿಟಿ ಇಲ್ಲ. 

ಎಂಗೇಜ್‌ಮೆಂಟ್ ಆಗಲಿದೆ ಎಂದಿದ್ದ ರಕ್ಷಕ್

ವರ್ತೂರು ಸಂತೋಷ್ ಅವರಿಗೆ ಅಂತ ಹೊರಗಡೆ ಹುಡುಗಿ ಇದ್ದಾರೆ. ಬಿಗ್‌ಬಾಸ್ ಮನೆಯಿಂದ ಹೋದ್ಮೇಲೆ ಅವರ ನಿಶ್ಚಿತಾರ್ಥ ನಡೆಯಲಿದೆ. ಬಿಗ್‌ಬಾಸ್ ಮನೆಯಲ್ಲಿ ತಮಾಷೆಗಾಗಿ ವರ್ತೂರು ಸಂತೋಷ್ ಮತ್ತು ತನಿಷಾ ಅವರನ್ನು ರೇಗಿಸುತ್ತಿದ್ದೆವು. ಅವರಿಬ್ಬರ ನಡುವೆ ಏನು ಇಲ್ಲ ಅಂತ ರಕ್ಷಕ್ ಬುಲೆಟ್ ಸಂದರ್ಶನವೊಂದರಲ್ಲಿ ಹೇಳಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+